ಕೆಲಸ ಮಾಡಿ ಇಲ್ಲವೇ ಜನರೇ ನಿಮಗೆ ಝಾಡಿಸುತ್ತಾರೆ: RTO ಅಧಿಕಾರಿಗಳಿಗೆ ಗಡ್ಕರಿ ಎಚ್ಚರಿಕೆ
Team Udayavani, Aug 18, 2019, 2:39 PM IST
ನಾಗ್ಪುರ: ಜನರ ಸಮಸ್ಯೆಗಳನ್ನು ಕ್ಲಪ್ತ ಸಮಯಕ್ಕೆ ಅವರನ್ನು ಸತಾಯಿಸದೇ ಮಾಡಿಕೊಡದೇ ಹೋದಲ್ಲಿ ಅವರ ಸಿಟ್ಟನ್ನು ಎದುರಿಸಲು ಸಿದ್ಧರಾಗಿರಿ ಎಂದು ಕೇಂದ್ರ ಸಾರಿಗೆ ಮತ್ತು ಅತೀ ಸಣ್ಣ, ಸಣ್ಣ ಹಾಗೂ ಮಧ್ಯಮ ಕೈಗಾರಿಕಾ ಸಚಿವ ನಿತಿನ್ ಗಡ್ಕರಿ ಅವರು ತಮ್ಮ ಲೋಕಸಭಾ ಕ್ಷೇತ್ರದ ಸಾರಿಗೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಸಾರಿಗೆ ಇಲಾಖೆಯಲ್ಲಿ ಬೇರುಬಿಟ್ಟಿರುವ ಭ್ರಷ್ಟಾಚಾರ ವ್ಯವಸ್ಥೆಯನ್ನು ಉಲ್ಲೇಖಿಸಿದ ಸಚಿವ ಗಡ್ಕರಿ ಅವರು ನೀವೆಲ್ಲರೂ ಸರಕಾದ ನೌಕರರು ಎನ್ನುವುದನ್ನು ಮರೆಯಬೇಡಿ ಮತ್ತು ನೀವು ಮಾಡುವ ಇಂತಹ ಭ್ರಷ್ಟಾಚಾರ ಕೆಲಸಗಳಿಗೆ ನಾನು ಜನರಿಗೆ ಉತ್ತರ ಕೊಡಬೇಕಾಗುತ್ತದೆ ಎಂದು ಕಿಡಿಕಾರಿದರು.
ಜನರ ಕೆಲಸ ಮಾಡಿಕೊಡುವ ವಿಚಾರದಲ್ಲಿ ನೀವು ಹೀಗೆಯೇ ಅವರನ್ನು ಸತಾಯಿಸುತ್ತಿದ್ದರೆ ನಿಮ್ಮ ಜನ್ಮ ಜಾಲಾಡುವಂತೆ (ದುಲಾಯಿ ಕರೋ) ನಾನೇ ಜನರಿಗೆ ಕರೆ ಕೊಡುತ್ತೇನೆ ಎಂದೂ ಸಹ ಸಚಿವ ಗಡ್ಕರಿ ಅವರು ಇದೇ ಸಂದರ್ಭದಲ್ಲಿ ಗಂಭೀರವಾದ ಎಚ್ಚರಿಕೆಯನ್ನು ಅಧಿಕಾರಿ ವರ್ಗಕ್ಕೆ ನೀಡಿದರು.
‘ಯಾಕೆ ನಮ್ಮಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ? ಯಾಕೆ ಈ ಇನ್ ಸ್ಪೆಕ್ಟರ್ ಗಳು ಲಂಚ ತೆಗೆದುಕೊಳ್ಳುತ್ತಾರೆ? ಇವತ್ತು ನಾನು ನಿಮ್ಮ ಎದುರಲ್ಲೇ ಹೆಳುತ್ತಿದ್ದೇನೆ, ನೀವೆಲ್ಲಾ ಸರಕಾರಿ ನೌಕರರು, ನಾನು ಜನರಿಂದ ಆಯ್ಕೆಯಾದವನು. ನಾನು ಜನರಿಗೆ ಉತ್ತರ ನೀಡಬೇಕಾಗಿದೆ. ಒಂದುವೇಳೆ ನೀವು ಕಳ್ಳಕೆಲಸ ಮಾಡಿದರೆ ನಾನು ನಿಮ್ಮನ್ನು ‘ಕಳ್ಳ’ ಎಂದೇ ಕರೆಯುತ್ತೇನೆ’ ಎಂದು ಸಚಿವ ಗಡ್ಕರಿ ಅವರು ಗರಂ ಆದರು.
#WATCH Nitin Gadkari at Laghu Udyog Bharti convention in Nagpur y’day: Aaj mere yahan RTO office ki meeting huyi, aise hi gadbadiyan karte hain, maine kaha ye 8 din mein suljhao nahi to main logon ko kahoonga kayeda haath mein lo aur dhulai karo..logon ko taklif nahi honi chahiye pic.twitter.com/yAoRDqko0V
— ANI (@ANI) August 18, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ