ಚಲಿಸುವ ಬಸ್ಸಿನಲ್ಲಿ ಹುಡುಗಿ ಎದುರು ತರುಣನಿಂದ ಹಸ್ತಮೈಥುನ
Team Udayavani, Nov 21, 2018, 4:07 PM IST
ಹೊಸದಿಲ್ಲಿ : ಚಲಿಸುವ ಬಸ್ಸಿನಲ್ಲಿ ಕಾಮೋದ್ರಿಕ್ತ ತರುಣನೊಬ್ಬ ಹುಡುಗಿಯೋರ್ವಳ ಮುಂದೆ ಹಸ್ತಮೈಥುನ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಹುಡುಗಿಯು ಬಸ್ಸಿನಲ್ಲಿ ಕಪಶೇಡಾದಿಂದ ವಸಂತ್ ಕುಂಜ್ ಗೆ ಪ್ರಯಾಣಿಸುತ್ತಿದ್ದಳು. ಮಹಿಳೆಯರ ಸಾಲಿನ ಆಸನದಲ್ಲಿ ಕುಳಿತಿದ್ದ ತನ್ನ ಮುಂದೆಯೇ ಆರೋಪಿ ತರುಣ ನಿರ್ಲಜ್ಜನಾಗಿ ಹಸ್ತಮೈಥುನ ಮಾಡಿಕೊಂಡ ಎಂದು ಹುಡುಗಿಯ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಹೇಳಿದ್ದಾಳೆ.
“ನಾನು ಸಿಟ್ಟಿನಿಂದ ಗದರಿಸಿದ ಹೊರತಾಗಿಯೂ ಆತ ತನ್ನ ಕೃತ್ಯ ಮುಂದುವರಿಸಿದ; ಆಗ ನಾನು ಆತನಿಗೆ ಎರಡು ಬಾರಿಸಿದೆ’ ಎಂದು ಹುಡುಗಿಯು ಹೇಳಿದ್ದಾಳೆ.
“ಇಷ್ಟೆಲ್ಲ ನಡೆದರೂ ಬಸ್ಸಿನಲ್ಲಿದ್ದ ಯಾರೂ ನನ್ನ ನೆರವಿಗೆ ಬರಲಿಲ್ಲ; ನಾನು ಆರೋಪಿ ತರುಣನನ್ನು ಹೊಡೆದಾಗಲೂ ಯಾರೂ ಕೂಡ ಏಕೆ, ಏನು ಎಂದು ಪ್ರಶ್ನಿಸಲಿಲ್ಲ. ಎಲ್ಲವನ್ನೂ ನಾನು ಮಾಡಬೇಕಾಯಿತು” ಎಂದು ಹುಡುಗಿ ಹೇಳಿದ್ದಾಳೆ.
ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಹುಡುಗಿ ಹೇಳಿದ್ದಾಳೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ