ಹುದ್ದೆ ಒಲ್ಲದ ವೈಎಸ್ಸಾರ್ ಪಕ್ಷ
Team Udayavani, Jun 24, 2019, 5:30 AM IST
ಹೊಸದಿಲ್ಲಿ: ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್ಮೋಹನ ರೆಡ್ಡಿ ನೇತೃತ್ವದ ವೈ.ಎಸ್.ಆರ್.ಕಾಂಗ್ರೆಸ್ ಪಕ್ಷ ಲೋಕಸಭೆಯಲ್ಲಿನ ಡೆಪ್ಯುಟಿ ಸ್ಪೀಕರ್ ಹುದ್ದೆ ಸ್ವೀಕರಿಸದೇ ಇರುವ ಸಾಧ್ಯತೆಯೇ ಅಧಿಕ.
ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವುದನ್ನೇ ಚುನಾವಣೆಯಲ್ಲಿ ಪ್ರಧಾನವಾಗಿ ಪ್ರಸ್ತಾವಿಸಿ ಗೆದ್ದಿರುವ ಜಗನ್ಮೋಹನ ರೆಡ್ಡಿಗೆ ಹುದ್ದೆ ಸ್ವೀಕರಿಸಿದರೆ ಬಿಜೆಪಿ ಜತೆಗೆ ಕೈಜೋಡಿಸಿದ ಕಳಂಕ ತಟ್ಟುತ್ತದೆ ಎಂಬ ಅಳುಕು ಇದೆ. 25 ಕ್ಷೇತ್ರಗಳ ಪೈಕಿ 22ರಲ್ಲಿ ವೈ.ಎಸ್.ಆರ್. ಕಾಂಗ್ರೆಸ್ ಗೆದ್ದಿದೆ. ಹೀಗಾಗಿ, ಅದು ಲೋಕ ಸಭೆಯಲ್ಲಿ ನಾಲ್ಕನೇ ಅತಿದೊಡ್ಡ ಪಕ್ಷ. ಹುದ್ದೆ ಬೇಡವೆನ್ನುವ ನಿರ್ಧಾರವನ್ನು ಬಿಜೆಪಿಗೆ ಈಗಾಗಲೇ ತಿಳಿಸಲಾಗಿದೆ ಎಂದು ಆ ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ.