ಜಾಕೀರ್ ನಾಯ್ಕ ಬಿಕ್ಕಟ್ಟು
Team Udayavani, Jul 14, 2018, 6:00 AM IST
ಮುಂಬೈ: ಕೇರಳ ಮೂಲದ ವಿವಾದಾತ್ಮಕ ಧಾರ್ಮಿಕ ಮುಖಂಡ ಜಾಕೀರ್ ನಾಯ್ಕ ಗಡಿಪಾರು ವಿಚಾರದಲ್ಲಿ ಮಲೇಷ್ಯಾ ಸರ್ಕಾರದಲ್ಲೇ ಬಿಕ್ಕಟ್ಟು ಉಂಟಾಗಿದೆ.
ಜಾಕೀರ್ನನ್ನು ಭಾರತಕ್ಕೆ ಗಡಿಪಾರು ಮಾಡಲ್ಲವೆಂಬ ಅಲ್ಲಿನ ಪ್ರಧಾನಿ ಮಹತೀರ್ ಮೊಹಮ್ಮದ್ ಹೇಳಿಕೆಯನ್ನು ಅವರ ಸಂಪುಟದ ಇಬ್ಬರು ಸಚಿವರೇ ತಿರಸ್ಕರಿಸಿದ್ದಾರೆ. ಸಂಪುಟದಲ್ಲಿ ಚರ್ಚೆಯಾಗದ ಹೊರತು ಒಬ್ಬ ವ್ಯಕ್ತಿ ಇಂಥ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲವೆಂದು ಅಲ್ಲಿನ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಹೇಳಿದ್ದಾರೆ. ಈಗಾಗಲೇ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದೆ. ಗಡಿಪಾರಿಗೆ ವಿರೋಧವೇನೂ ಅಲ್ಲ. ಭಾರತದಿಂದ ಗಡಿಪಾರು ಮಾಡುವಂತೆ ಬೇಡಿಕೆಯೂ ಬಂದಿಲ್ಲ. ಬಂದ ನಂತರ ಇರುವ ಕಾನೂನು ಕ್ರಮಗಳ ಬಗ್ಗೆ ಪರಿಶೀಲನೆ ನಡೆಸುವಂತೆ ಅಟಾರ್ನಿ ಜನರಲ್ಗೆ ಹೇಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದಕ್ಕೆ ದನಿಗೂಡಿಸಿರುವ ಮತ್ತೂಬ್ಬ ಸಚಿವ ಡಾ.ಕ್ಲೇವಿಯರ್ ಜಯಕುಮಾರ್, ಜಾಕೀರ್ ನಾಯ್ಕ ಗಡಿಪಾರಿಗೆ ಸ್ಥಳೀಯ ಸಂಪ್ರದಾಯವಾದಿಗಳ ವಿರೋಧವಿರುವುದಾಗಿ ಹೇಳಿದ್ದಾರೆ. ಆದರೆ, ನಾವು ಆತನನ್ನು ರಕ್ಷಿಸಲು ಹೋಗುವುದಿಲ್ಲ. ಒಂದೊಮ್ಮೆ ಭಾರತ ಸರ್ಕಾರದ ಕಡೆಯಿಂದ ಗಡಿಪಾರಿಗೆ ಬೇಡಿಕೆ ಬಂದರೆ ಈ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದೂ ಹೇಳಿದ್ದಾರೆ.