ಆಮ್ ಆದ್ಮಿ ಪಾರ್ಟಿ ಮುಂಬಯಿ:ಕೋಶಾಧ್ಯಕ್ಷರಾಗಿ ಸುರೇಶ್ ಆಚಾರ್ಯ ಆಯ್ಕೆ
Team Udayavani, Jul 6, 2018, 2:56 PM IST
ಮುಂಬಯಿ: ಆಮ್ ಆದ್ಮಿ ಪಾರ್ಟಿ ಮುಂಬಯಿ ಘಟಕದ ಕೋಶಾಧ್ಯಕ್ಷರಾಗಿ ಕನ್ನಡಿಗ ಸುರೇಶ್ ಆಚಾರ್ಯ ಅವರು ದ್ವಿತೀಯ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿ¨ªಾರೆ.
ಇತ್ತೀಚೆಗೆ ಶಿವಾಜಿ ಮಂದಿರದಲ್ಲಿ ನಡೆದ ಶಾಹೂ ಮಹಾರಾಜ್ ಅವರ 144ನೇ ಜನ್ಮ ದಿನಾಚರಣೆ ಸಂದರ್ಭ ದೆಹಲ್ಲಿ ಸರಕಾರದ ಸಾಮಾಜಿಕ ನ್ಯಾಯ ಸಚಿವ ರಾಜೇಂದ್ರ ಪಾಲ್ ಅವರ ಸಮಕ್ಷಮ ಮತ್ತು ಪಕ್ಷದ ಮಹಾರಾಷ್ಟ್ರ ಘಟಕದ ಸಂಚಾಲಕ ಬ್ರಿಗೇಡಿಯರ್ ಸುಧೀರ್ ಸಾವಂತ್ ಅವರ ನೇತೃತ್ವದಲ್ಲಿ ಪಕ್ಷದ ಮುಂಬಯಿ ಸಮಿತಿ ಪುನಃರಚಿಸಲಾಯಿತು.
ಪ್ರಸಕ್ತ ಪಕ್ಷದ ಮುಂಬಯಿ ವಲಯದ ಕೋಶಾಧ್ಯಕ್ಷರಾಗಿ ನಿಯುಕ್ತಿಗೊಂಡ ಸುರೇಶ್ ಆಚಾರ್ಯ ಅವರು ಪಕ್ಷದ ಸ್ಥಾಪಕ ಸದಸ್ಯರಾಗಿ, ಭಾರತೀಯ ತೆರಿಗೆ ಪಾವತಿದಾರರ ಧ್ವನಿ ಸಂಸ್ಥೆಯ ಮಾಜಿ ವಿಶ್ವಸ್ತರಾಗಿ, ಪಕ್ಷದ ಕಾರ್ಮಿಕ ಸಂಘಟನೆ ಆಮ್ ಆದ್ಮಿ ಸರ್ವ ಸಹಕಾರಿ ಸಂಘಟನೆ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ ರಾಜಕೀಯ ವರ್ತುಲದಲ್ಲಿ ಚಿರಪರಿಚಿತರಾಗಿ¨ªಾರೆ.
ಸೌಮ್ಯ ಸ್ವಭಾವ, ಚುರುಕು ಮಾತಿನ ಸುರೇಶ್ ಆಚಾರ್ಯ ಅವರು ಸಾಮಾಜಿಕ ವಲಯದಲ್ಲಿ ತೊಡಗಿಸಿಕೊಂಡಿದ್ದು, ಮೂಲತಃ ತೀರ್ಥಹಳ್ಳಿಯವರು.