ನಿಷ್ಠೆಯಿದ್ದಾಗ ಸುಂದರ ಬದುಕು : ಶ್ರೀನಿವಾಸ್ ಸಾಫಲ್ಯ
Team Udayavani, Jul 22, 2018, 12:11 PM IST
ಮುಂಬಯಿ: ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾಗಿರುವ ಸೈಂಟ್ ಕ್ಸೇವಿಯರ್ ಕಾಲೇಜು ಮೆಟ್ರೋ ಇಲ್ಲಿ ಗ್ರಾಜ್ಯುವೇಷನ್ ದಿನಾಚರಣೆಯು ಇತ್ತೀಚೆಗೆ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಪಾಲ್ಗೊಂಡ ಶ್ರೀನಿವಾಸ ಸಾಫಲ್ಯ ಅವರು 150 ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸೈಂಟ್ ಕ್ಸೇವಿಯರ್ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಯನ್ನು ಉದ್ದೇಶಿಸಿ ಮಾತನಾಡಿ, ನಿರಂತರವಾದ ಪರಿಶ್ರಮ, ನಿಷ್ಠೆ ಹಾಗು ನಿರಂತರ ಜ್ಞಾನದ ದಾಹ, ವ್ಯಕ್ತಿಯ ಬದುಕನ್ನು ರೂಪಿಸುವ ಮಂತ್ರವಾಗಿದೆ. ವಿದ್ಯೆಯೊಂದಿಗೆ ಜೀವನದ ಮೌಲ್ಯವನ್ನು ಬೆಳೆಸುವ ಪ್ರಯತ್ನ ಅಗತ್ಯವಾಗಿದೆ. ಬದುಕು ನಿಂತ ನೀರಾಗಬಾರದು. ಅದು ಸದಾ ಹರಿಯುವ ನೀರಾಗಬೇಕು. ಜ್ಞಾನದ ಜಿಜ್ಞಾಸೆ ಜೀವನದ ಕೊನೆಯತನಕ ಮೂಡಬೇಕು. ಅದರಿಂದ ಬದುಕು ಸುಗಮಯವಾಗುತ್ತದೆ. ವಿದ್ಯೆ ಬರೀ ಕೇವಲ ಅಂಕ ಪಡೆಯುವುದು ಅಲ್ಲದೆ ಅದು ಜನರ ಹಾಗು ದೇಶದ ಪ್ರಗತಿಗೆ ಪೂರಕವಾಗಬೇಕು ಎಂದು ನುಡಿದು ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ಪ್ರದಾನಿಸಿ ಶುಭ ಕೋರಿದರು.
ವೇದಿಕೆಯಲ್ಲಿ ಡಾ| ಬ್ಯಾಪ್ಟಿಸ್ಟ್ ಆಗ್ನೆಲ್ ಮೆನೆಜ್Õ, ಪ್ರಾಂಶುಪಾಲ ಫಾದ| ಎರೋìಲ್ ಫೆರ್ನಾಂಡಿಸ್, ಉಪಪ್ರಾಂಶುಪಾಲ ಡಾ| ಕಾನ್ರಾಡ್ ಪೆಸೊÕà ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ
Karnataka ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು
Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು
Bidar; ಹಣ ಹಂಚುವ ದೂರು: ನಾಗಮಾರಪಳ್ಳಿ ಮನೆಯಲ್ಲಿ ಪರಿಶೀಲನೆ
Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ