ಭಾಯಂದರ್ ಶ್ರೀ ಹನುಮಾನ್ ಮಂಡಳಿ, ಶ್ರೀ ಮಣಿಕಂಠ ಸಂಘ: ಮಹಾಪೂಜೆ
Team Udayavani, Jan 12, 2019, 11:56 AM IST
ಮುಂಬಯಿ: ಭಾಯಂದರ್ ಪೂರ್ವದ ಶ್ರೀ ಹನುಮಾನ್ ಭಜನ ಮಂಡಳಿ ಮತ್ತು ಶ್ರೀ ಮಣಿಕಂಠ ಸೇವಾ ಸಂಘ ಇದರ 21ನೇ ವಾರ್ಷಿಕ ಮಹಾಪೂಜೆಯು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯ ಕ್ರಮಗಳೊಂದಿಗೆ ನಡೆಯಿತು.
ಧಾರ್ಮಿಕ ಕಾರ್ಯಕ್ರಮವಾಗಿ ಡಿ. 28 ರಂದು ಮಂಗಳ್ಳೋತ್ಸವ ಭಜನ ಕಾರ್ಯಕ್ರಮವು ಪರಿಸರದ ವಿವಿಧ ಸಂಘ-ಸಂಸ್ಥೆಗಳ ಸಹಕಾರದಿಂದ ನಡೆಯಿತು.
ಡಿ. 29ರಂದು ಬೆಳಗ್ಗೆ 6ರಿಂದ ಸ್ವಸ್ತಿ ಪುಣ್ಯಾಹ ವಾಚನ, ಸಂಜೀವಿನಿ ಮೃತ್ಯುಂಜಯ ಹೋಮ, ಪಂಚಾಮೃತ ಅಭಿಷೇಕ, ಲಕ್ಷ ತುಳಸಿ ಅರ್ಚನೆ, ಮಹಾಆರತಿ, ಮಧ್ಯಾಹ್ನ 1ರಿಂದ ಅನ್ನಸಂತರ್ಪಣೆ ನಡೆಯಿತು.
ಮಂಡಳಿಯ ಸದಸ್ಯರಿಂದ ಭಜನ ಕಾರ್ಯಕ್ರಮವು ನಡೆಯಿತು. ಶಾಸಕ ನರೇಂದ್ರ ಎಲ್. ಮೆಹ್ತಾ, ಮೇಯರ್ ಡಿಂಪಲ್ ವಿ. ಮೆಹ್ತಾ, ನಗರ ಸೇವಕ ರಾಕೇಶ್ ಶಾØ, ಮುನ್ನಸಿಂಗ್, ವಂದನಾ ಪಾಟೀಲ್, ಮಾಜಿ ಮೇಯರ್ ಗೀತಾ ಜೈನ್, ಪರಿಸರದ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುನೀತಾ ಎಸ್. ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಂಡಳಿಯ ಗೌರವಾಧ್ಯಕ್ಷ ಅರವಿಂದ ಎ. ಶೆಟ್ಟಿ, ಸಮಾಜ ರತ್ನ ಲಯನ್ ಡಾ| ಶಂಕರ್ ಕೆ. ಟಿ., ಬೆಳಿಯೂರುಗುತ್ತು ಡಾ| ಅರುಣೋದಯ ರೈ ಮತ್ತು ಉದಯ ಶೆಟ್ಟಿ ಪೆಲತ್ತೂರು, ಮಂಡಳದ ಅಧ್ಯಕ್ಷ ಜಯರಾಮ್ ಎಂ. ಶೆಟ್ಟಿ ಉಪಸ್ಥಿತರಿದ್ದರು. ಮಹಾಪೂಜೆ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಬ್ರಹ್ಮಶ್ರೀ ಅರುಣ್ ತಂತ್ರಿ ಖಂಡಿಕೆ, ವೇದಮೂರ್ತಿ ಗಣೇಶ್ ಸರಳಾಯ, ಸಂತೋಷ್ ಗುರುಸ್ವಾಮಿ ಮೂಡು ಮಾರ್ನಾಡ್ ಇವರ ಹಸ್ತದಿಂದ ನೆರವೇರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಮಾಯಾ ಶೂರ್ಪನಖೀ-ವಾಲಿ ಮೋಕ್ಷ ಯಕ್ಷಗಾನ ಬಯಲಾಟವು ಬೇಬಿ ಆನಂದ ಅವರ ಸೇವಾರ್ಥಕವಾಗಿ ಪ್ರದರ್ಶನಗೊಂಡಿತು.
ಡಿ. 30ರಂದು ಬೆಳಗ್ಗೆ ದೇವರಿಗೆ ಮಂಗಳಯಾಗ, ಸಂಪ್ರೋಕ್ಷಣೆ, ಮಹಾಮಂಗಳಾರತಿ ನಡೆಯಿತು. ಯಕ್ಷಗಾನ ಹಿರಿಯ ಕಲಾವಿದ ಪ್ರಕಾಶ್ ಪಣಿಯೂರು ಮೀರಾರೋಡ್, ಸಂಸ್ಥೆಯ ಉಪಾಧ್ಯಕ್ಷ ಚಂದ್ರ ಮೋಹನ್ ಅಮೀನ್, ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ್ ಕೆ. ಕೋಟ್ಯಾನ್, ಕೋಶಾಧಿಕಾರಿ ಸುಕುಮಾರ್ ಎಂ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯದರ್ಶಿ ಲಕ್ಷ್ಮೀ ಎಸ್. ಸುವರ್ಣ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸದಸ್ಯ ಬಾಂಧವರ ಮಕ್ಕಳಿಂದ ನೃತ್ಯ ವೈವಿಧ್ಯ ನಡೆಯಿತು. ಸಂತೋಷ್ ಗುರುಸ್ವಾಮಿ ಮತ್ತು ಶಿಬಿರದ ಸ್ವಾಮಿಗಳು, ಪದಾಧಿಕಾರಿಗಳು, ಮಹಿಳಾ ವಿಭಾಗದ ಸದಸ್ಯೆಯರು, ಯುವ ವಿಭಾಗದ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಬಾಬಾ ಪ್ರಸಾದ್ ಅರಸ ಕುತ್ಯಾರು ಕಾರ್ಯಕ್ರಮ ನಿರ್ವಹಿಸಿದರು. ಗೌರವ ಕಾರ್ಯದರ್ಶಿ ಅಶೋಕ್ ಕೆ. ಕೋಟ್ಯಾನ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ