ಬಿಲ್ಲವ ಭವನ 19ನೇ ಈಸ್ಟ್‌ ಬೋಂಬೆ ಸ್ಕೌಟ್‌ ಉತ್ಸವ


Team Udayavani, Nov 8, 2017, 4:12 PM IST

06.jpg

ಮುಂಬಯಿ: ಮದರ್‌ ಇಂಡಿಯಾ ಫ್ರೀನೈಟ್‌ ಹೈಸ್ಕೂಲ್‌ ಉತ್ತಮ ಗುಣಮಟ್ಟದ ಶಿಕ್ಷಣ ಸಂಸ್ಥೆಯಾಗಿದೆ. ಬದುಕಿನ ಮೌಲ್ಯ ಹೆಚ್ಚಿಸಲು ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಪ್ರತಿಭಾ ವಿಕಾಸಕ್ಕೆ ಅವಕಾಶ ಕಲ್ಪಿಸಿದೆ. ಇದರ ಸ್ಕೌಟ್‌ ವಿಭಾಗದ ವಿದ್ಯಾರ್ಥಿಗಳು ತನ್ನ ಕಾರ್ಯಕ್ಷಮತೆಯಿಂದ ಹನ್ನೊಂದು ರಾಷ್ಟ್ರಪತಿ ಪದಕವನ್ನು ಪಡೆದಿದ್ದಾರೆ. ವಿದ್ಯಾದಾನದ ಮೂಲಕ ಕೂಡು ಕುಟುಂಬವನ್ನು ಸೃಷ್ಟಿಸಿದ ಈ ಶಿಕ್ಷಣ ಸಂಸ್ಥೆ ಮಾತ್ರ ವಾತ್ಸಲ್ಯದ ಆರೈಕೆಯ ತಾಣವಾಗಿದೆ ಎಂದು ಮದರ್‌ ಇಂಡಿಯಾ ಫ್ರಿ ನೈಟ್‌ ಹೈಸ್ಕೂಲ್‌ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ, ಸಾಯಿಕೇರ್‌ ಲಾಜಿಸ್ಟಿಕ್ಸ್‌ ಲಿಮಿಟೆಡ್‌ ಇದರ ಮುಖ್ಯ ಆಡಳಿತ ನಿರ್ದೇಶಕ ಸುರೇಂದ್ರ ಎ. ಪೂಜಾರಿ ನುಡಿದರು.

ನ. 5ರಂದು ಸಾಂತಾಕ್ರೂಜ್‌ ಪೂರ್ವದ ಬಿಲ್ಲವ ಭವನದಲ್ಲಿ ಮದರ್‌ ಇಂಡಿಯಾ ಫ್ರಿ ನೈಟ್‌ ಹೈಸ್ಕೂಲ್‌ ಹಳೆ ವಿದ್ಯಾರ್ಥಿ ಸಂಘ ಮತ್ತು ಜನತಾ ಶಿಕ್ಷಣ ಸಂಘದ 19ನೇ ಈಸ್ಟ್‌ ಬೋಂಬೆ ಸ್ಕೌಟ್‌ ಉತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸದಸ್ಯರ ಸಹಕಾರದಿಂದ ಸಂಘಟನೆ ಬಲಾಡ್ಯ ಹೊಂದಿದೆ. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಶಾಲಾ ಪರಿಕರಗಳನ್ನು ನೀಡಿ ಗೌರವಿಸಿದೆ. ಆರ್ಥಿಕ ಸಂಕಷ್ಟದಲ್ಲಿರುವ ವಿದ್ಯಾರ್ಥಿನಿಯ ಪದವಿ ಶಿಕ್ಷಣದವರೆಗಿನ ಸಂಪೂರ್ಣ ವೆಚ್ಚವನ್ನು ಹಳೆ ವಿದ್ಯಾರ್ಥಿ ಸಂಘ ನೀಡಿದೆ. ಇದೇ ರೀತಿ ಉತ್ತಮ ಮನಸ್ಸಿನಿಂದ ರಾತ್ರಿಶಾಲೆಯ ಸ್ಮರಣೆಯನ್ನು ಜಾಗೃತಗೊಳಿಸೋಣ ಎಂದರು.

ಬಿಲ್ಲವರ ಅಸೋಸಿಯೇಶನ್‌ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌ ಮಾತನಾಡಿ, ಸಂಪೂರ್ಣ ಜನಜೀವನ ಅಸ್ತವ್ಯಸ್ತಗೊಂಡಿದ್ದ ಬ್ರಿಟಿಷರ ವಿರುದ್ಧದ ಹೋರಾಟದ ಸಮಯದಲ್ಲಿ ಹುಟ್ಟಿಕೊಂಡ ಮದರ್‌ ಇಂಡಿಯಾ ರಾತ್ರಿಶಾಲೆ ದೇಶ ಪ್ರೇಮದ ಪ್ರತೀಕವಾಗಿದೆ. ಇದರಲ್ಲಿ ಶಿಕ್ಷಣ ಪಡೆದವರು ಉನ್ನತ ಹುದ್ದೆ ಹಾಗೂ ಯಶಸ್ಸಿ ಉದ್ದಿಮೆದಾರರಾಗಿ ಶ್ರೇಷ್ಠತೆಯನ್ನು ಪಡೆದಿರುವುದು ಸೌಭಾಗ್ಯದ ವಿಚಾರವಾಗಿದೆ. ರಾತ್ರಿಶಾಲೆ ಮಕ್ಕಳ ಕೊರತೆಯಿಂದ ಮುಚ್ಚಿದ್ದರೂ ಅದರ ಹಳೆವಿದ್ಯಾರ್ಥಿಗಳು ಸಮಾನ ಮನಸ್ಕರಾಗಿ ಸಾಮಾಜಿಕ ಕಳಕಳಿಯೊಂದಿಗೆ ದುಡಿಯುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಸ್ಕೌಟ್‌ ಕ್ಷೇತ್ರದಲ್ಲಿ ಗಮನೀಯ ಸಾಧನೆಗೈದ ರಾಮದಾಸ್‌ ಎಚ್‌. ನಾಯಕ್‌ ಅವರಿಗೆ ಗರುಡ ಪ್ರಮುಖ, ಮುದ್ದು ಅಂಚನ್‌ ಅವರಿಗೆ ಗರುಡ ಸಾಹಸಿ, ಮಂದಾರ ಹೆಗ್ಡೆ ಅವರಿಗೆ ಗರುಡ ಚೇತನ ಬಿರುದು ಪ್ರದಾನಿಸಿ ಶಾಲು ಹೊದೆಸಿ, ಫಲಪುಷ್ಪ, ಸಮ್ಮಾನ ಪತ್ರ, ಸ್ಮರಣಿಕೆಯೊಂದಿಗೆ ಗಣ್ಯರ ಉಪಸ್ಥಿತಿಯಲ್ಲಿ ಗೌರವಿಸಲಾಯಿತು.

ಸ್ಕೌಟ್‌ ಅಧ್ಯಾಪಕರಾದ ಗೋಪಾಲ್‌ ಕಾಂಚನ್‌ ಮತ್ತು ಕೆ. ಬಿ. ಪಾಲನ್‌ ಸ್ಕೌಟ್‌ನಲ್ಲಿ ರಾಷ್ಟ್ರಪತಿ ಪದಕ ಪಡೆದಿರುವ ನಾಗೇಶ್‌ ನಾಯಕ್‌, ಶುಭಾನಂದ ಹೆಗ್ಡೆ, ಚಂದ್ರಹಾಸ ಎ. ಶೆಟ್ಟಿ, ಸುರೇಂದ್ರ ಎ. ಪೂಜಾರಿ, ಅಶೋಕ್‌ ಮೆಂಡನ್‌, ಆನಂದ ಶೆಟ್ಟಿ ಮತ್ತು ಮಹಾಬಲ ದೇವಾಡಿಗ ಅವರನ್ನು ಸಮ್ಮಾನಿಸಲಾಯಿತು.

ವೇದಿಕೆಯಲ್ಲಿ ಉದ್ಯಮಿಗಳಾದ ಸಂತೋಷ್‌ ಕುಮಾರ್‌ ಶೆಟ್ಟಿ, ಸದಾಶಿವ ಶೆಟ್ಟಿ, ಪದಾಧಿಕಾರಿಗಳಾದ ಸುಂದರ ಮೊಲಿ, ಯಶವಂತ ಪೂಜಾರಿ, ನಾಗೇಶ್‌ ನಾಯಕ್‌, ಟಿ. ವಿ. ಪೂಜಾರಿ, ಜಯ ಸಿ. ಪೂಜಾರಿ, ಜಯರಾಮ ಪೂಜಾರಿ, ಚಂದ್ರಹಾಸ ಬೆಳ್ಚಡ, ಮಂಜುನಾಥ ಪೂಜಾರಿ, ಸದಾನಂದ ಶೆಟ್ಟಿ, ಮಲ್ಲಿಕಾ ರಮೇಶ್‌ ಪೂಜಾರಿ, ಮಹಾಬಲ ಹೆಗ್ಡೆ ಅವರು ಅತಿಥಿಗಳನ್ನು ಗೌರವಿಸಿದರು.

ಹರೀಶ್‌ ಜಿ. ಮೆಂಡನ್‌ ಸಂಸ್ಥೆಯ ಬಗ್ಗೆ ವಿವರಿಸಿದರು. ಲೇಖಕ ಅಶೋಕ್‌ ಸುವರ್ಣ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ನೃತ್ಯ ವೈವಿಧ್ಯ ಮತ್ತು ಶ್ರೀ ಗುರುಕಲಾ ತಂಡ ಮುದರಂಗಡಿ ಕಲಾವಿದರಿಂದ ನಸೀಬು ತುಳು ನಾಟಕ ಪ್ರದರ್ಶನಗೊಂಡಿತು.

ನಾನು ಮದರ್‌ ಇಂಡಿಯಾ ರಾತ್ರಿಶಾಲೆಯ ಹಳೆವಿದ್ಯಾರ್ಥಿ. ಅಂದಿನ ಅಧ್ಯಾಪಕರ ಅವಿರತ ಶ್ರಮದ ಶಿಕ್ಷಣ ನನ್ನ ಬದುಕಿನ ಭವಿಷ್ಯ ರೂಪಿಸಿತು. ಇಂದು ಯಶಸ್ವಿ ಉದ್ಯಮಿಯಾಗಿ ಬೆಳೆದಿದ್ದೇನೆ. ಹಲವಾರು ಜನಪರ ಯೋಜನೆಯೊಂದಿಗೆ ಸಮಾಜ ಸೇವೆ ಮಾಡುತ್ತಿದ್ದೇನೆ 
 – ಎನ್‌. ಟಿ. ಪೂಜಾರಿ (ಅಧ್ಯಕ್ಷರು: ಬಿಲ್ಲವರ ಚೇಂಬರ್‌ ಆಫ್‌ ಕಾಮರ್ಸ್‌).

ಲಕ್ಷಾಂತರ ಮಂದಿಗೆ ದಾರಿ ದೀಪವಾಗಿರುವ ಶಿಕ್ಷಣ ಸಂಸ್ಥೆ ಹಾಗೂ ಸ್ಕೌಟ್‌ ವಿಭಾಗ ಸ್ವಾವಲಂಬಿ ಜೀವನ ಬದುಕಿನ ರೂಪುರೇಷೆಗಳನ್ನು ನಿರೂಪಿಸಿದೆ. ದೇಶ ಪ್ರೇಮವನ್ನು ವಿಸ್ತರಿಸಿದೆ 
– ಗೋವಿಂದ ಪೂಜಾರಿ (ಆಡಳಿತ ನಿರ್ದೇಶಕ: ಶೀಫ್‌ ಟಾಲ್ಕ್ ಫುಡ್‌ ಹಾಸ್ಪಿಟಾಲಿಟಿ    ಪ್ರೈವೇಟ್‌ ಲಿಮಿಟೆಡ್‌).

ಭಾರತಾಂಬೆಯ ಋಣ ತೀರಿಸಲು ಅಸಾಧ್ಯ. ಈ ಮಣ್ಣಿನಿಂದ ಬೆಳೆದ ನಾವು ಆಕೆಯನ್ನು ಗೌರವ ಸ್ಥಾನದಿಂದ ಆರಾಧಿಸಬೇಕು. ಭಾರತ್‌ ಮಾತಾಕೀ ಜೈ, ವಂದೇ ಮಾತರಂ ರಾಷ್ಟ್ರಪ್ರೇಮವನ್ನು ನೀಡುತ್ತಿದೆ ಎನ್‌ಸಿಸಿ.  ಸ್ಕೌಟ್‌ ಶಿಸ್ತಿನ ಅವಿಭಾಜ್ಯ ಅಂಗವಾಗಿದೆ 
 – ಕರುಣಾಕರ ಜಿ. ಪುತ್ರನ್‌ (ಟ್ರಸ್ಟಿ : ಹರೇ ಕೃಷ್ಣ ಫೌಂಡೇಷನ್‌).
 

ಟಾಪ್ ನ್ಯೂಸ್

Salaar: ಜಪಾನ್‌ನಲ್ಲಿ ಈ ತಿಂಗಳು ತೆರೆಕಾಣಲಿದೆ ಪ್ರಭಾಸ್‌ – ಪ್ರಶಾಂತ್‌ ನೀಲ್‌  ʼಸಲಾರ್‌ʼ

Salaar: ಜಪಾನ್‌ನಲ್ಲಿ ಈ ತಿಂಗಳು ತೆರೆಕಾಣಲಿದೆ ಪ್ರಭಾಸ್‌ – ಪ್ರಶಾಂತ್‌ ನೀಲ್‌ ʼಸಲಾರ್‌ʼ

12-uv-fusion

Spray fans: ಬಿಸಿ ಗಾಳಿಯೂ ತಂಪಾಯ್ತು

ಕಳ್ಳರು & ದರೋಡೆಕೋರರ ಗ್ಯಾಂಗ್‌ ಚುಚ್ಚಿದ್ದ ವಿಷಕ್ಕೆ ಪೊಲೀಸ್‌ ಕಾನ್ಸ್‌ ಟೇಬಲ್‌ ಮೃತ್ಯು

ಕಳ್ಳರು & ದರೋಡೆಕೋರರ ಗ್ಯಾಂಗ್‌ ಚುಚ್ಚಿದ್ದ ವಿಷಕ್ಕೆ ಪೊಲೀಸ್‌ ಕಾನ್ಸ್‌ ಟೇಬಲ್‌ ಮೃತ್ಯು

ಗುಜರಾತ್ ನಿಂದ ಓಡಿ ಹೋದ 12 ಉದ್ಯಮಿಗಳ ಬಗ್ಗೆ ಮಾತನಾಡಿ: ಮೋದಿಗೆ ಲಾಡ್ ಸವಾಲು

Dharwad; ಗುಜರಾತ್ ನಿಂದ ಓಡಿ ಹೋದ 12 ಉದ್ಯಮಿಗಳ ಬಗ್ಗೆ ಮಾತನಾಡಿ: ಮೋದಿಗೆ ಲಾಡ್ ಸವಾಲು

Kidnapped: ಹಾಡ ಹಗಲೇ ಮಹಿಳೆಯಿಂದ ಹೋಟೆಲ್ ಮಾಲೀಕನ ಮಗನ ಅಪಹರಣ: CCTVಯಲ್ಲಿ ದೃಶ್ಯ ಸೆರೆ

Kidnapped: ಹಾಡ ಹಗಲೇ ಮಹಿಳೆಯಿಂದ ಹೋಟೆಲ್ ಮಾಲೀಕನ ಮಗನ ಅಪಹರಣ: CCTVಯಲ್ಲಿ ದೃಶ್ಯ ಸೆರೆ

11-plastic

Eco-friendly Bio Plastic: ಪರಿಸರ ಸ್ನೇಹಿ ಮೆಕ್ಕೆಜೋಳದ ಬಯೋ ಪ್ಲಾಸ್ಟಿಕ್‌

16-uv-fusion

Aranthodu: ವಾಹನಗಳ ಮಧ್ಯೆ ಸರಣಿ ಅಪಘಾತ; ಬೈಕ್ ಸವಾರ ಗಂಭೀರ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Raichur Lok Sabha Constituency: ಬಿಸಿಲೂರಿನಲ್ಲಿ ಕಾವೇರಿದ “ನಾಯಕ’ತ್ವದ ಹೋರಾಟ

Raichur Lok Sabha Constituency: ಬಿಸಿಲೂರಿನಲ್ಲಿ ಕಾವೇರಿದ “ನಾಯಕ’ತ್ವದ ಹೋರಾಟ

13-uv-fusion

UV Fusion: ನಾವು ನಮಗಾಗಿ ಬದುಕುತ್ತಿರುವುದು ಎಷ್ಟು ಹೊತ್ತು?

Salaar: ಜಪಾನ್‌ನಲ್ಲಿ ಈ ತಿಂಗಳು ತೆರೆಕಾಣಲಿದೆ ಪ್ರಭಾಸ್‌ – ಪ್ರಶಾಂತ್‌ ನೀಲ್‌  ʼಸಲಾರ್‌ʼ

Salaar: ಜಪಾನ್‌ನಲ್ಲಿ ಈ ತಿಂಗಳು ತೆರೆಕಾಣಲಿದೆ ಪ್ರಭಾಸ್‌ – ಪ್ರಶಾಂತ್‌ ನೀಲ್‌ ʼಸಲಾರ್‌ʼ

12-uv-fusion

Spray fans: ಬಿಸಿ ಗಾಳಿಯೂ ತಂಪಾಯ್ತು

ಕಳ್ಳರು & ದರೋಡೆಕೋರರ ಗ್ಯಾಂಗ್‌ ಚುಚ್ಚಿದ್ದ ವಿಷಕ್ಕೆ ಪೊಲೀಸ್‌ ಕಾನ್ಸ್‌ ಟೇಬಲ್‌ ಮೃತ್ಯು

ಕಳ್ಳರು & ದರೋಡೆಕೋರರ ಗ್ಯಾಂಗ್‌ ಚುಚ್ಚಿದ್ದ ವಿಷಕ್ಕೆ ಪೊಲೀಸ್‌ ಕಾನ್ಸ್‌ ಟೇಬಲ್‌ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.