ಎರಡು ಚಿನ್ನ ಮುಡಿಗೇರಿಸಿಕೊಂಡ  ಸುಚರಿತಾ ಶೆಟ್ಟಿ


Team Udayavani, Dec 6, 2017, 4:34 PM IST

05-Mum06.jpg

ಮುಂಬಯಿ: ಬೋಂಬೆ ಯಂಗ್‌ಮೆನ್ಸ್‌ ಕ್ರಿಶ್ಚಿಯನ್‌ ಅಸೋಸಿ ಯೇಷನ್‌ (ವೈಎಂಸಿಎ) ವತಿಯಿಂದ ನ. 14ರಿಂದ ನ. 17ರವರೆಗೆ ನಗರದ ಮರೀನ್‌ ಲೈನ್ಸ್‌ ಯುನಿವರ್ಸಿಟಿ ನ್ಪೋಟ್ಸ್‌ ಮೈದಾನದಲ್ಲಿ ನಡೆದ ರಾಜ್ಯ ಮಟ್ಟದ 42ನೇ ಆ್ಯತ್ಲೆಟಿಕ್‌ ಮೀಟ್‌ -2017ರಲ್ಲಿತುಳು-ಕನ್ನಡತಿ ಸುಚರಿತಾ ಶೆಟ್ಟಿ ಕರೇಲಿಯಾ ಅವರು ದಾಖಲೆಯೊಂದಿಗೆ ಎರಡು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಮೂವತ್ತೆ$çದು  ವರ್ಷ ಮೇಲ್ಪಟ್ಟವರ ಮಹಿಳಾ ವಿಭಾಗದಲ್ಲಿ ನೂತನ ದಾಖಲೆ ಯೊಂದಿಗೆ 100 ಮೀ. ಓಟವನ್ನು 14.06 ಸೆಕೆಂಡಿನಲ್ಲಿ ಪೂರೈಸಿ ಚಿನ್ನದ ಪದಕ ಪಡೆದರೆ, ಶಾಟ್‌ಪುಟ್‌ನಲ್ಲಿ ನೂತನ ದಾಖಲೆಯೊಂದಿಗೆ ಚಿನ್ನವನ್ನು ಗೆದ್ದ ಸಾಧನೆ ಮಾಡಿದ್ದಾರೆ. ಅದೇ ರೀತಿ ನ. 19ರಂದು ನಗರದ ಮರೀನ್‌ ಲೈನ್ಸ್‌ ಯುನಿವರ್ಸಿಟಿ ನ್ಪೋಟ್ಸ್‌ ಮೈದಾನದಲ್ಲಿ ನಡೆದ ಮಾಸ್ಟರ್ಸ್‌ ಸ್ಟೇಟ್‌ ಅಥ್ಲೆಟಿಕ್ಸ್‌ ಚಾಂಪಿಯಶಿಪ್‌ 2017ರಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. 100  ಮೀ. ಓಟ, ಡಿಸ್ಕಸ್‌ ಥ್ರೋ ಮತ್ತು ಶಾಟ್‌ಪುಟ್‌ನಲ್ಲಿ ಈ ಸಾಧನೆ ಮಾಡಿದ್ದಾರೆ.

ಮಾಸ್ಟರ್ ಗೇಮ್ಸ್‌ನಲ್ಲಿ  1 ಚಿನ್ನ, 2ಬೆಳ್ಳಿ ಪದಕ 

ಮೂಲತಃ ಪೊಸ್ರಾಲ್‌ ಕೊಟ್ರಪಾಡಿ ದಿ| ಶಂಕರ ಶೆಟ್ಟಿ ಮತ್ತು ತಾಳಿಪಾಡಿ ಪಾದೆಮನೆ ಕುಶಾಲ ಶೆಟ್ಟಿ ದಂಪತಿಯ ಪುತ್ರಿಯಾಗಿರುವ ಸುಚರಿತಾ ಶೆಟ್ಟಿ ಅವರು ಆಸ್ಟ್ರೇಲಿಯದಲ್ಲಿ ನಡೆದ ಆಸ್ಟ್ರೇಲಿಯನ್‌ ಮಾಸ್ಟರ್ ಗೇಮ್ಸ್‌-2015ರಲ್ಲಿ ಭಾರತವನ್ನು ಪ್ರತಿನಿಧಿಸಿ ಒಂದು ಚಿನ್ನ, 2 ಬೆಳ್ಳಿಯೊಂದಿಗೆ ಭಾರತದ ಕೀರ್ತಿಪತಾಕೆಯನ್ನು ಹಾರಿಸಿದ್ದರು. 

2013-2014ನೇ ಸಾಲಿನಲ್ಲಿ ಜರಗಿದ ಮಾಸ್ಟರ್ಸ್‌ ನ್ಯಾಷನಲ್‌ ಅಥ್ಲೆಟಿಕ್‌ ಮೀಟ್‌ನಲ್ಲಿ 6 ಚಿನ್ನ, 2015 ರಲ್ಲಿ ಜರಗಿದ ಸ್ಟೇಟ್‌ ಮರ್ಕಂಟೈಲ್‌ ಆ್ಯತ್ಲೆಟಿಕ್‌ ಮೀಟ್‌ನಲ್ಲಿ 4 ಚಿನ್ನದ ಪದಕ, 2013 ರಲ್ಲಿ ನಡೆದ  ರನ್‌ ಇಂಡಿಯಾರನ್‌ 10 ಕಿ. ಮೀ. ಮ್ಯಾರಥಾನ್‌ನಲ್ಲಿ ಐದನೇ ಸ್ಥಾನವನ್ನು ಪಡೆದಿದ್ದಾರೆ.

ಮಂಗಳೂರು ವಿಶ್ವ ವಿದ್ಯಾಲಯದ ಅಥ್ಲೆಟಿಕ್‌ ಚಾಂಪಿಯನ್‌ಶಿಪ್‌ನಲ್ಲಿ ಸತತ ಮೂರು ವರ್ಷ ಚಾಂಪಿಯನ್‌ ಆಗಿ ಮೂಡಿ ಬಂದಿರುವ ಇವರು ಬಂಟರ ಸಂಘ ಮುಂಬಯಿ ಇದರ ಜೋಗೇಶ್ವರಿ- ದಹಿಸರ್‌ ಪ್ರಾದೇಶಿಕ ಸಮಿತಿಯ ವೈದ್ಯಕೀಯ ವಿಭಾಗದ ಮುಖ್ಯಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 

ಕ್ರೀಡಾಳುಗಳಿಗೆ ತರಬೇತಿ 
ಕ್ಯಾಥೆದ್ರಲ್‌ ಮತ್ತು ಜಾನ್‌ ಕೊನೊನ್‌ ಸ್ಕೂಲ್‌´‚ೊàರ್ಟ್‌ ಮುಂಬಯಿ ಇಲ್ಲಿ 13 ವರ್ಷಗಳ ಕಾಲ ಕ್ರೀಡಾ ಮಾರ್ಗದರ್ಶಕಿಯಾಗಿ ಸೇವೆ ಸಲ್ಲಿಸಿ ಪ್ರಸ್ತುತ ಯುನಿಕ್ಯೂ ನ್ಪೋಟ್ಸ್‌ ಅಕಾಡಮಿ ಎಂಬ ನ್ಪೋಟ್ಸ್‌ ಅಕಾಡಮಿಯನ್ನು ಸ್ಥಾಪಿಸಿ ಅದರ ಮುಖಾಂತರ ಯುವ ಕ್ರೀಡಾಳುಗಳಿಗೆ  ಕ್ರೀಡಾ ಮಾರ್ಗ ದರ್ಶನದೊಂದಿಗೆ ತರಬೇತಿಯನ್ನು ನೀಡುತ್ತಿದ್ದಾರೆ.

ಟಾಪ್ ನ್ಯೂಸ್

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.