ದಯಾನಂದ ಶೆಟ್ಟಿ ಅವರಿಗೆ ನಾಟಕ ಅಕಾಡೆಮಿ ಪ್ರಶಸ್ತಿ ಗರಿ


Team Udayavani, Dec 14, 2017, 4:36 PM IST

2558.jpg

ಉಡುಪಿ: ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿಗೆ ಈ ಬಾರಿ ಆಯ್ಕೆಯಾದ ಹೇರೂರು ದಯಾನಂದ ಶೆಟ್ಟಿಯವರು ಸರಳಾತಿ ಸರಳರು, ಹಿರಿಯ ಕಲಾವಿದರು. 

ಶೆಟ್ಟಿ ಅವರಿಗೆ ಸುಮಾರು 85ರ ಇಳಿವಯಸ್ಸು. ಆದರೆ ತೀರಾ ಇತ್ತೀಚಿನ ವರೆಗೂ ಹೇರೂರಿನ ಮನೆಯಿಂದ ಬ್ರಹ್ಮಾವರದವರೆಗೆ ನಡೆದೇ ಬರುತ್ತಿದ್ದರು. ಸದಾ ಚಟುವಟಿಕೆಶೀಲರಾಗಿರಬೇಕು ಎಂಬ 
ಅವರ ಮನೋಭಾವವೇ ಇದಕ್ಕೆ ಕಾರಣ. ಕೆಲವು ಸಮಯದಿಂದ ಬನ್ನಂಜೆಯಲ್ಲಿ ಆರೋಗ್ಯದ ಕಾರಣಕ್ಕಾಗಿ ಮಗನ ಮನೆಯಲ್ಲಿದ್ದಾರೆ.  

ಶೆಟ್ಟಿಯವರು ಸಾದಾ ಧೋತಿ, ಸಾಮಾನ್ಯ ಅಂಗಿಯನ್ನು ಧರಿಸಿ ಪಾದರಸದಂತೆ ಓಡಾಡುತ್ತಿರುತ್ತಾರೆ. 
“ನನಗೆ ಒಂದು ಸಿನೆಮಾ ಶೂಟಿಂಗ್‌ ಇತ್‌ ಮಾರಾಯೆÅ’ ಎಂದು 20ರ ಹರೆಯದವರನ್ನೂ ನಾಚಿಸುವಂತೆ ಸಿದ್ಧರಾಗುತ್ತಾರೆ.

ಮನೆಗೆ ಬಂದಿದ್ದ ರಾಜ್‌ಕುಮಾರ್‌
ಸುಬ್ಬಯ್ಯ ನಾಯ್ಡು ನಾಟಕ ಕಂಪೆನಿಯಲ್ಲಿ 15 ವರ್ಷ ಕೆಲಸ ಮಾಡಿದ್ದೆ. ಆಗ ಮೇರುನಟ ಡಾ. ರಾಜಕುಮಾರ್‌ ಜತೆಯೂ ನಟಿಸಿದ್ದೆ. ಹಾಗಾಗಿ ಅವರೊಡನೆ ನಿಕಟ ಸಂಪರ್ಕವಿತ್ತು. 1997ರಲ್ಲಿ ಹೇರೂರಿನಲ್ಲಿ ಮನೆ ನಿರ್ಮಿಸುತ್ತಿದ್ದಾಗ ಜನವರಿ ಒಂದರಂದು ರಾಜ್‌ಕುಮಾರ್‌ ಅವರೇ ನನ್ನನ್ನು ಹುಡುಕಿಕೊಂಡು ಬಂದು ಶಾಲು ಹೊದೆಸಿ ಹತ್ತು ಸಾವಿರ ರೂ. ನೆರವು ನೀಡಿದ್ದರು.ಆಗ ಅವರೊಂದಿಗೆ ಕಟಪಾಡಿಯ ಅಶೋಕ ಸುವರ್ಣರಿದ್ದರು ಎಂದು ವಿವರಿಸುತ್ತಾರೆ ದಯಾನಂದ ಶೆಟ್ಟರು.

ಕುಂದಗನ್ನಡದ “ಗುಲಾಬಿ ಟಾಕೀಸ್‌’ ಚಿತ್ರದಲ್ಲಿ ಈಗ ಸಚಿವರಾಗಿರುವ ಉಮಾಶ್ರೀಯವರೊಂದಿಗೂ ಶೆಟ್ಟರು ನಟಿಸಿದ್ದರು. ಇತ್ತೀಚಿಗೆ ನಾಗಾಭರಣರ ಸೂಚನೆಯಂತೆ “ನೆರಳು’ ಸಾಕ್ಷ್ಯಚಿತ್ರದಲ್ಲಿ ಗುತ್ತಿನಮನೆ ಯಜಮಾನರ ಪಾತ್ರವನ್ನು ನಿರ್ವಹಿಸಿದ್ದರು. 

ಸಿನೆಮಾ ಲೋಕ
ಶೆಟ್ಟಿಯವರು “ಜೀವನ ತರಂಗ’ (1962), ಚೋಮನದುಡಿ (1975), ಕಲಿತರೂ ಹೆಣ್ಣೇ (1963), ಗುಡ್ಡದಭೂತ (1992), ಗುಲಾಬಿ ಟಾಕೀಸ್‌ (2008), ಕೋಟಿ ಚೆನ್ನಯ (1972-73), ಕರಿಯಣಿ ಕಟ್ಟಂದಿ ಕಂಡನಿ (1978), ಹಣ್ಣೆಲೆ ಚಿಗುರಿದಾಗ ಮೊದಲಾದ  ಚಲನಚಿತ್ರಗಳಲ್ಲಿ ನಟಿಸಿದ್ದರು. 

ಹೆಗಡೆಯವರಿಂದ ಸಿದ್ದರಾಮಯ್ಯವರೆಗೆ…
1948ರಿಂದ 76ರವರೆಗೆ ಸಕ್ರಿಯವಾಗಿ ರಂಗಭೂಮಿಯಲ್ಲಿದ್ದ ಶೆಟ್ಟರಿಗೆ 1985ರಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾದ ಸಂದರ್ಭ ಕಲಾವಿದರಿಗೆ ದೊರಕುವ ಮಾಸಾಶನ ಲಭ್ಯವಾಯಿತು. ತಿಂಗಳಿಗೆ 150 ರೂ. ನಂತೆ ಆರಂಭವಾಗಿ  ಈಗ 1,500 ರೂ. ಗೆ ಏರಿಕೆಯಾಗಿದೆ. ನಾಲ್ಕೈದು ವರ್ಷಗಳಿಂದ ಏರಿಕೆಯಾಗಿಲ್ಲ. ಈ ಕುರಿತು 
ಮನವಿ ಸಲ್ಲಿಸಲು ಎರಡು ವರ್ಷಗಳ ಹಿಂದೆ ಸಿದ್ದರಾಮಯ್ಯನವರು ಬ್ರಹ್ಮಾವರಕ್ಕೆ ಬಂದಾಗ ಶೆಟ್ಟಿಯವರು ಪ್ರಯತ್ನಿಸಿದರು. ಆದರೆ ಕೆಲವರು ತಡೆದರು. 

ಸಿದ್ದರಾಮಯ್ಯನವರು ಇವರನ್ನು ಕಂಡು ಕರೆದು ಮಾತನಾಡಿಸಿದ್ದಲ್ಲದೆ ಮಾಸಾಶನ ಏರಿಸುವ ಕುರಿತು ಬೆಂಗಳೂರಿಗೆ ಬನ್ನಿ ಮಾತನಾಡೋಣ ಎಂದಿದ್ದರಂತೆ. “ರಾಮಕೃಷ್ಣ ಹೆಗಡೆಯವರ ಕಾಲದಿಂದ ಸಿದ್ದರಾಮಯ್ಯನವರು ಪರಿಚಿತರು. ನನಗೆ  ಬೆಂಗಳೂರಿಗೆ ಹೋಗಲು ಸಾಧ್ಯವಾಗಲಿಲ್ಲ’ ಎನ್ನುತ್ತಾರೆ ಶೆಟ್ಟಿಯವರು. 

ಹಲವು ನಾಟಕ ಕಂಪೆನಿಗಳು
ಸರ್ವಮಂಗಳ ನಾಟಕ ಕಂಪೆನಿಯಲ್ಲಿ 10 ವರ್ಷ, ಹಲಗೇರಿ ಕಂಪೆನಿಯಲ್ಲಿ ಒಂದು ವರ್ಷ ನಟಿಸಿದ್ದ ಶೆಟ್ಟಿಯವರು ಕಲಾವೈಭವ ನಾಟ್ಯ ಸಂಘದ ಏಣಗಿ ಬಾಳಪ್ಪನವರ ಜತೆ ಮೂರು ತಿಂಗಳು ನಟಿಸಿದ್ದರು. ಭಕ್ತ ಅಂಬರೀಷ‌, ಎಚ್ಚಮ ನಾಯಕ, ಬೇಡರ ಕಣ್ಣಪ್ಪ, ಸತೀಧರ್ಮ, ಶ್ರೀರಾಮಜನನ, ದಾನಶೂರ ಕರ್ಣ, ಟಿಪ್ಪು ಸುಲ್ತಾನ್‌, ಮಕ್ಮಲ್‌ಟೋಪಿ ಮೊದಲಾದ ನಾಟಕಗಳಲ್ಲಿ ಅವರು ಅಭಿನಯಿಸಿದ್ದರು. ಎಚ್ಚಮ ನಾಯಕ ನಾಟಕದಲ್ಲಿ ರಾಜ್‌ ಜತೆ ತಿರುವೆಂಕಟ ಪಾತ್ರವನ್ನೂ ನಿರ್ವಹಿಸಿದ್ದರು. 

ಟಾಪ್ ನ್ಯೂಸ್

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.