ಆರನೇ ಶತಮಾನದ ಪಾರಂಪರಿಕ ತಾಣ ಧರಾಶಿವ್ ಗುಹೆ ಜೀರ್ಣೋದ್ಧಾರ
ಕ್ರಿ.ಶ 931 ರಲ್ಲಿ ಬರೆದ ಪುಸ್ತಕದಲ್ಲಿ ಈ ಗುಹೆಗಳ ಮೊದಲ ಉಲ್ಲೇಖವು ಕಂಡುಬಂದಿದೆ.
Team Udayavani, Sep 17, 2020, 11:27 AM IST
ಔರಂಗಾಬಾದ್, ಸೆ. 16: ಮಹಾ ರಾಷ್ಟ್ರದ ಪುರಾತತ್ವ ಇಲಾಖೆಯು ಉಸ್ಮಾನಾಬಾದ್ ಜಿಲ್ಲೆಯಲ್ಲಿರುವ ಏಳು ಧಾರಾಶಿವ ಗುಹೆಗಳಲ್ಲಿ ಒಂದರ ಜೀರ್ಣೋದ್ಧಾರ ಕಾರ್ಯವನ್ನು ಕೈಗೆತ್ತಿಕೊಂಡಿದೆ.
6ನೇ ಶತಮಾನದ ಈ ಪಾರಂಪರಿಕ ತಾಣವು ಭಾರೀ ಮಳೆಯಿಂದಾಗಿ ಹಾನಿಗೊಳಗಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉಸ್ಮಾನಾಬಾದ್ ನಗರದಿಂದ ಸುಮಾರು 8 ಕಿ.ಮೀ.ದೂರದಲ್ಲಿರುವ ಬಾಲ್ಘಾಟ್ ಪರ್ವತ ಶ್ರೇಣಿಯಲ್ಲಿರುವ ಈ ಗುಹೆಗಳು ಕಲಾತ್ಮಕ ಕೆತ್ತನೆಗಳನ್ನು ಹೊಂದಿದ್ದು, ಅವು ಪ್ರದೇಶಕ್ಕೆ
ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಈ ಪ್ರದೇಶದಲ್ಲಿ ಭಾರೀ ಮಳೆಯಾದ ಅನಂತರ ಅವುಗಳಲ್ಲಿ ಒಂದು ಗುಹೆಗೆ ಹಾನಿಯಾಗಿದೆ. ಗುಹೆಯ ಮೇಲ್ಭಾಗದಲ್ಲಿರುವ ಬಂಡೆಯು ಈ ಸ್ತಂಭಗಳೊಂದಿಗೆ ಬೆಂಬಲವನ್ನು ಪಡೆಯಲಿದೆ ಮತ್ತು ಈ ಸ್ಮಾರಕದ ಜೀವನವನ್ನು ಹೆಚ್ಚಿಸಲು ಸಹಾಯ ಮಾಡಲಿದೆ.
ಮುಂದಿನ ಎರಡು ತಿಂಗಳುಗಳವರೆಗೆ ಜೀರ್ಣೋದ್ಧಾರ ಕಾರ್ಯ ಮುಂದುವರಿಯಲಿದೆ ಎಂದು ಖಂಡಾರೆ ಹೇಳಿದ್ದಾರೆ. ಈ ಗುಹೆಗಳ ಮಹತ್ವದ ಬಗ್ಗೆ ಕೇಳಿದಾಗ ನಾಂದೇಡ್ ಮೂಲದ ಇತಿಹಾಸಕಾರ ಪ್ರಭಾಕರ್ ದೇವ್ ಅವರು, ಆರನೇ ಶತಮಾನದಲ್ಲಿ ಕೆತ್ತಲಾದ ಈ ಗುಹೆಗಳು ಸಾತವಾಹನರ ಅವಧಿಯಲ್ಲಿ (ಕ್ರಿ.ಪೂ 230 ರಿಂದ ಕ್ರಿ.ಶ 200 ರವರೆಗೆ) ವ್ಯಾಪಾರ ಕೇಂದ್ರವಾಗಿದ್ದ ಟೇರ್ ಬಳಿ ಇವೆ.
ಕ್ರಿ.ಶ 931 ರಲ್ಲಿ ಬರೆದ ಪುಸ್ತಕದಲ್ಲಿ ಈ ಗುಹೆಗಳ ಮೊದಲ ಉಲ್ಲೇಖವು ಕಂಡುಬಂದಿದೆ. ಗುಹೆಗಳು ಬೌದ್ಧ ಧರ್ಮದ್ದೇ ಅಥವಾ ಜೈನ ಧರ್ಮದ್ದೇ ಎಂಬ ಬಗ್ಗೆ ಇತಿಹಾಸಕಾರರಲ್ಲಿ ಇನ್ನೂ ಚರ್ಚೆ ನಡೆಯುತ್ತಿದೆ ಎಂದರು.
ಪುರಾತತ್ವಶಾಸ್ತ್ರಜ್ಞ ಜೇಮ್ಸ್ ಬರ್ಗೆಸ್ ಅವರ ಪುಸ್ತಕದಲ್ಲೂ ಈ ಗುಹೆಗಳನ್ನು ಉಲ್ಲೇಖೀಸಲಾಗಿದೆ ಮತ್ತು ಅನೇಕ ಇತಿಹಾಸಕಾರರು ಈ ಗುಹೆಗಳ ಬಗ್ಗೆ ಬರೆದಿದ್ದಾರೆ ಎಂದು ದೇವ್ ತಿಳಿಸಿದ್ದಾರೆ. ಅವನತಿ ತಪ್ಪಿಸಲು ಪಾರಂಪರಿಕ ತಾಣದ ಮತ್ತಷ್ಟು ಅವನತಿ ತಪ್ಪಿಸಲು, ರಚನೆಯನ್ನು ಬೆಂಬಲಿಸಲು 12 ಸ್ತಂಭಗಳನ್ನು ನಿರ್ಮಿಸುವ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದು ರಾಜ್ಯ ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕ ಅಜಿತ್ ಖಂಡಾರೆ ಪಿಟಿಐಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ