Desi Swara: ವಿದೇಶಿ ಕನ್ನಡಿಗರಿಗೆ ಉದ್ಯೋಗ ಮಾರ್ಗದರ್ಶಿ ಕಾರ್ಯಾಗಾರ
ಹೆಮ್ಮೆಯ ದುಬೈ ಕನ್ನಡ ಸಂಘದಿಂದ ಆಯೋಜನೆ
Team Udayavani, Aug 5, 2023, 11:04 AM IST
ಅಬುಧಾಬಿ: ಇಲ್ಲಿನ ಹೆಮ್ಮೆಯ ದುಬೈ ಕನ್ನಡ ಸಂಘದ ವತಿಯಿಂದ ತಾಯ್ನಾಡಿನಿಂದ ಕೆಲಸ ಅರಸಿ ಬರುವ ಉದ್ಯೋಗಾಕಾಂಕ್ಷಿಗಳಿಗಾಗಿ ಉದ್ಯೋಗ ಮಾರ್ಗದರ್ಶನ ಕಾರ್ಯಾಗಾರವು ಜು.30ರಂದು ಜರಗಿತು. ಯೂನಿಕ್ ವರ್ಲ್ಡ್ ಎಜುಕೇಶನ್ ಸೆಂಟರ್ನಲ್ಲಿ ನಡೆದ ಕಾರ್ಯಾಗಾರದಲ್ಲಿ ಸಂಯುಕ್ತ ಅರಬ್ ಸಂಸ್ಥಾನದ ವಿವಿಧ ಭಾಗಗಳಿಂದ ಹಲವು ಉದ್ಯೋಗಾರ್ಥಿಗಳು ಆಗಮಿಸಿ ಕಾರ್ಯಾಗಾರದ ಸದಯಪಯೋಗ ಪಡೆದುಕೊಂಡರು.
ಮಾರ್ಗದರ್ಶಕರಾಗಿ ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಪಾನ್ ವರ್ಲ್ಡ್ ಎಜುಕೇಶನ್ ಮ್ಯಾನೇಜಿಂಗ್ ಡೆರಕ್ಟ್ರ್ ರಾಘವೇಂದ್ರ ಬೆಂಗಳೂರು, ಬಿಸನ್ನೆಸ್ ಕನ್ಸ್ಲ್ಟೆಂಟ್ ಮೆರ್ವಿನ್ ಮಂಗಳೂರು, ಇಲೊ#à ಸ್ಕಿಲ್ಸ್ನ ಮ್ಯಾನೇಜಿಂಗ್ ಡೆರಕ್ಟ್ರ್ ಕೌನ್ಸ್ಲೆರ್ ನಸ್ರಿನ್ ಮಂಗಳೂರು ಹಾಗೂ ಹೆಲ್ತ್ ಕೇರ್ನ ಎಚ್ಆರ್ ರಕ್ಷಿತಾ ಮಂಡ್ಯ ಅವರು ಆಗಮಿಸಿದ್ದರು.
ಕಾರ್ಯಾಗಾರದಲ್ಲಿ ಸಂದರ್ಶನವನ್ನು ಹೇಗೆ ಎದುರಿಸಬೇಕು, ಬೇರೆ ಬೇರೆ ಸ್ಥಳಗಳಲ್ಲಿ ಉದ್ಯೋಗ ಹುಡುಕುವುದು ಹೇಗೆ ಹಾಗೂ ಉದ್ಯೋಗಕ್ಕೆ ಹೇಗೆ ತಯಾರಿ ನಡೆಸಬೇಕು ಎನ್ನು ವುದರ ಬಗ್ಗೆ ಮಾಹಿತಿಯನ್ನು ನೀಡಲಾಯಿತು.
ಹೆಮ್ಮೆಯ ಕನ್ನಡ ಸಂಘದ ಉಪಾಧ್ಯಕ್ಷರಾದ ಹಾದಿಯ ಮಂಡ್ಯ ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಂಘದ ಮಾಜಿ ಅಧ್ಯಕ್ಷರಾದ ಮಮತಾ ಮೈಸೂರು ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ಯಕ್ರಮದ ಸಂಯೋಜಕರಾಗಿ ಸಂಘದ ಮುಖ್ಯ ಕಾರ್ಯದರ್ಶಿ ರಫೀಕಲಿ ಕೊಡಗು, ಸಂಘದ ಉಪಸಮಿತಿ ಸದಸ್ಯರಾದ ಚೇತನ್ ಬೆಂಗಳೂರು, ನಜೀರ ಮಂಡ್ಯ, ಹಾದಿ ಕುಂದಾಪುರ, ಪ್ರತಾಪ್ ಮಡಿಕೇರಿ ಮತ್ತು ರಜನಿ ಬೆಂಗಳೂರು ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು.