ಕೊಂಕಣಿ ತ್ರಿವೇಣಿ ಕಲಾ ಸಂಗಮ ಮುಂಬಯಿ : ಕೊಂಕಣಿ ಉತ್ಸವ


Team Udayavani, Jan 30, 2018, 4:17 PM IST

2-nhhh.jpg

ಮುಂಬಯಿ: ಮಾನವ ಧರ್ಮದ ಸಾರ ತಿಳಿದಾಗಲೇ ಸಮಾಜದಲ್ಲಿ ಸಾಮರಸ್ಯದ ಬದುಕು ಸಾಧ್ಯವಾಗುವುದು. ಐಕ್ಯತೆಯಿಲ್ಲದೆ ಸಮಾಜವನ್ನು ಕಟ್ಟಿಬೆಳೆಸಲು ಅಸಾಧ್ಯ. ಆದ್ದರಿಂದ ಭಾವೈಕ್ಯತಾ ಬದುಕು  ತಿಳಿಸಿಕೊಡುವ ಉದ್ದೇಶ ಸಂಘ ಸಂಸ್ಥೆಗಳಿಂದಾಗಬೇಕು. ನಿಸ್ವಾರ್ಥ ಸೇವೆಯು ಸಮಾಜ ಸೇವೆಯ ಅರ್ಥವನ್ನು ವಿಸ್ತಾರಗೊಳಿಸುತ್ತದೆ. ನಮ್ಮಲ್ಲಿನ ಹಲವಾರು ಸಂಸ್ಥೆಗಳು ತಮ್ಮ ಕಾರ್ಯ ಸಾಫಲ್ಯದತ್ತ ಯಶಸ್ಸಿನ ಹೆಜ್ಜೆಗಳನ್ನು ದಾಖಲಿಸಿವೆ.  ಆ ಪೈಕಿ  ಕೊಂಕಣಿ ತ್ರಿವೇಣಿ ಕಲಾ ಸಂಗಮವೂ ಒಂದಾಗಿದೆ. ಸಮಾಜಮುಖೀ ಚಿಂತನೆಗಳೇ ಇದಕ್ಕೆಲ್ಲಾ ಪ್ರೇರಣೆಯಾಗಿದೆ. ಸಮಾಜ ಸೇವೆಗೆ ನೂರಾರು ದಾರಿಗಳಿವೆ. ಸರ್ವ ಕಾರ್ಯಗಳು ಸಾಂಗೋಪವಾಗಿ ನೆರವೇರಿದಾಗ ಮಾತ್ರ ಸಂಸ್ಥೆಗಳು ಮುನ್ನಡೆಯಲು ಸಾಧ್ಯ.  ಭಾವೈಕ್ಯತೆಯ ಬದುಕು ರೂಢಿಸಿಕೊಂಡು ತಾವೂ ಏಕಾಗ್ರತೆಯಿಂದ ಕಾರ್ಯತತ್ಪರರಾಗಿ ಸಮಾಜಕ್ಕೆ ಆದರ್ಶಪ್ರಾಯರಾಗಬೇಕು ಎಂದು ಶ್ರೀ  ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಮಠಾಧೀಶ ಪೂಜ್ಯ ಶ್ರೀಮದ್‌ ವಿದ್ಯಾಧಿರಾಜ ತೀರ್ಥ ಶ್ರೀಪಾದ್‌ ವಡೆಯರ್‌ ಸ್ವಾಮೀಜಿ ನುಡಿದರು.

ಜ. 27 ರಂದು ಸಂಜೆ ದಾದರ್‌ ಪೂರ್ವದ ಸ್ವಾಮಿ ನಾರಾಯಣ ಮಂದಿರದ ಯೋಗಿ ಸಭಾಗೃಹದಲ್ಲಿ ನಡೆದ ಕೊಂಕಣಿ ತ್ರಿವೇಣಿ ಕಲಾ ಸಂಗಮ್‌ ಮುಂಬಯಿ ಇದರ ಕೊಂಕಣಿ ಉತ್ಸವ 2018ನ್ನು ಉದ್ಘಾಟಿಸಿ ಶ್ರೀಗಳು ಅನುಗ್ರಹಿಸಿದರು.

ಗುರುವಂದನೆ 

ಅಪರಾಹ್ನ ವಡಾಲದ ಶ್ರೀ  ರಾಮ ಮಂದಿರದಿಂದ ಗುರುಶಿಷ್ಯ ಯತಿವರ್ಯರ‌ನ್ನು ಭವ್ಯ ಶೋಭಾಯಾತ್ರೆ ಮೂಲಕ ವೇದಘೋಷಗಳೊಂದಿಗೆ ಸಭಾಗೃಹಕ್ಕೆ ಕರೆತರಲಾಯಿತು. ಬಳಿಕ  ಶ್ರೀ ಸಂಸ್ಥಾನ ಜೀವೋತ್ತಮ ಮಠದ  ಪಟ್ಟಶಿಷ್ಯ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರ  ದಿವ್ಯೋಪಸ್ಥಿತಿಯಲ್ಲಿ ನಡೆಸಲ್ಪಟ್ಟ ಭವ್ಯ ಸಮಾರಂಭದಲ್ಲಿ ಸ್ವರ್ಣ ಸನ್ಯಾಸ ದೀಕ್ಷೋತ್ಸವ ಪೂರೈಸಿದ ವಿದ್ಯಾಧಿರಾಜ ತೀರ್ಥಶ್ರೀಗಳ ಪಾದಪೂಜೆಯನ್ನು ಸಂಸ್ಥೆಯ ಮುಖ್ಯ ಸಂಚಾಲಕ ಡಿ. ಎಂ. ಸುಖಾ¤ಣRರ್‌ ಮತ್ತು ಗೌರವ ಕಾರ್ಯದರ್ಶಿ ಮುಕುಂದ್‌ ವೈ. ಕಾಮತ್‌ ನೆರೆವೆರಿಸಿ ಗುರುವಂದನೆ ಸಲ್ಲಿಸಿದರು. ವಿದ್ಯಾಧಿರಾಜ ಶ್ರೀಗಳು “ಗೌರವ ವಂದನಾ’ ಸ್ಮರಣಿಕೆಯನ್ನು ಬಿಡುಗಡೆಗೊಳಿಸಿದರು.

ಸಮಾಜ ಸೇವೆ ಎಂಬುವುದು ಮಾನವ ಸಮುದಾಯದ ಒಂದು ಅವಶ್ಯಕ ಕ್ರಿಯೆ. ತ್ಯಾಗ ಮನೋಭಾವದಿಂದ ಮಾಡಿದ ಸೇವೆ ಎಂದಿಗೂ ಶ್ರೀಹರಿಗೆ ಸಲ್ಲುತ್ತದೆ. ಆದ್ದರಿಂದ ವೈಚಾರಿಕ ಪ್ರಗತಿಯ ಜತೆಗೆ ಸಮಾಜೋನ್ನತಿಯ ಕಾಯಕ ತಮ್ಮ ಕೆಲಸವನ್ನಾಗಿಸಿಕೊಳ್ಳಬೇಕು. ಇಂತಹ ಸೇವೆ ಶಾಶ್ವತ ಮತ್ತು ಅರ್ಥಪೂರ್ಣವೂ ಆಗುತ್ತದೆ. ನಿಸ್ವಾರ್ಥ ಸಮಾಜ ಸೇವೆಯಿಂದ ಮಾತ್ರ ಜೀವನ ಸಾರ್ಥಕ್ಯ ಕಾಣಲು ಸಾಧ್ಯ. ಸೇವೆಯಲ್ಲಿ ಛಲವನ್ನು ಒಲವನ್ನು ಗಳಿಸಿಕೊಂಡಿರುವ ಮುಂಬಯಿಗರ ಆತ್ಮಬಲ ಅಪಾರವಾಗಿದೆ ಎಂದು ಶ್ರೀ ವಿದ್ಯಾಧೀಶ ತೀರ್ಥ ಶ್ರೀಗಳು ನುಡಿದರು.

ಪದ್ಮ ವಿಭೂಷಣ, ಅನೀಲ್‌ ಕಾಕೋಡ್ಕರ್‌, ವಿ. ಲೀಲಾಧರ್‌, ಪ್ರಕಾಶ್‌ ಮಲ್ಯ, ಎನ್‌. ಡಿ. ಸೋಂದೆ, ಅಶೋಕ್‌ ಸರಾಫ್‌, ಸುಮನ್‌ ಕಲ್ಯಾಣು³ರ್‌, ಅಜಿತ್‌ ಗುಂಜಿಕರ್‌, ಅನಿಲ್‌ ದೆೇಸಾಯಿ, ಪ್ರವೀಣ್‌ ಕಡ್ಲೆ, ಕಿಶೋಕ್‌ ಅವರೆಸೇಖರ್‌, ಜಗನ್ನಾಥ್‌ ಪೈ, ಎಸ್‌. ಕೆ ಸಖಾಲ್ಕರ್‌, ಸಂದೀಪ್‌ ಶಿಕ್ರೆ, ಹರೀಶ್‌ ಭಟ್‌, ಪ್ರಕಾಶ್‌ ಪೈ, ಶ್ಯಾಮಸುಂದರ್‌ ಕೇಶ್‌ಕಾಮತ್‌, ಎಂ. ಜಗನ್ನಾಥ್‌ ಶೆಣೈ, ಯು. ರಾಮದಾಸ್‌ ಕಾಮತ್‌, ಬಸ್ತಿ ವಾಮನ ಶೆಣೈ, ನ್ಯಾಯವಾದಿ ಎಂ. ವಿ.  ಕಿಣಿ, ರಘುನಂಧನ್‌ ಎಸ್‌. ಕಾಮತ್‌, ಕುಂದಾಪುರ ಶ್ರೀನಿವಾಸ ಪ್ರಭು, ಆರ್‌. ಆರ್‌. ಕಾಮತ್‌, ಹನುಮಂತ ಪೈ, ದಿನೇಶ್‌ ಆರ್‌. ನಾಯಕ್‌, ಜಿ. ದಾಮೋದರ ರಾವ್‌, ಅರುಣ್‌ ನಾಯಕ್‌, ವಸಂತ್‌ ಶ್ಯಾನುಭಾಗ್‌ ಮೊದಲಾದವರು ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು. 

ತ್ರಿವೇಣಿ ಸಂಗಮ್‌ನ ಜೊತೆ ಸಂಚಾಲಕ ಕೆ. ಶ್ರೀನಿವಾಸ ಪ್ರಭು, ಉಪಾಧ್ಯಕ್ಷರಾದ ಡಾ| ಸಿ. ಎನ್‌. ಶೆಣೈ, ಸುಗುಣಾ ಕಾಮತ್‌, ಶೋಭಾ ಕುಲಕರ್ಣಿ, ಪ್ರಕಾಶ್‌ ಭಟ್‌, ಉಮೇಶ್‌ ಪೈ, ಕಿರಣ್‌ ಕಾಮತ್‌ ಮತ್ತು ಸಚಿನ್‌ ಕಾಮತ್‌ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಅಶೋಕ್‌ ಪಟಿR ಬಳಗದಿಂದ  ಮುಗಾœ ವೈಶಂಪಯನ್‌, ಪ್ರಥಮೇಶ್‌ ಲಗಾಟೆ ಮತ್ತಿತರ ಕಲಾವಿದರ ಕೂಡುವಿಕೆಯಲ್ಲಿ ಸಂಗೀತ ಸಂಧ್ಯಾ ಕಛೇರಿ ನಡೆಯಿತು.

ವೈಧಿಕರಾದ ವೇದಮೂರ್ತಿ ಮೋಹನ್‌ದಾಸ ಆಚಾರ್ಯ, ವೇದಮೂರ್ತಿ  ಸುಧಾಮ ಭಟ್‌, ವೇದಮೂರ್ತಿ ಅನಂತ್‌ ಭಟ್‌ ಮತ್ತು ವೇದಮೂರ್ತಿ  ಗೋವಿಂದ ಆಚಾರ್ಯ ಮೊದಲಾದವರು ವೇದಘೋಷಗೈದರು. ಪೂಜಾ ಗಾಯೊ¤ಂಡೆ ಸ್ವಾಗತಗೀತೆ ಹಾಡಿದರು. ಮುಖ್ಯ ಸಂಚಾಲಕ ಡಿ. ಎಂ. ಸುಖಾ¤ಣRರ್‌ ಸ್ವಾಗತಿಸಿದರು. 

ಅಧ್ಯಕ್ಷ ಉಲ್ಲಾಸ್‌ ಡಿ. ಕಾಮತ್‌ ತ್ರಿವೇಣಿ ಸಂಗಮ್‌ನ ಕಾರ್ಯವೈಖರಿಯನ್ನು ವಿವರಿಸಿದರು. ಮಂಗಳಾ ಖಾಡಿಳ್ಕರ್‌ ಮತ್ತು ಕುಂಬ್ಳೆ ನರಸಿಂಹ ಪ್ರಭು ಕಾರ್ಯಕ್ರಮ ನಿರೂಪಿಸಿದರು. 

ಸಹ ಸಂಚಾಲಕ ಪ್ರದೀಪ್‌ ಜಿ. ಪೈ  ಹಾಂಗ್ಯೋ ಮಂಗಳೂರು ಇವರು ವಂದಿಸಿದರು. ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. 

ಚಿತ್ರ-ವರದಿ: ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.