ಮಹಾರಾಜಾ ವಿನ್ನರ್,ರಿಸರ್ವ್‌ ಬ್ಯಾಂಕ್‌ಗೆ ರನ್ನರ್ ಪ್ರಶಸ್ತಿ


Team Udayavani, Mar 28, 2017, 5:27 PM IST

26-Mum03a.jpg

ಮುಂಬಯಿ: ಕರ್ನಾಟಕ ನ್ಪೊರ್ಟಿಂಗ್‌ ಅಸೋಸಿಯೇಶನ್‌ ಆಶ್ರಯದಲ್ಲಿ ರವಿ ಅಂಚನ್‌ನ ಅವರ ಪ್ರೋತ್ಸಾಹದಿಂದ 7 ವರ್ಷದ ಬಳಿಕ ಚರ್ಚ್‌ಗೇಟ್‌ ಕ್ರೀಡಾಂಗಣದಲ್ಲಿ ನಡೆದ ದಿ| ವಿಶ್ವನಾಥ ಅಂಚನ್‌ ಸ್ಮಾರಕ ಹಿರಿಯರ ಫುಟ್ಬಾಲ್‌ ಪಂದ್ಯಾಟದಲ್ಲಿ ಮಹಾರಾಜಾ (ಏರ್‌ಇಂಡಿಯಾ) ತಂಡವು ವಿನ್ನರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರೆ, ರಿಸರ್ವ್‌ ಬ್ಯಾಂಕ್‌ ತಂಡವು ರನ್ನರ್ ಪ್ರಶಸ್ತಿಗೆ ಭಾಜನವಾಯಿತು.

ಮಾ. 25ರಂದು ಅಪರಾಹ್ನ ಫೈನಲ್‌ ಪಂದ್ಯವು ನಡೆದಿದ್ದು, ಪ್ರಥಮಾರ್ಧದಲ್ಲಿ ಮಹಾರಾಜಾ ಮತ್ತು ರಿಸರ್ವ್‌ ಬ್ಯಾಂಕ್‌ ತಂಡವು ಸಮಾಬಲ ಸಾಧಿಸಿದರೆ,  ದ್ವಿತೀಯಾರ್ಧದಲ್ಲಿ 28ನೇ ನಿಮಿಷಕ್ಕೆ ಡೇರೇಲ್‌ ಅವರು ಮಾಡಿದ ಪಾಸ್‌ನ್ನು ಅಂತಾರಾಷ್ಟ್ರೀಯ ಆಟಗಾರ ಗೋಡ್‌ಫ್ರೆಡ್‌ ಪೆರೇರಾ ಅವರು ಗೋಲಿಗೆ ಪರಿವರ್ತಿಸಿ ತಂಡಕ್ಕೆ 1-0 ಅಂತರದ ಮುನ್ನಡೆ ತಂದುಕೊಟ್ಟರು, ಅನಂತರ ಅಂಥೋನಿ ಫೆರ್ನಾಂಡಿಸ್‌ ಅವರ ಮತ್ತೂಂದು ಗೋಲಿನಿಂದ ಮಹಾರಾಜಾ ತಂಡವು 2-0 ಮುನ್ನಡೆ ಸಾಧಿಸಿ, ಚಾರಿತ್ರಿಕ ಗೆಲುವನ್ನು ದಾಖಲಿಸಿದ ಮಹಾರಾಜಾ ತಂಡಕ್ಕೆ  ವಿನ್ನರ್ ಪ್ರಶಸ್ತಿಯೊಂದಿಗೆ 50,000 ರೂ. ನಗದು ಬಹುಮಾನವನ್ನು ಗಣ್ಯರು ಪ್ರದಾನಿಸಿದರು.

ಮೂರನೇ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಗೋಲ್ಡನ್‌ ಗನರ್ಸ್‌  ತಂಡವು ಸ್ಟೇಟ್‌ ಬ್ಯಾಂಕ್‌ ತಂಡವನ್ನು 1-0 ಅಂತರದ ಸೋಲಿಸಿತು. ವಿಜಯಿ ತಂಡದ ಪರವಾಗಿ ಫಿಲಿಫ್‌ ಗೋನ್ಸಾಲ್ವಿಸ್‌ ಗೋಲು ಹೊಡೆದರು. ಉತ್ತಮ ಗೋಲ್‌ಕೀಪರ್‌ ಪ್ರಶಸ್ತಿಯನ್ನು ಮಹಾರಾಜ ತಂಡದ ಶ್ಯಾಮ್‌ ಸಾವಂತ್‌, ಉತ್ತಮ ಡಿಫೆಂಡರ್‌ ಪ್ರಶಸ್ತಿಯನ್ನು ಮಹಾರಾಜಾ ತಂಡದ ಜೋಗಿಂಧರ್‌ ಥಾಪಾ, ಉತ್ತಮ ಮಿಡ್‌ ಫೀಲ್ಡರ್‌ ಪ್ರಶಸ್ತಿಯನ್ನು ಸೆಂಟ್ರಲ್‌ ರೈಲ್ವೇ ತಂಡದ ಅರೀಫ್‌ ಅನ್ಸಾರಿ, ಉತ್ತಮ ಫಾರ್ವರ್ಡರ್‌ ಪ್ರಶಸ್ತಿಯನ್ನು ಮಹಾರಾಜಾ ತಂಡದ ಗೋಡ್‌ಫ್ರೇಡ್‌ ಪರೇರಾ, ಬೆಸ್ಟ್‌ ಸ್ಕೋರರ್‌ ಪ್ರಶಸ್ತಿಯನ್ನು ರಿಸರ್ವ್‌ ಬ್ಯಾಂಕ್‌ ತಂಡದ ವಸಂತ ಕರ್ಕೇರ ಅವರು  ಪಡೆದು ಎಲ್ಲರ ಪ್ರಶಂಸೆಗೆ ಪಾತ್ರರಾದರು.

ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಡಬಲ್‌ ಒಲಂಪಿಯನ್‌ ಎಸ್‌. ಎಸ್‌. ನಾರಾಯಣ್‌, ಯೂನಿಯನ್‌ ಬ್ಯಾಂಕಿನ ಡಿಜಿಎಂ ಒ. ಪಿ. ನಿಗಂ, ಅರ್ಜುನ್‌ ಪ್ರಶಸ್ತಿ ಪುರಸ್ಕೃತ ಅಶೋಕ್‌ ಶಿಂಧೆ, ಯೂನಿಯನ್‌ ಬ್ಯಾಂಕ್‌ನ ಮಾಜಿ ನಿರ್ದೇಶಕ ಶಂಕರ್‌ ಸೌತರ್‌ ವಾಜ್‌, ಎಸ್‌. ಎಂ. ಶೆಟ್ಟಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು, ಪಶ್ಚಿಮ ರೈಲ್ವೇಯ ರಣಜಿತ್‌ ಮಟರ್‌ ಅವರು ಉಪಸ್ಥಿತರಿದ್ದು ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು. 

ಸಮಾರಂಭದಲ್ಲಿ ಕರ್ನಾಟಕ ನ್ಪೋರ್ಟಿಂಗ್‌ ಅಸೋಸಿಯೇಶನ್‌ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸಮಿತಿಯ ಸದಸ್ಯರು, ಫುಟ್ಬಾಲ್‌ ಸಮಿತಿಯ ಸದಸ್ಯರು, ಕ್ರೀಡಾಭಿಮಾನಿಗಳು, ಹಿತೈಷಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ರನ್ನರ್ ಪ್ರಶಸ್ತಿ ಪಡೆದ ರಿಸರ್ವ್‌ ಬ್ಯಾಂಕ್‌ 
ತಂಡವು 35,000 ರೂ. ನಗದು ಮತ್ತು ಪ್ರಶಸ್ತಿ, ತೃತೀಯ ಸ್ಥಾನ ಪಡೆದ ಗೋಲ್ಡನ್‌ ಗನರ್ಸ್‌ ತಂಡವು 15,000 ರೂ. ನಗದು ಬಹುಮಾನವನ್ನು ಪಡೆಯಿತು.

ಟಾಪ್ ನ್ಯೂಸ್

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

police

Bidar; ಹಣ ಹಂಚುವ ದೂರು: ನಾಗಮಾರಪಳ್ಳಿ‌ ಮನೆಯಲ್ಲಿ ಪರಿಶೀಲನೆ

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.