ಜಿಎಸ್ಬಿ ಮಂಡಲ ಡೊಂಬಿವಲಿ ಅಧ್ಯಕ್ಷರಾಗಿ ಮನೋಹರ್ ಪೈ
Team Udayavani, Feb 16, 2018, 10:00 AM IST
ಮುಂಬಯಿ: ಜಿ. ಎಸ್. ಬಿ. ಮಂಡಲ ಡೊಂಬಿವಲಿ ಇದರ 2018-2019 ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಫೆ. 11 ರಂದು ಡೊಂಬಿವಲಿ ಪೂರ್ವದ ಗೋಗ್ರಾಸ್ವಾಡಿಯ ಜಿಎಸ್ಬಿ ಮಂಡಲ ಶಾಲಾ ಆವರಣದಲ್ಲಿ ನಡೆಯಿತು.
ಅಧ್ಯಕ್ಷರಾಗಿ ಮನೋಹರ್ ಡಿ. ಪೈ, ಕಾರ್ಯದರ್ಶಿ ಆಗಿ ನಿತ್ಯಾನಂದ ಕೆ. ಶೆಣೈ, ಕೋಶಾಧಿಕಾರಿಯಾಗಿ ವೆಂಕಟೇಶ್ ಆರ್. ಕಾಮತ್ ಅವರು ಅವಿರೋಧವಾಗಿ ಪುನ:ರಾಯ್ಕೆಗೊಂಡರು. ಸಮಿತಿಯ ಕಾರ್ಯಕಾರಿ ಸಮಿತಿಯ ಆಯ್ಕೆಗಾಗಿ ಚುನಾವಣೆ ನಡೆಸಲ್ಪಟ್ಟಿದ್ದು, ಗಣೇಶ ನಾಗೇಶ್ ಕಿಣಿ, ನಾರಾಯಣ ಆರ್. ಕಾಮತ್, ರಮಾನಂದ ಪಡಿಯಾರ್, ವಿಷ್ಣುದಾಸ್ ಮಲ್ಯ, ಮುರಳೀಧರ ಆರ್. ಭಟ್, ವಿನೀತ್ ವಿ. ಕಿಣಿ, ಉಮೇಶ್ ಶೆಣೈ, ರಾಜೇಂದ್ರ ಭಟ್, ವೃಂದಾ ಸುರೇಂದ್ರ ಮಹಾಲೆ, ಪುಷ್ಪಾ ಪಿ. ಪಡಿಯಾರ್, ಸುಜಯಾ ಎಸ್. ನಾಯಕ್ ಅವರು ಅತ್ಯಧಿಕ ಮತಗಳಿಂದ ಚುನಾಯಿತರಾದರು. ಈ ಸಮಿತಿಯ ಸತತ ಮೂರನೇ ಬಾರಿಗೆ ಪುನರಾಯ್ಕೆ ಗೊಂಡಿರುವುದು ವಿಶೇಷತೆಯಾಗಿದೆ.