ಮೀರಾರೋಡ್ ಶ್ರೀ ಪಂಚಮಾಣಿಕ್ಯ ನಾಗ ಸನ್ನಿಧಿ: ಗಣೇಶೋತ್ಸವ
Team Udayavani, Aug 29, 2017, 4:25 PM IST
ಮುಂಬಯಿ: ಮೀರಾರೋಡ್ ಪೂರ್ವದ ಗೌರವ್ ಗ್ಯಾಲಕ್ಸಿ ಫೇಸ್ 1ರಲ್ಲಿರುವ ಶ್ರೀ ಪಂಚಮಾಣಿಕ್ಯ ನಾಗ ಸನ್ನಿಧಿಯ ಆವರಣದಲ್ಲಿ ಶ್ರೀ ಗಣೇಶೋತ್ಸವವು ಜರಗಿತು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಸಾಂತಿಂಜ ಜನಾದìನ್ ಭಟ್ ಅವರ ಪೌರೋಹಿತ್ಯದಲ್ಲಿ ಶ್ರೀ ಸತ್ಯನಾರಾಯಣ ಪೂಜೆ, ಗಣಪತಿಯ ಮಹಾಪೂಜೆ ಹಾಗೂ ನಾಗದೇವರಿಗೆ ವಿಶೇಷ ಪೂಜೆಗಳು ಜರಗಿದವು. ಶೈವಲ್ ಲೀಲಾಧರ ಕರ್ಕೇರ ದಂಪತಿ ಪೂಜಾ ಸಂಕಲ್ಪದ ವ್ರತ ಕೈಗೊಂಡಿದ್ದರು.
ಸನ್ನಿಧಿಯ ಬಗ್ಗೆ ತಿಳಿಸಿದ ಸ್ಥಾಪಕ ಲೀಲಾಧರ ಕರ್ಕೇರ ಅವರು, ಕಳೆದ ಹನ್ನೊಂದು ವರ್ಷಗಳಿಂದ ನಾವು ಶ್ರೀ ಗಣೇಶೋತ್ಸವವನ್ನು ಆಚರಿಸುತ್ತಾ ಬಂದಿದ್ದೇವೆ. ಶ್ರೀ ಸನ್ನಿಧಿಯ ಪಾವಿತ್ರÂತೆಯಿಂದ ಅನೇಕ ಭಕ್ತರ ಇಷ್ಟಾರ್ಥಗಳು ಈಡೇರಿವೆ. ಆರ್ಥಿಕವಾಗಿ ಹಿಂದುಳಿದವರಿಗೆ ದುಬಾರಿ ವೈದ್ಯಕೀಯ ಚಿಕಿತ್ಸೆಗೆ ಹಣದ ನೆರವನ್ನು ಶ್ರೀ ಕ್ಷೇತ್ರದ ವತಿಯಿಂದ ನೀಡಲಾಗಿದೆ ಎಂದರು. ಆ. 29ರಂದು ಗಣೇಶನ ವಿಸರ್ಜನಾ ಶೋಭಾಯಾತ್ರೆ ನಡೆಯಲಿದೆ ಎಂದರು.
ಟ್ರಸ್ಟಿಗಳಾದ ನಾಗವೇಣಿ ಲೀಲಾಧರ ಕರ್ಕೇರ, ಪ್ರೀತಿ ಶೈವಲ್ ಕರ್ಕೇರ, ಸುರೇಶ್ ಎಲ್. ಕರ್ಕೇರ, ಶಿವಾನಿ ಎಲ್. ಕರ್ಕೇರ ಸಹಕರಿಸಿದರು. ವಿವಿಧ ಸಮಾಜ ಬಾಂಧವರು, ತುಳು ಕನ್ನಡಿಗರು ಉಪಸ್ಥಿತರಿದ್ದರು.