ನೆರೂಲ್ ದೇವಾಡಿಗ ಭವನದಲ್ಲಿ ಶ್ರಾವಣ ಸಂಭ್ರಮದ ಭಜನ ಕಾರ್ಯಕ್ರಮ
Team Udayavani, Aug 9, 2017, 3:26 PM IST
ಮುಂಬಯಿ: ದೇವಾಡಿಗ ಸಂಘ ಮುಂಬಯಿ ಇದರ ಶ್ರೀ ರಾಮ ಭಜನ ಮಂಡಳಿಯ ವತಿಯಿಂದ ನೆರೂಲ್ ದೇವಾಡಿಗ ಭವನದಲ್ಲಿ ಆ. 5ರಂದು ಶ್ರಾವಣದ ನಿಮಿತ್ತ ಹಾಗೂ ಶ್ರೀ ರಾಘವೇಂದ್ರ ಸ್ವಾಮಿಯವರ ಪುಣ್ಯತಿಥಿಯ ಅಂಗವಾಗಿ ಭಜನ ಕಾರ್ಯಕ್ರಮ ನಡೆಯಿತು.
ಪೂಜೆಯ ಪ್ರಾಯೋಜಕತ್ವವನ್ನು ನೆರೂಲ್ನ ದೇವಾಡಿಗ ಸಂಘದ ಕೋಶಾಧಿಕಾರಿ ದಯಾನಂದ್ ದೇವಾಡಿಗ ಮತ್ತು ಪೂರ್ಣಿಮಾ ದೇವಾಡಿಗ ದಂಪತಿ ವಹಿಸಿದ್ದರು. ಸಂಸ್ಥೆಯ ಅನೂಪ್ ಜಾಲೋಟ್, ಸುರೇಶ್ ದೇವಾಡಿಗ ನೇರುಲ್, ಶಂಕರ ಮೊಲಿ ಸಾಕಿನಾಕಾ, ಯಶವಂತ್ ದೇವಾಡಿಗ ಸುರತ್ಕಲ್, ರಂಜಿನಿ ಮೊಲಿ, ದಯಾನಂದ್ ದೇವಾಡಿಗ ನೇರುಲ್, ಆಶಾ ದೇವಾಡಿಗ ಸಾನಾ³ಡ, ಚಂದ್ರಶೇಖರ ದೇವಾಡಿಗ ಮತ್ತು ಭಜನೆ ಭುವಾಜಿ ವಿಟuಲ ದೇವಾಡಿಗ ಅವರು ಭಜನ ಕಾರ್ಯಕ್ರಮದಲ್ಲಿ ಸಹಕರಿಸಿದರು.
ಸುರೇಶ್ ದೇವಾಡಿಗ ನೆರೂಲ್, ಯಶವಂತ್ ದೇವಾಡಿಗ ಸುರತ್ಕಲ್, ಶಂಕರ್ ಮೊಲಿ ಸಾಕಿನಾಕಾ ಮತ್ತು ಕದಂ ನೆರೂಲ್ ಅವರ ಭಕ್ತಿಗೀತೆಗಳು ನೆರೆದಿದ್ದ ಜನರ ಮನಸೂರೆಗೊಂಡಿತು. ಈ ಸಂದರ್ಭ ಇತ್ತೀಚೆಗೆ ಮಲೇಶ್ಯಾದ ಮಾಸ್ಟರ್ ಅಥ್ಲೆಟಿಕ್ ಚಾಂಪಿಯನ್ಶಿಪ್ನಲ್ಲಿ ಉದ್ದ ಜಿಗಿತ, ಎತ್ತರ ಜಿಗಿತ, ಮತ್ತು ಟ್ರಿಪಲ್ ಜಂಪ್ನಲ್ಲಿ ಕ್ರಮವಾಗಿ ಚಿನ್ನ, ಬೆಳ್ಳಿ ಪದಕ ವಿಜೇತೆ ಜಯಂತಿ ಎಂ. ದೇವಾಡಿಗ ಮತ್ತು ಸುರತ್ಕಲ್ನ ಖ್ಯಾತ ಕ್ಲಾರಿಯೋನೆಟ್ ವಾದಕ ಮತ್ತು ಉತ್ತಮ ಭಜನೆ ಗಾಯಕ ಯಶವಂತ ದೇವಾಡಿಗ ಅವರನ್ನು ಸತ್ಕರಿಸಲಾಯಿತು. ಲೋಲಾಕ್ಷ ಅತ್ತಾವರ ಅವರು ದೇವಾಡಿಗ ಸಂಘದ ವೈದ್ಯಕೀಯ ನಿಧಿಗೆ 25 ಸಾವಿರ ರೂ. ದೇಣಿಗೆ ನೀಡಿದರು. ಪ್ರಧಾನ ಅರ್ಚಕ ಎಸ್. ಪಿ. ಕರ್ಮರನ್ ಪೂಜಾವಿಧಿ ಪೂರೈಸಿದರು. ನ್ಯಾಯವಾದಿ ಪ್ರಭಾಕರ ದೇವಾಡಿಗ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ