ಗಂಧದ ಕುಡಿ ಚಿತ್ರದಲ್ಲಿ ಮಿಂಚಲಿರುವ ನಿಧಿ ಶೆಟ್ಟಿ
Team Udayavani, Jan 16, 2018, 2:28 PM IST
ಶೀಘ್ರದಲ್ಲೇ ಬಿಡುಗಡೆಗೊಳ್ಳಲಿರುವ ಹಿಂದಿಯಲ್ಲಿ ಚಂದನ್ ವನ್ ಕನ್ನಡದಲ್ಲಿ ಗಂಧದ ಕುಡಿ ಚಲನಚಿತ್ರದಲ್ಲಿ ಬಹುಮುಖ್ಯ ಪಾತ್ರದಲ್ಲಿ ಮುಂಬಯಿ ಮೀರಾ ಭಾಯಂದರ್ನ ಬಾಲ ಕಲಾ ವಿದೆ ನಿಧಿ ಎಸ್. ಶೆಟ್ಟಿ ಕಾಣಿಸಿಕೊಳ್ಳಲಿ ದ್ದಾರೆ. ಮೂಲತಃ ಮೂಡುಕೊಣಾಜೆ ಕಾಪು ಹೌಸ್ ಸಂಜೀವ ಶೆಟ್ಟಿ ಮತ್ತು ಬಜಗೋಳಿ ಮುಡಾರು ಮನೆ ಸುನೀತಾ ಎಸ್. ಶೆಟ್ಟಿ ದಂಪತಿಯ ಪುತ್ರಿಯಾಗಿರುವ ನಿಧಿಯದ್ದು ಬಹುಮುಖ ಪ್ರತಿಭೆ.
ಮುಂಬಯಿ ಮೀರಾ ಭಾಯಂದರ್ನ ಪ್ರಸಿದ್ಧ ರಾಧಾಕೃಷ್ಣ ಆಕಾಡೆಮಿಯ ಸುಕನ್ಯಾ ಭಟ್ ಇವರ ಶಿಷ್ಯೆಯಾಗಿರುವ ಇವರು ಹಿಂದುಸ್ತಾನಿ ಸಂಗೀತವನ್ನು, ಅಂಚನ್ ಅಧಾವ್ ಅವರಿಂದ ಮತ್ತು ಪಾಶ್ಚಾತ್ಯ, ಜಾನಪದ ನೃತ್ಯವನ್ನು ಸಚಿನ್ ಜಾಧವ್ ಅವರಿಂದ, ಭಕ್ತೀತೆಗಳನ್ನು ಶ್ರೀಧರ ಶೆಟ್ಟಿ ಅವರಿಂದ ಕಲಿಯುತ್ತಿದ್ದಾಳೆ. ಮೀರಾ-ಭಾಯಂದರ್ನ ಸೈಂಟ್ ಫ್ರಾನ್ಸಿಸ್ ಹೈಸ್ಕೂಲ್ನ ಆರನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಇವರು ಅರಳು ಮಲ್ಲಿಗೆ ಮತ್ತು ನಾಟ್ಯಮಯೂರಿ ಪ್ರಶಸ್ತಿಯನ್ನು ಮೂಡಿಗೇರಿಸಿಕೊಂಡಿದ್ದಾರೆ. ಹಲವಾರು ಕಡೆ ನೃತ್ಯ ಪ್ರದರ್ಶನವನ್ನು ನೀಡಿ ಎಲ್ಲರ ಮನರಂಜಿಸಿ¨ªಾಳೆ.
ಕೆ. ಸತ್ಯೇಂದ್ರ ಪೈ ಮತ್ತು ಕೃಷ್ಣಮೋಹನ್ ಪೈ ಇವರ ಜತೆಯಲ್ಲಿ ಸಂತೋಷ್ ಕುಮಾರ್ ಕಟೀಲು ನಿರ್ದೇಶನದಲ್ಲಿ ಅದ್ದೂರಿ ಖರ್ಚು ವೆಚ್ಚ ದ ಮಕ್ಕಳ ಚಲನಚಿತ್ರವು ಇದಾಗಿದ್ದು. ಪ್ರಾಯಶಃ ಚಿನ್ನಾರಿಮುತ್ತ ಚಲನಚಿತ್ರದ ಅನಂತರ ಅದ್ದೂರಿ ಖರ್ಚಿನ ಚಿತ್ರ ಇದುವೇ ಎಂದೆನ್ನಬಹುದು. ಮಕ್ಕಳ ಮೇಲೆ ಪಾಲಕರ ಹಾರೈಕೆಯ ಬಗ್ಗೆ ಕಥೆ ಉತ್ತಮ ಸಾರಾಂಶದೊಂದಿಗೆ ಮೂಡಿಬಂದಿದೆ.
ದೇಶಪ್ರೇಮದ ಚಿತ್ರದಲ್ಲಿ ಹಾಡುಗಳಿದ್ದು, ಪ್ರಕೃತಿಯ ಮೈಮರೆಯುವ ರಮ್ಯ ಮನ ಮೋಹಕ ದೃಶ್ಯಗಳು ಚಿತ್ರದಲ್ಲಿ ನಿರ್ದೇಶಕನ ಕಠಿನ ಪರಿಶ್ರಮದಿಂದ ಸೆರೆಹಿಡಿಯಲ್ಪಟ್ಟಿವೆ. ಪ್ರಕೃತಿಯ ಬಗ್ಗೆ ರಹಸ್ಯವಾದ ಕೆಲವು ವಿಷಯಗಳನ್ನು ಕಥೆಯಲ್ಲಿ ತೆರೆದಿಡಲಾಗಿದೆ. ಈಗಾಗಲೇ ಕನಸು ಕಣ್ಣು ತೆರೆದಾಗ ಚಿತ್ರವನ್ನು ಚಿತ್ರ ಪ್ರೇಮಿಗಳಿಗೆ ನೀಡಿರುವ ಸಂತೋಷ್ ಕುಮಾರ್ ಕಟೀಲು ಇವರ ಈ ಬಹು ಭಾಷಾ ಚಿತ್ರ ಹಿಂದಿಯಲ್ಲಿ ಚಂದನ್ವನ್ ಕನ್ನಡದಲ್ಲಿ ಗಂಧದ ಕುಡಿ ಬಹಳ ಯಶಸ್ವಿಯ ಚಿತ್ರವಾಗಲಿದೆ. ರಮೇಶ್ ಭಟ್. ಶಿವಧ್ವಜ್, ಜ್ಯೋತಿ ರೈ ಬಹುಮುಖ್ಯ ಪಾತ್ರದಲ್ಲಿದ್ದರೆ. ಮುಂಬಯಿಯ ಯಕ್ಷಗಾನ ಕಲಾವಿದ ಸದಾ ನಂದ ಕಟೀಲು, ಕೃಷ್ಣ ರಾಜ್ ಶೆಟ್ಟಿ ಮುಂಡ್ಕೂರು, ಅರವಿಂದ ಕೊಜಕ್ಕೊಳಿ, ಚಂದ್ರಿಕಾ ರಾವ್ ಮುಂತಾದ ಪ್ರಸಿದ್ಧ ಕಲಾವಿದರು ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayapura: ಗೃಹಿಣಿ ಮೇಲೆ ಅತ್ಯಾಚಾರ,ಚಿತ್ರೀಕರಣ: ಮಗನೊಂದಿಗೆ ನಾಪತ್ತೆಯಾದ ಸಂತ್ರಸ್ತೆ
Koppala: ವೈದ್ಯರ ನಿರ್ಲಕ್ಷ್ಯ-ಚಿಕಿತ್ಸೆ ಫಲಿಸದೇ ಗರ್ಭಿಣಿ ಸಾವು ; ಕುಟುಂಬಸ್ಥರ ಪ್ರತಿಭಟನೆ
Bengaluru: ಸೈಕಲ್ ಕದಿಯುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಬಂಧನ
Mudigere: ಹುಲಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ವಶಕ್ಕೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ