ಪಡುಬಿದ್ರೆ ನಡಿಪಟ್ಣ ಮೊಗವೀರ ಸಭಾ: 132ನೇ ವಾರ್ಷಿಕ ಮಹಾಸಭೆ


Team Udayavani, Feb 15, 2020, 6:15 PM IST

mumbai-tdy-1

ಮುಂಬಯಿ, ಫೆ. 14: ಪಡುಬಿದ್ರೆ ನಡಿಪಟ್ಣ ಮೊಗವೀರ ಸಭಾ ಮುಂಬಯಿ ಇದರ 132ನೇ ವಾರ್ಷಿಕ ಮಹಾಸಭೆ ಮತ್ತು ವಿಹಾರಕೂಟವು ಫೆ. 9 ರಂದು ಪೂರ್ವಾಹ್ನ 9.30 ರಿಂದ ಮಡ್‌ ಐಲ್ಯಾಂಡ್‌ನ‌ ರಾವತ್‌ಪಿಕ್‌ನಿಕ್‌ ಕಾಟೇಜ್‌ ನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನೆರವೇರಿತು.

ಮುಂಬಯಿ ಸಭಾದ ಅಧ್ಯಕ್ಷ ಮಾಧವ ಟಿ. ಪುತ್ರನ್‌ ಅವರು ಸಭೆಯ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಹಿರಿಯ ಸದಸ್ಯರಾದ ಸದಾ ನಂದ ಮೆಂಡನ್‌, ನ್ಯಾಯವಾದಿ ಕೃಷ್ಣರಾಜ್‌ ಕೋಟ್ಯಾನ್ಕರ್‌, ಲಲಿತಾ ಮೆಂಡನ್‌, ಮಾ| ಕ್ಷಿತಿಜ್‌ ಪುತ್ರನ್‌ ಅವರು ದೀಪ ಪ್ರಜ್ವಲಿಸಿ ಮಹಾಸಭೆಗೆ ಚಾಲನೆ ನೀಡಿದರು. ಕೆ. ಎನ್‌. ಚಂದ್ರಶೇಖರ್‌ ವಿರಾರ್‌ ಅವರು ಪ್ರಾರ್ಥನೆಗೈದರು. ಗತ ಸಾಲಿನಲ್ಲಿ ನಿಧನರಾದ ಸದಸ್ಯರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.

ವಿವಿಧ ಕ್ಷೇತ್ರಗಳಲ್ಲಿ ಗಮನೀಯ ಸಾಧನೆಗೈದ ಹಿರಿಯ ಸದಸ್ಯರನ್ನು, ಸೇವಾ ನಿವೃತ್ತರಾದವರನ್ನು ಗೌರವಿಸಲಾಯಿತು. ವಾರ್ಷಿಕ ವರದಿಯನ್ನು ಗೌರವ ಕಾರ್ಯದರ್ಶಿ ನಾಗೇಶ್‌ ಪುತ್ರನ್‌, ಆಯವ್ಯಯ ಪಟ್ಟಿಯನ್ನು ಜತೆ ಕಾರ್ಯದರ್ಶಿ ದೇವಪ್ಪ ಸಾಲ್ಯಾನ್‌ ಮಂಡಿಸಿ, ಸರ್ವಾನುಮತದಿಂದ ಮಂಜೂರು ಮಾಡಿಕೊಂಡರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು, ಶೈಕ್ಷಣಿಕ ಸಾಧಕ ಮಕ್ಕಳನ್ನು ಹಾಗೂ ಒಂದನೇ ತರಗತಿಯಿಂದ ಪದವಿ, ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು. ಸಭೆಯಲ್ಲಿ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳನ್ನು ಗೌರವಿಸಲಾಯಿತು. ದಕ್ಷಿಣ ಕನ್ನಡ ಮಹಾಜನ ಸಂಘ ಮತ್ತು ಕಾಡಿಪಟ್ಣ, ನಡಿಪಟ್ಣ ವಿದ್ಯಾಪ್ರಚಾರಕ ಸಂಘ ಮುಂಬಯಿ ಸಮಿತಿಯನ್ನು ಮುಂದಿನ ಕಾರ್ಯಕಾರಿ ಸಮಿತಿಯಲ್ಲಿ ರಚಿಸಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಗತ ಸಾಲಿನಲ್ಲಿ ಉತ್ತಮ ಸೇವೆಗೈದ ಉತ್ತಮ ಸೇವಕ ಶೇಖರ್‌ ಕೋಟ್ಯಾನ್‌ ಆಯ್ಕೆಯಾಗಿ ದಿ| ಕುಶಲ್‌ದಾಸ್‌ ಕೋಟ್ಯಾನ್ಕರ್‌ ಪ್ರಶಸ್ತಿಯನ್ನು ನೀಡಲಾಯಿತು.

ಹಿರಿಯ ಮತ್ತು ಕಿರಿಯ ಸದಸ್ಯರು ಸಭೆಯ ಬೆಳವಣಿಗೆಯ, ಊರ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಉನ್ನತಿಯ ಬಗ್ಗೆ, ಶ್ರೀ ವಿಷ್ಣು ಮಂದಿರದ ಬೆಳವಣಿಗೆಯ ಬಗ್ಗೆ ಸಲಹೆ ಸೂಚನೆಗಳನ್ನಿತ್ತು ಸಹಕರಿಸಿದರು. ಮುಂಬಯಿ ಶಾಖೆಯ ಹಿರಿಯ ಸದಸ್ಯರಾದ ಕೆ. ಎನ್‌. ಚಂದ್ರ ಶೇಖರ್‌ ವಿರಾರ್‌ ಉಪಸ್ಥಿತರಿದ್ದು ಊರಿನ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು. ಪ್ರಧಾನ ಕಾರ್ಯದರ್ಶಿ ನಾಗೇಶ್‌ ಕೆ. ಪುತ್ರನ್‌ ವಂದಿಸಿದರು.

ವಿವಿಧ ಸ್ಪರ್ಧೆಗಳಲ್ಲಿ ಚೆಂಡೆಸೆತ ಸ್ಪರ್ಧೆಯಲ್ಲಿ ಕ್ಷಿತಿಜ್‌ ಪುತ್ರನ್‌ ಪ್ರಥಮ, ಆರವ್‌ ಶ್ರೀಯಾನ್‌ ದ್ವಿತೀಯ, ರನ್ನಿಂಗ್‌ ರೇಸ್‌ನಲ್ಲಿ ವಿಜಯಲಕ್ಷ್ಮೀ ಸಾಲ್ಯಾನ್‌ ಪ್ರಥಮ, ಹೀರಾ ಶ್ರೀಯಾನ್‌ ದ್ವಿತೀಯ, ಕಾಲಿಗೆ ಹಗ್ಗಕಟ್ಟಿ ಓಡುವ ಸ್ಪರ್ಧೆಯಲ್ಲಿ ಪುನೀತ್‌ ಶ್ರೀಯಾನ್‌ ಪ್ರಥಮ, ಶ್ರೇಯಾ ಕುಂದರ್‌ ದ್ವಿತೀಯ, ಪಾಸಿಂಗ್‌ ಪಾರ್ಸೆಲ್‌ ಸ್ಪರ್ಧೆಯಲ್ಲಿ ಅಮಿತ್‌ ಸುವರ್ಣ ಪ್ರಥಮ, ಶಾಂಭವಿ ಪುತ್ರನ್‌ ದ್ವಿತೀಯ, ಸಂಗೀತ ಕುರ್ಚಿ ಸ್ಪರ್ಧೆಯಲ್ಲಿ ಅರ್ಶಿತ್‌ ಕುಂದರ್‌ ಪ್ರಥಮ, ಗುಲಾಬಿ ಜಿ. ಕುಂದರ್‌ ದ್ವಿತೀಯ

ಬಹುಮಾನ ಪಡೆದರು. ಪುರುಷರ ವಿಭಾಗದಲ್ಲಿ ಭರತ್‌ ಮೆಂಡನ್‌ ಪ್ರಥಮ, ಅನೀಶ್‌ ಪುತ್ರನ್‌ ಅವರು ದ್ವಿತೀಯ ಬಹುಮಾನ ಪಡೆದರು.

ಟಾಪ್ ನ್ಯೂಸ್

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Uppinangady ಬೆಂಕಿ ಅವಘಡ: ಭಾರೀ ನಷ್ಟ

Uppinangady ಮನೆಗೆ ಆಕಸ್ಮಿಕ ಬೆಂಕಿ: ಭಾರೀ ನಷ್ಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.