ಕಲಾ ಸ್ಪರ್ಶದೊಂದಿಗೆ ಕಂಗೊಳಿಸುತ್ತಿರುವ ಪುಣೆ ಬಂಟರ ಸಾಂಸ್ಕೃತಿಕ ಭವನ


Team Udayavani, Apr 3, 2018, 2:57 PM IST

0204mum01b.jpg

ತುಳುನಾಡ ಸಂಸ್ಕೃತಿ ಎಂದರೆ ಅದೊಂದು ವೈಶಿಷ್ಟ್ಯಮಯವಾದ ಸಂಪ್ರದಾಯದ ಅಡಿಪಾಯದಲ್ಲಿ ಜನ ಜೀವನದಲ್ಲಿ ಹಾಸುಹೊಕ್ಕಾದ ಜೀವನ ಕ್ರಮವಾಗಿದೆ. ಇಲ್ಲಿ ಜನ ಜೀವನದ ಪ್ರತಿಯೊಂದು ಮಜಲಿನಲ್ಲೂ ವಿಶೇಷತೆಯನ್ನು ಕಾಣಬಹುದಾಗಿದೆ. ಅದು ಸಂಪ್ರದಾಯಬದ್ಧವಾಗಿ ಆಚರಿಸಲಾಗುವ ಹಬ್ಬ ಹರಿದಿನಗಳೇ ಇರಲಿ, ದೈವ ದೇವರ ಆರಾಧನಾ ಪದ್ಧತಿಯೇ ಇರಲಿ. ವಾಸಯೋಗ್ಯ  ನಿರ್ಮಿಸುವ ಮನೆಯ ಶೈಲಿಯೇ ಇರಲಿ, ದೈವ ದೇವಸ್ಥಾನಗಳ ನಿರ್ಮಾಣವೇ ಇರಲಿ ಪ್ರತಿಯೊಂದಕ್ಕೂ ಅದರದ್ದೇ ಆದ ವೈಶಿಷ್ಟéವನ್ನು ಕಾಣಬಹುದಾಗಿದೆ.

ತುಳುನಾಡ ಸಂಸ್ಕೃತಿ ಎಂದರೆ ಅದೊಂದು ವೈಶಿಷ್ಟ್ಯಮಯವಾದ ಸಂಪ್ರದಾಯದ ಅಡಿಪಾಯದಲ್ಲಿ ಜನ ಜೀವನದಲ್ಲಿ ಹಾಸುಹೊಕ್ಕಾದ ಜೀವನ ಕ್ರಮವಾಗಿದೆ. ಇಲ್ಲಿ ಜನ ಜೀವನದ ಪ್ರತಿಯೊಂದು ಮಜಲಿನಲ್ಲೂ ವಿಶೇಷತೆಯನ್ನು ಕಾಣಬಹುದಾಗಿದೆ. ಅದು ಸಂಪ್ರದಾಯಬದ್ಧವಾಗಿ ಆಚರಿಸಲಾಗುವ ಹಬ್ಬ ಹರಿದಿನಗಳೇ ಇರಲಿ, ದೈವ ದೇವರ ಆರಾಧನಾ ಪದ್ಧತಿಯೇ ಇರಲಿ. ವಾಸಯೋಗ್ಯ  ನಿರ್ಮಿಸುವ ಮನೆಯ ಶೈಲಿಯೇ ಇರಲಿ, ದೈವ ದೇವಸ್ಥಾನಗಳ ನಿರ್ಮಾಣವೇ ಇರಲಿ ಪ್ರತಿಯೊಂದಕ್ಕೂ ಅದರದ್ದೇ ಆದ ವೈಶಿಷ್ಟÂತೆಯನ್ನು ಕಾಣಬಹುದಾಗಿದೆ.

ಅದೇ ರೀತಿ ತುಳುನಾಡಿನ ಬಂಟ ಸಮುದಾಯದ ಹಿಂದಿನ ಕಾಲದ ಗುತ್ತಿನ ಮನೆಗಳ ಅಂದವೇ ಬೇರೆ. ಕಲಾತ್ಮಕವಾದ ಮರದ ಕೆತ್ತನೆಗಳನ್ನೊಳಗೊಂಡ, ಮಂಗಳೂರು ಹಂಚಿನಿಂದ ಆವೃತವಾದ ಮನೆಗಳು ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ ಬದುಕನ್ನು ಅನಾವರಣಗೊಳಿಸುವಂತಿತ್ತು. ಇದೇ ರೀತಿ ಪುಣೆಯಲ್ಲಿನ ಬಂಟ ಸಮುದಾಯದ ದೀರ್ಘ‌ಕಾಲದ ಭವನದ ಕನಸೊಂದು ನನಸಾಗಿ ಮುಂಬಯಿ ಬೆಂಗಳೂರು ಹೆ¨ªಾರಿಯ ಹತ್ತಿರದಲ್ಲಿ ಬಾರ್ಣೇ ಎಂಬಲ್ಲಿ ಸುಂದರವಾದ ಓಣಿಮಜಲು ಜಗನ್ನಾಥ ಶೆಟ್ಟಿ ಸಾಂಸ್ಕೃತಿಕ ಬಂಟರ ಭವನವು ತಲೆಯೆತ್ತಿ ಶೋಭಿಸುತ್ತಿದ್ದು ನೋಡ ನೋಡುತ್ತಿದ್ದಂತೆ ನಮ್ಮನ್ನೊಮ್ಮೆ ಕೈಬೀಸಿ ಕರೆಯುತ್ತಿರುವಂತೆ ಭಾಸವಾದರೆ ಅತಿಶಯೋಕ್ತಿಯಲ್ಲ.

ಸಂಘಟನೆಯ ನೆಲೆಗಟ್ಟಿಗೆ ಭವ್ಯವಾದ ಸಮಾಜದ ಭವನವು ಭವಿಷ್ಯದ ಪೀಳಿಗೆಗೆ ಅಸ್ತಿತ್ವದ ಪ್ರತೀಕದಂತೆ ಸುಮಾರು ಒಂದು ಎಕರೆ ಜಾಗದಲ್ಲಿ 62 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ  ಕಲಾತ್ಮಕತೆಯನ್ನು ಮೈಗೂಡಿಸಿಕೊಂಡು ಸರ್ವಾಂಗ ಸುಂದರವಾಗಿ ನಿರ್ಮಾಣಗೊಂಡಿದ್ದು  ಅನೇಕ ವೈಶಿಷ್ಟéವನ್ನು ಮೈದುಂಬಿಸಿಕೊಂಡಿದೆ. ಅತ್ಯಾಧುನಿಕ ತಂತ್ರಜ್ಞಾನ,  ಆಕರ್ಷಕ ವಿನ್ಯಾಸಗಳಿಂದ  ಅದ್ಭುತ ವಾಸ್ತು ಶೈಲಿ ಯೊಂದಿಗೆ ನಿರ್ಮಾಣಗೊಂಡಿದೆ. ಈ ಭವನದಲ್ಲಿ  ದೇವಸ್ಥಾನದ ಪ್ರವೇಶದ್ವಾರದಂತೆ ಇರುವ ಸುಂದರವಾದ ಪ್ರವೇಶದ್ವಾರದಲ್ಲಿ ಒಳಸರಿದಂತೆ   ಸುಮಾರು 2000 ಚದರ ಅಡಿ ವಿಸ್ತೀರ್ಣವುಳ್ಳ ತುಳುನಾಡಿನ ಸಂಸ್ಕೃತಿಯನ್ನು ಸಾರುವ ಮನಮೋಹಕ ಚಾವಡಿ   ನಿರ್ಮಾಣಗೊಂಡಿದೆ.

ತುಳುನಾಡಿನ ಹಿಂದಿನ ಗುತ್ತಿನ ಮನೆಗಳಲ್ಲಿ ಈ ರೀತಿಯ ಚಾವಡಿಗಳನ್ನು ಕಾಣಬಹುದಾಗಿದ್ದು, ಬಹಳ ಆಕರ್ಷಕ ಮರದ ಕೆತ್ತನೆಗಳ ವಿನ್ಯಾಸ ಗಮನಸೆಳೆಯುತ್ತದೆ. 

 ಊರಿನಿಂದಲೇ ಮರಮಟ್ಟುಗಳನ್ನು ತಂದು ಚಾವಡಿಗೆ ಬಳಸಲಾಗಿದೆ. ಇಲ್ಲಿನ ಬಾಗಿಲು, ಕಿಟಿಕಿಗಳೂ ಸೇರಿದಂತೆ ಕೈಕುಸುರಿ ಕೆಲಸಗಳ ನೋಟ ಸುಂದರವಾಗಿ ಕಂಡುಬರುತ್ತದೆ.  ಅದಕ್ಕೆ ತಾಗಿಕೊಂಡೇ ಡೈನಿಂಗ್‌ ಹಾಲ್‌, ಬಲಬದಿಗೆ  ಕಪ್ಪು ಕಲ್ಲಿನಿಂದ  ಮೂಡಬಿದಿರೆಯಿಂದ ತಯಾರಿಸಿ ತಂದು ಪ್ರತಿಷ್ಠಾಪಿಸಿದ ಗುರು ನಿತ್ಯಾನಂದ ಸ್ವಾಮಿಗಳ ಭವ್ಯ ಮೂರ್ತಿ, ಇನ್ನೊಂದೆಡೆ ಬಿಳಿ ಕಲ್ಲಿನಿಂದ ರಾಜಸ್ಥಾನದಿಂದ ತಯಾರಿಸಿ ತಂದು ಪ್ರತಿಷ್ಠಾಪಿಸಿದ ಶಿರ್ಡಿ ಸಾಯಿಬಾಬಾರ ಮೂರ್ತಿ, ದೇವರ ಭವ್ಯ ಪೂಜಾ ಮಂಟಪವನ್ನೂ ಮರದ ಕೆತ್ತನೆಗಳೊಂದಿಗೆ ತಯಾರಿಸಲಾಗಿದೆ.

 ಶ್ರೀ  ಕ್ಷೇತ್ರ ಕಟೀಲಿನ ದುರ್ಗಾಪರಮೇಶ್ವರಿ ಅಮ್ಮನವರ ಬೆಳ್ಳಿ ಲೇಪನದ ಕಲಾಶೈಲಿಯ ಫೋಟೋ, ಮಹಾಗಣಪತಿ ದೇವರ ಫೋಟೋ ಹಾಗೂ ವೆಂಕಟ್ರಮಣ ದೇವರ ಫೋಟೋಗಳನ್ನು ಅಳವಡಿಸಲಾಗಿದ್ದು ಭವನದೊಳಗಡೆ  ಸಣ್ಣದೊಂದು ದೇವಸ್ಥಾನದ ಕಲ್ಪನೆಯನ್ನು ಸಾಕಾರಗೊಳಿಸುವಂತಿದೆ.

ಭವನದೊಳಗಡೆ  ಸುಮಾರು  1200 ಆಸನ ಗಳುಳ್ಳ ಭವ್ಯಾಕರ್ಷಕ ಸಾಂಸ್ಕೃತಿಕ ಸಭಾಗೃಹ ಪುಣೆಯಲ್ಲಿಯೇ ವಿನೂತನವಾಗಿ ಕಂಗೊಳಿಸುತ್ತದೆ. ವಿದ್ಯುದ್ದೀಪ, ಜನರೇಟರ್‌ ನಿರ್ವಹಣೆಗಾಗಿ ನಂದಾದೀಪ ಎಂಬ  ಮಂಗಳೂರು ಹಂಚಿನಿಂದ ನಿರ್ಮಾಣಗೊಂಡ  ಕೋಣೆ ಯೊಂದಿದೆ. ಇದರೊಂದಿಗೆ ಭವನದಲ್ಲಿ ಬಂಟ ಭೂಷಣಪ್ರಾಯ  ವಿಜಯ ಬ್ಯಾಂಕಿನ ಅಭ್ಯುದಯದ ಹರಿಕಾರ ಸುಂದರರಾಮ ಶೆಟ್ಟಿ,   ಬಂಟ ಸಮಾಜದ ಕೀರ್ತಿಯನ್ನು ದೇಶದಾದ್ಯಂತ ಪಸರಿಸಿದ ಜಸ್ಟಿಸ್‌ ಕೆ. ಎಸ್‌. ಹೆಗ್ಡೆ ಅವರ ಮೂರ್ತಿ ಅಲ್ಲದೆ ಭವನದ ಆವರಣದ ಒಂದು ಬದಿಯಲ್ಲಿ ಮಹಾರಾಷ್ಟ್ರದ ಆರಾಧ್ಯದೇವ ಹಿಂದೂ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಕರ್ನಾಟಕ-ಮಹಾರಾಷ್ಟ್ರದ ಸ್ನೇಹಸೇತುವಾಗಿ ಅಪೂರ್ವ ಪರಿಕಲ್ಪನೆಯೊಂದಿಗೆ ಸಾಂಸ್ಕೃತಿಕ, ಆಧ್ಯಾತ್ಮಿಕ, ಸಾಮಾಜಿಕ ವಿಚಾರಗಳೂ ಸೇರಿದಂತೆ ಭವನವನ್ನು ನಿರ್ಮಿಸಲಾಗಿದೆ. ಭವನದ ಹೊರನೋಟ ಕಂಗೊಳಿಸುವಂತೆ ಮಾಡಲು ಊರಿನಿಂದ ತಂದು ಕೆಂಪು ಕಲ್ಲು ಗಳನ್ನು ಅಳವಡಿಸಲಾಗಿದೆ.  ಮಹಾದಾನಿಗಳ ದೇಣಿಗೆಯಿಂದ ಬಂಟರ ಹೆಮ್ಮೆಯ ಭವನ ನಿರ್ಮಾಣಗೊಂಡು ಎ. 7ರಂದು ಪದ್ಮಭೂಷಣ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ದಿವ್ಯ ಹಸ್ತದಿಂದ ಲೋಕಾರ್ಪಣೆಗೊಳ್ಳುತ್ತಿರುವುದು ಪುಣೆ ಬಂಟರಿಗಲ್ಲದೆ ಸಮಸ್ತ ಸಮಾಜಕ್ಕೆ ಅಭಿಮಾನ ತರುವ ವಿಚಾರವಾಗಿದೆ.

ಕಿರಣ್‌ ಬಿ. ರೈ ಕರ್ನೂರು

ಟಾಪ್ ನ್ಯೂಸ್

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.