ಸಿರಿನಾಡ ವೆಲ್ಫೇರ್ ಅಸೋಸಿಯೇಶನ್: ವೈದ್ಯಕೀಯ ನೆರವು
Team Udayavani, Feb 16, 2018, 10:09 AM IST
ಡೊಂಬಿವಲಿ: ಸಿರಿನಾಡ ವೆಲ್ಫೇರ್ ಅಸೋಸಿಯೇಶನ್ ಡೊಂಬಿವಲಿ ಇದರ ವತಿಯಿಂದ ಅನಾರೋಗ್ಯದಿಂದ ಬಳಲುತ್ತಿರುವ, ಡೊಂಬಿವಲಿ ಪೂರ್ವ ಆಜೆªಪಾಡಾದ ನಿವಾಸಿ ಯಶೋದಾ ಭಾಸ್ಕರ ಬಂಗೇರ ಇವರಿಗೆ ವೈದ್ಯಕೀಯ ನೆರವನ್ನು ಇತ್ತೀಚೆಗೆ ವಿತರಿಸಿ ಸಹಕರಿಸಲಾಯಿತು.
ಸಿರಿನಾಡ ವೆಲ್ಫೆàರ್ ಅಸೋಸಿಯೇಶನ್ ಡೊಂಬಿವಲಿ ಇದರ ಮಹಿಳಾ ವಿಭಾಗದ ಸದಸ್ಯೆ ಶ್ಯಾಮಲಾ ಹೆಮ್ಮಾಡಿ ಇವರ ಸಹೋದರಿಯಾಗಿರುವ ಯಶೋದಾ ಬಿ. ಬಂಗೇರ ಇವರು ಅನಾರೋಗ್ಯ ಪೀಡಿತರಾಗಿದ್ದು, ಆರ್ಥಿಕವಾಗಿ ಹಿಂದುಳಿದ ಇವರ ಪರಿಸ್ಥಿತಿಯನ್ನು ಮನಗಂಡು ಸಂಸ್ಥೆಯು ವೈದ್ಯಕೀಯ ನೆರವನ್ನಿತ್ತು ಶೀಘ್ರವಾಗಿ ಗುಣಮುಖರಾಗುವಂತೆ ಶುಭಹಾರೈಸಲಾಯಿತು
ಸಿರಿನಾಡ ವೆಲ್ಫೆàರ್ ಅಸೋಸಿಯೇಶನ್ ಡೊಂಬಿವಲಿ ಇದರ ಅಧ್ಯಕ್ಷ ಆರ್. ಕೆ. ಸುವರ್ಣ ಅವರು ಸಂಸ್ಥೆಯ ಕಚೇರಿಯಲ್ಲಿ ಶ್ಯಾಮಲಾ ಹೆಮ್ಮಾಡಿ ಇವರಿಗೆ ಸಹಾಯ ಧನದ ಚೆಕ್ನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಅಜೆಕಾರು ಜಯ ಶೆಟ್ಟಿ, ಕೋಶಾಧಿಕಾರಿ ಸದಾಶಿವ ಸಾಲ್ಯಾನ್, ಕಾರ್ಯದರ್ಶಿ ದಾಮೋದರ ಸುವರ್ಣ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉದಯಾ ಜೆ. ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಸುಧಾಕರ ಪೂಜಾರಿ, ರಾಮಕೃಷ್ಣ ಕರ್ಕೇರ, ಕೆ. ಕೆ. ಸಾಲ್ಯಾನ್, ಸುಧಾಕರ ಮೆಂಡನ್, ಯುವ ವಿಭಾಗದ ಕಾರ್ಯಾಧ್ಯಕ್ಷ ವಿನೋದ್ ಕರ್ಕೇರ, ಉಪಾಧ್ಯಕ್ಷ ಗುರುರಾಜ್ ಸುವರ್ಣ ಉಪಸ್ಥಿರಿದ್ದರು.