ಮಲಾಡ್‌ ಇರಾನಿ ಕಾಲನಿ ಶ್ರೀ ಶನಿಮಹಾತ್ಮ ಪೂಜಾ ಸಮಿತಿ: ವಾರ್ಷಿಕ ಮಹಾಪೂಜೆ


Team Udayavani, Mar 15, 2022, 12:10 PM IST

ಮಲಾಡ್‌ ಇರಾನಿ ಕಾಲನಿ ಶ್ರೀ ಶನಿಮಹಾತ್ಮ ಪೂಜಾ ಸಮಿತಿ: ವಾರ್ಷಿಕ ಮಹಾಪೂಜೆ

ಮಲಾಡ್‌: ಪಶ್ಚಿಮ ಉಪನಗರಗಳ ಹಿರಿಯ ಧಾರ್ಮಿಕ ಸಂಘಟನೆಗಳಲ್ಲೊಂದಾದ ಮಲಾಡ್‌ ಪೂರ್ವದ ಇರಾನಿ ಕಾಲನಿಯಲ್ಲಿರುವ ಶ್ರೀ ಶನಿ ಮಹಾತ್ಮಾ ಪೂಜಾ ಸಮಿತಿಯ 67ನೇ ವಾರ್ಷಿಕ ಮಹಾಪೂಜೆ ಸಮಿತಿಯ ಶನಿಮಂದಿರದಲ್ಲಿ ಮಾ. 12ರಂದು ಜರಗಿತು.

ಪೂಜಾ ಕಾರ್ಯ ವೇ| ಮೂ| ಕೆ. ಗೋವಿಂದ ಮೂರ್ತಿ ಭಟ್‌ ಮಾರ್ಗದರ್ಶನದಲ್ಲಿ ಮಂದಿರದ ಅರ್ಚಕ ಸುಧಾಕರ ಎಂ. ಶೆಟ್ಟಿ ಹಾಗೂ ಭುವಾಜಿ ಎಸ್‌. ಯು. ಬಂಗೇರ ನೇತೃತ್ವದಲ್ಲಿ ನಡೆಯಿತು. ಬೆಳಗ್ಗೆ 8ರಿಂದ ಗಣಪತಿಹೋಮ, ಬಳಿಕ ಮಂದಿರದ ಅಶ್ವತ್ಥಕಟ್ಟೆ ಪೂಜೆ ನಡೆಯಿತು.

ಪೂರ್ವಾಹ್ನ 10.30ರಿಂದ ಮಹಾಪ್ರಸಾದ ಪೂಜೆ, ಪಲ್ಲಪೂಜೆ, 11.30ರಿಂದ ಶ್ರೀ ಶನಿದೇವರಿಗೆ ಮಹಾಮಂಗಳಾರತಿ, ಶನಿದೇವರ ಸ್ತೋತ್ರ ಪಠಣ ನೆರವೇರಿತು. ಮಹಾಗಣಪತಿಗೆ ವಿಶೇಷ ಪೂಜೆ ಹಾಗೂ ಜಗನ್ಮಾತೆ ದೇವಿಯ ಸ್ತೋತ್ರ ಪಠಣ, ಮಹಾಮಂಗಳಾರತಿ, ಪ್ರಸಾದ ವಿತರಣೆ, ಮಹಾಅನ್ನಸಂತರ್ಪಣೆ ಜರಗಿತು. ಅಪರಾಹ್ನ 1.30ರಿಂದ ಕಲಶ ಪ್ರತಿಷ್ಠೆ, ಶನಿದೇವರ ಪ್ರತಿಬಿಂಬವನ್ನು ಮಂದಿರದಿಂದ ವಾಲಗದೊಂದಿಗೆ ಪುಷ್ಪವೃಷ್ಠಿಯ ಮೂಲಕ ಅಶ್ವತ್ಥಕಟ್ಟೆಯವರೆಗೆ ಬಲಿಮೂರ್ತಿ ಮೆರವಣಿಗೆ ನೆರವೇರಿತು. ಬಳಿಕ ಶನಿಗ್ರಂಥ ಪಾರಾಯಣ, ಸಮಿತಿಯ ಸದಸ್ಯರಿಂದ ಭಜನ ಕಾರ್ಯಕ್ರಮ, ಸಂಜೆ 5ರಿಂದ ಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು.

ಸಾವಿರಾರು ಭಕ್ತರು, ಉದ್ಯಮಿಗಳು, ಸಮಾಜ ಸೇವಕರು, ಸ್ಥಳೀಯ ಪೊಲೀಸ್‌ ಅಧಿಕಾರಿಗಳು, ದಾನಿಗಳು, ರಾಜಕೀಯ ನೇತಾರರು, ನಗರದ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಶನಿದೇವರ ದರ್ಶನ ಪಡೆದು ಕೃತಾರ್ಥರಾದರು. ಭಕ್ತರು ಶ್ರೀದೇವರಿಗೆ ವಿವಿಧ ಪೂಜೆಗಳನ್ನು ಸಲ್ಲಿಸಿದರು.

ಅತಿಥಿಗಳನ್ನು ಸಮಿತಿಯ ಸದಸ್ಯರು ಮಹಾಪ್ರಸಾದವನ್ನಿತ್ತು ಗೌರವಿಸಿದರು. ಸಂಜೆ 6ರಿಂದ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಅಮೃತ ಮಹೋತ್ಸವ ಸಂಭ್ರಮದಲ್ಲಿರುವ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿಯ ಕಲಾವಿದರಿಂದ ಸತ್ಯದ ಪೊಣ್ಣು ನಿರ್ಮಲೆ (ಬಂಗಾರª ತೊಟ್ಟಿಲ್‌) ಯಕ್ಷಗಾನ ಪ್ರದರ್ಶನಗೊಂಡಿತು.

ಕಾರ್ಯಕ್ರಮದಲ್ಲಿ ಶ್ರೀ ಶನಿ ಮಹಾತ್ಮ ಪೂಜಾ ಸಮಿತಿಯ ಗೌರವ ಕಾರ್ಯದರ್ಶಿ ಎಂ. ಎನ್‌. ಸುವರ್ಣ, ಗೌರವ ಕೋಶಾಧಿಕಾರಿಗಳಾದ ಕೆ. ಎನ್‌. ಸಾಲ್ಯಾನ್‌, ಅತುಲ್‌ ಎಂ. ಓಜಾ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಎಸ್‌. ಯು. ಸುವರ್ಣ, ಎಂ. ಎನ್‌. ಕೋಟ್ಯಾನ್‌, ಜಯ ಎಂ. ಬಂಗೇರ, ಕೆ. ಎನ್‌. ಸಿ. ಸಾಲ್ಯಾನ್‌, ಪಿ. ಆರ್‌. ಅಮೀನ್‌, ತನೋಜಾ ಕಪ್ಪನ್‌ಕಲ್‌, ಎಸ್‌. ಎ. ಸಾಲ್ಯಾನ್‌, ಬಿ. ಎಚ್‌. ಹೆಜಮಾಡಿ, ಯು. ವಿ. ರಾವ್‌ ಉಪಸ್ಥಿತರಿದ್ದರು.

ಕೊರೊನಾ ಸಂಕಷ್ಟದ ಸಮಯದಲ್ಲಿ ಹಲವಾರು ಸಾರ್ವಜನಿಕ ಸೇವೆ ಮಾಡಿದ ಆತ್ಮತೃಪ್ತಿ ನಮಗಿದೆ. ಆಧ್ಯಾತ್ಮಿಕ ಚಿಂತನೆಯ ಕ್ಷೇತ್ರವಾದ ಇಲ್ಲಿ ಕಳೆದ ಒಂದು ವರ್ಷದಿಂದ ಭಜನೆ ಕಾರ್ಯಕ್ರಮಗಳು ಜರಗುತ್ತಿದ್ದು, ಇದಕ್ಕೆ ಸ್ಥಳೀಯ ಪೊಲೀಸ್‌ ಇಲಾಖೆಯವರು ಸಹಕರಿಸುತ್ತಿದ್ದಾರೆ. ಇಂದು ಮತ್ತೆ ವಾರ್ಷಿಕ ಮಹಾಪೂಜೆ ಯಥಾಸ್ಥಿತಿಯಲ್ಲಿ ಜರಗುವುದರ ಮೂಲಕ ಮತ್ತೆ ಈ ಆಧ್ಯಾತ್ಮಿಕ ಕ್ಷೇತ್ರ ಎಂದಿನಂತೆ ಚಟುವಟಿಕೆಯಲ್ಲಿ  ತೊಡಗಿಸಿಕೊಂಡಿದೆ. -ಎಚ್‌. ಎಸ್‌. ಕರ್ಕೇರ, ಗೌರವ ಪ್ರಧಾನ ಕಾರ್ಯದರ್ಶಿ, ಶ್ರೀ ಶನಿ ಮಹಾತ್ಮಾ ಪೂಜಾ ಸಮಿತಿ ಮಲಾಡ್‌

ಸಾಂಕ್ರಾಮಿಕ ಕಾಲದಲ್ಲಿ  ದೇವಸ್ಥಾನದಲ್ಲಿ  ವಾರದ ಪೂಜೆ ಹೊರತು ಇತರ ಕಾರ್ಯಕ್ರಮಗಳು ಸ್ಥಗಿತಗೊಂಡಿದ್ದವು. ಆದರೂ ತೊಂದರೆಯಲ್ಲಿದ್ದವರಿಗೆ ತಥಾಸ್ತು ಫೌಂಡೇಶನ್‌ನ ಸಹಕಾರದೊಂದಿಗೆ ಆಹಾರ ಧಾನ್ಯಗಳನ್ನು ಒದಗಿಸಿ, ಆರ್ಥಿಕವಾಗಿ ಸಹಕರಿಸಿದ್ದೇವೆ. ಕಳೆದ ಒಂದು ವರ್ಷದಿಂದ ಭಜನೆ ಪ್ರಾರಂಭಗೊಂಡು ಇಂದು ಸಂಪೂರ್ಣವಾಗಿ 67ನೇ ವಾರ್ಷಿಕ ಮಹಾಪೂಜೆ ನಡೆಯುತ್ತಿರುವುದು ಶ್ರೀ ಶನಿದೇವರ ಅನುಗ್ರಹದಿಂದ ಎನ್ನಬಹುದು. ಶನಿಶಿಂಗ್ನಾಪುರ ಪದ್ಧತಿಯಲ್ಲೇ ಎಣ್ಣೆ ಸೇವೆಗಾಗಿ ಊರಿನಿಂದ ಅಭಿಷೇಕ ಮೂರ್ತಿಯನ್ನು ಇಂದು ಪ್ರತಿಷ್ಠಾಪಿಸಿದ್ದೇವೆ. ಇದರಿಂದ ಭಕ್ತರ ಬೇಡಿಕೆಯನ್ನು ಸಮಿತಿಯು ಪೂರೈಸಿದಂತಾಗಿದೆ.-ಮೋಹನ್‌ ಜಿ. ಬಂಗೇರ  ಅಧ್ಯಕ್ಷರು, ಶ್ರೀ ಶನಿ ಮಹಾತ್ಮಾ ಪೂಜಾ ಸಮಿತಿ ಮಲಾಡ್‌

 

-ಚಿತ್ರ-ವರದಿ : ರಮೇಶ್‌ ಉದ್ಯಾವರ್‌  

ಟಾಪ್ ನ್ಯೂಸ್

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.