ವಿದ್ವಾನ್ ವಿಶ್ವನಾಥ್ ಭಟ್ ಅವರ ಹರಿಕಥಾ ಸಪ್ತೋತ್ಸವ ಸಮಾರೋಪ
Team Udayavani, Sep 4, 2018, 4:03 PM IST
ಮುಂಬಯಿ: ನಗರದ ಧಾರ್ಮಿಕ ಸಂಸ್ಥೆಯಾಗಿರುವ ಶ್ರೀ ಕೃಷ್ಣ ವಿಟ್ಠಲ ಪ್ರತಿಷ್ಠಾನ ಮುಂಬಯಿ ಸಂಸ್ಥಾಪಕ ಕೈರಬೆಟ್ಟು ವಿಶ್ವನಾಥ್ ಭಟ್ ಅವರಿಂದ ಸಾಂತಾಕ್ರೂಜ್ ಪೂರ್ವದ ಪೇಜಾವರ ಮಠದಲ್ಲಿ ನಡೆದ ಹರಿಕಥಾ ಸಪೊ¤àತ್ಸವವು ಆ. 19ರಂದು ಸಮಾರೋಪಗೊಂಡಿತು.
ಸಮಾರೋಪ ಸಮಾರಂಭದ ಅಂಗವಾಗಿ ಭಕ್ತ ಕುಂಬಾರ ಹರಿಕಥಾ ಕಾಲಕ್ಷೇಪ ನಡೆಯಿತು. ಹರಿಕಥೆಯ ಮಂಗಳಾರತಿಯ ಮೊದಲು ನಡೆದ ಸಭಾಕಾರ್ಯಕ್ರಮದಲ್ಲಿ ಹರಿಕಥಾ ವಿದ್ವಾನ್ ಕೈರಬೆಟ್ಟು ವಿಶ್ವನಾಥ್ ಭಟ್ ದಂಪತಿಯನ್ನು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಪೇಜಾವರ ಮಠದ ಪ್ರಬಂಧಕ ವಿದ್ವಾನ್ ಪ್ರಕಾಶ್ ಆಚಾರ್ಯ ಅವರು ಮಾತನಾಡಿ, ಶ್ರಾವಣ ತಿಂಗಳಲ್ಲಿ ಹರಿಕಥಾ ಸಪೊ¤àತ್ಸವವನ್ನು ನಡೆಸಿ ಜನರಲ್ಲಿ ಭಕ್ತಿ ಭಾವ ಮೂಡುವಂತೆ ಮಾಡು ತ್ತಿರುವುದು ಅಭಿನಂದನೀಯ. ಅವರ ಈ ಕಾರ್ಯಕ್ಕೆ ನಮ್ಮೆಲ್ಲರ ಸಹಕಾರ ಅಗತ್ಯವಾಗಿದೆ. ಹರಿಕೀರ್ತನೆಯ ವಿದ್ವತ್ತನ್ನು ಸಂಪೂರ್ಣ ಹೊಂದಿರುವ ವಿಶ್ವನಾಥ್ ಭಟ್ ಅವರು, ಪೇಜಾವರ ಶ್ರೀಗಳು ಹರಸಿದಂತೆ ವಿಶ್ವೇಶ್ವರದಾಸರಾಗಿ ಜನಜನಿತರಾಗಲಿ ಎಂದು ಹಾರೈಸಿದರು.
ಕುರ್ಲಾ ಪೂರ್ವ ಬಂಟರ ಭವನದಲ್ಲಿರುವ ಜ್ಞಾನ ಮಂದಿರದ ಪ್ರಧಾನ ಅರ್ಚಕ ಬನ್ನಿಂತಾಯ ಅವರು ಮಾತನಾಡಿ, ಹರಿಕಥೆ ಯಜ್ಞ ನಡೆಸಿದಂತೆ. ಭಗವಂತನ ಬಗ್ಗೆ ಜ್ಞಾನವನ್ನು ವೃದ್ಧಿಸುವ ಕಾರ್ಯವಾಗಿದೆ. ಹರಿಕಥೆಯ ಪರಂಪರೆಯನ್ನು ವಿಶ್ವನಾಥ್ ಭಟ್ ಅವರು ಉಳಿಸುವಲ್ಲಿ ಅಪಾರ ಸೇವೆ ಮಾಡಿದ್ದಾರೆ. ಹರಿದಾಸ ಪರಂಪರೆ ಉಳಿಯಬೇಕಾದಲ್ಲಿ ನಗರದಲ್ಲೆಡೆಯೂ ನಡೆಯುವ ಕಾರ್ಯಕ್ರಮ ಇದಾಗಬೇಕು ಎಂದರು.
ಮೊಗವೀರ ಬ್ಯಾಂಕಿನ ನಿರ್ದೇಶಕ ಸುರೇಶ್ ಕಾಂಚನ್ ಅವರು ಮಾತನಾಡಿ, ಬಾಲ್ಯದ ದಿನಗಳಲ್ಲಿ ಹರಿಕಥೆಯ ಬಗ್ಗೆ ಅಪಾರ ಹರಿಕಥೆಯನ್ನು ಆಲಿಸಿ, ಸಂತೋಷಭರಿತನಾಗಿದ್ದೇನೆ. ಹರಿಕಥೆಯೇ ಆಲಿಸಲು ಸಮಯ ಇಲ್ಲದ ಈ ಸಂದರ್ಭದಲ್ಲಿ ಜ್ಞಾನದ ಭಂಡಾರವನ್ನು ಹೊಂದಿರುವ ವಿಶ್ವನಾಥ್ ಭಟ್ ಅವರ ಹರಿಕಥೆ ಇಂದಿನ ಜನಾಂಗವನ್ನು ಆಧ್ಯಾತ್ಮಿಕದ ದಾರಿಯಲ್ಲಿ ಕೊಂಡೊಯ್ಯುತ್ತಿದೆ ಎಂದು ನುಡಿದರು.
ಬಂಟರ ಸಂಘ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಹೆಗ್ಡೆ ಮಾತನಾಡಿ, ಹಿಂದೊಮ್ಮೆ ವಿಶ್ವನಾಥ್ ಭಟ್ ಅವರ ಹರಿಕಥೆಯನ್ನು ಆಲಿಸಿದ್ದೆ. ಅವರ ಹರಿಕಥೆಯಲ್ಲಿ ಸಾಧನೆಯ ಫಲವಿದೆ. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲು ಸಹಕಾರ ನೀಡುವಂತಾಗಬೇಕು ಎಂದರು.
ಸಮಾಜ ಸೇವಕಿ ಶಾರದಾ ಸೂರು ಕರ್ಕೇರ ಮಾತನಾಡಿ, ಇಂದು ಪ್ರಥಮ ಬಾರಿ ಹರಿಕಥೆಯನ್ನು ಆಲಿಸಿದ್ದೇನೆ. ನಮ್ಮ ಜ್ಞಾನ ಮನಸ್ಸಿನ ಸಮತೋಲನಕ್ಕೆ ಹರಿಕಥೆ ಪೂರಕವಾಗಿದೆ ಎಂದರು.
ಬಿಲ್ಲವರ ಅಸೋಸಿಯೇಶನ್ ಉಪಾಧ್ಯಕ್ಷ ದಯಾನಂದ ಪೂಜಾರಿ ಕಲ್ವಾ ಅವರು ಮಾತನಾಡಿ, ವಿಶ್ವನಾಥ್ ಭಟ್ ಅವರ ಹರಿಕಥೆಯಲ್ಲಿ ನಮ್ಮನ್ನು ಆಧ್ಯಾತ್ಮಿಕತೆಯತ್ತ ಕೊಂಡೊಯ್ಯುವ ವಿದ್ವತ್ ಶಕ್ತಿಯಿದೆ. ಇವರ ಈ ಧಾರ್ಮಿಕ ಕಾರ್ಯಕ್ಕೆ ನಾವು ಸಹಕಾರ ನೀಡಬೇಕು ಎಂದರು.
ವೇದಿಕೆಯಲ್ಲಿ ಶ್ರೀ ಕೃಷ್ಣ ವಿಟ್ಠಲ ಪ್ರತಿಷ್ಠಾನದ ಟ್ರಸ್ಟಿ ಗೋಪಾಲ ಪುತ್ರನ್, ಅವಿನಾಶ್ ಶಾಸಿŒ, ಸುಮಾ ವಿ. ಭಟ್, ಕಾರ್ಯದರ್ಶಿ ಅಶೋಕ್ ಶೆಟ್ಟಿ ಪೆರ್ಮುದೆ ಉಪಸ್ಥಿತರಿದ್ದರು.
ಗೌರವ ಸ್ವೀಕರಿಸಿ ಮಾತನಾಡಿದ ಕೈರಬೆಟ್ಟು ವಿಶ್ವನಾಥ್ ಭಟ್ ಅವರು ಮಾತನಾಡಿ, ಪ್ರತಿಷ್ಠಾನದ ಮೂಲಕ ನಡೆಸುವ ಎಲ್ಲ ಕಾರ್ಯಕ್ಕೆ ದಾನಿಗಳು ಸಹಕಾರ
ನೀಡಿದ್ದಾರೆ. ಹರಿಕಥಾ ಸಪೊ¤àತ್ಸವ ಸಂಗ್ರಹಗೊಂಡ ದೇಣಿಗೆಯನ್ನು ಶಿಕ್ಷಣ ಕಾರ್ಯಕ್ಕೆ ಮೀಸಲಿಡಲಾಗುವುದು ಎಂದರು.
ಕರ್ನೂರು ಮೋಹನ್ ರೈ ಮತ್ತು ಅಶೋಕ್ ಪಕ್ಕಳ ಕಾರ್ಯಕ್ರಮ ನಿರ್ವಹಿಸಿದರು. ಅಶೋಕ್ ಶೆಟ್ಟಿ ಪೆರ್ಮುದೆ ಸ್ವಾಗತಿಸಿದರು. ಜಗನ್ನಾಥ್ ಪುತ್ರನ್, ಅಶೋಕ್ ಶೆಟ್ಟಿ ಪೆರ್ಮುದೆ, ಗೋಪಾಲ್ ಪುತ್ರನ್, ಅವಿನಾಶ್ ಶಾಸ್ತ್ರೀ, ಶಶಿಧರ್ ಶೆಟ್ಟಿ ಕುಕ್ಕೆಹಳ್ಳಿ, ಸದಾನಂದ ಶೆಟ್ಟಿ, ನವೀನ್ ಪಡುಇನ್ನ, ಬಾಲಚಂದ್ರ ಭಟ್ ಅವರು ಅತಿಥಿಗಳನ್ನು ಗೌರವಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ