ರಾಹಿ ಚಿನ್ನದ ತುರಾಯಿ


Team Udayavani, Aug 23, 2018, 6:00 AM IST

s-29.jpg

ಪಾಲೆಂಬಾಂಗ್‌: ಭಾರತ ಏಶ್ಯಾಡ್‌ ಶೂಟಿಂಗ್‌ನಲ್ಲಿ ಬಂಗಾರದ ಬೇಟೆ ಮುಂದುವರಿಸಿದೆ. ಬುಧವಾರ ನಡೆದ ವನಿತೆಯರ 25 ಮೀ. ಏರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ ರಾಹಿ ಸರನೋಬತ್‌ ಬಂಗಾರಕ್ಕೆ ಗುರಿ ಇರಿಸುವ ಮೂಲಕ ಇತಿಹಾಸವೊಂದನ್ನು ಬರೆದರು. ಏಶ್ಯಾಡ್‌ ಚಿನ್ನ ಗೆದ್ದ ಭಾರತದ ಮೊದಲ ವನಿತಾ ಶೂಟರ್‌ ಎಂಬ ದಾಖಲೆಗೆ ಪಾತ್ರರಾದರು. ಆದರೆ ಇದೇ ವಿಭಾಗದಲ್ಲಿ ಸ್ಪರ್ಧೆಗಿಳಿದಿದ್ದ ಭರವಸೆಯ ಶೂಟರ್‌ ಮನು ಭಾಕರ್‌ 6ನೇ ಸ್ಥಾನಕ್ಕೆ ಕುಸಿದು ನಿರಾಸೆ ಮೂಡಿಸಿದರು.

ಶೂಟೌಟ್‌ನಲ್ಲಿ ಚಿನ್ನ ನಿರ್ಧಾರ
27ರ ಹರೆಯದ ಕೊಲ್ಲಾಪುರ ಮೂಲದ ರಾಹಿ ಸರನೋಬತ್‌ಗೆ ಫೈನಲ್‌ನಲ್ಲಿ ಥಾಯ್ಲೆಂಡಿನ ನಫ‌ಸ್ವನ್‌ ಯಾಂಗ್‌ಪೈಬೂನ್‌ ಅವರಿಂದ ಕಠಿನ ಸ್ಪರ್ಧೆ ಎದುರಾಯಿತು. ಕೊನೆಗೆ 2 ಶೂಟೌಟ್‌ ಮೂಲಕ ಬಂಗಾರವನ್ನು ಇತ್ಯರ್ಥಗೊಳಿಸಲಾಯಿತು. ತೀವ್ರ ಕುತೂಹಲ ಕೆರಳಿಸಿದ 5 ಶಾಟ್‌ಗಳ 10 ಸೀರೀಸ್‌ ಫೈನಲ್‌ನಲ್ಲಿ ರಾಹಿ ಮತ್ತು ಯಾಂಗ್‌ಪೈಬೂನ್‌ ತಲಾ 34 ಅಂಕ ಸಂಪಾದಿಸಿ ಮೊದಲಿಗರಾಗಿ ಮೂಡಿಬಂದರು. ಹೀಗಾಗಿ ಶೂಟೌಟ್‌ ಅನಿವಾರ್ಯವಾಯಿತು. ಇಲ್ಲಿಯೂ ಸ್ಪರ್ಧೆ ತೀವ್ರವಾಗಿತ್ತು. ಮೊದಲ ಶೂಟ್‌ ಆಫ್ನಲ್ಲಿ ಇಬ್ಬರೂ ತಲಾ 4ಕ್ಕೆ ಗುರಿ ಇರಿಸಿ ಮತ್ತೆ ಸಮಬಲ ಸಾಧಿಸಿದರು. ಆದರೆ ದ್ವಿತೀಯ ಶೂಟ್‌ ಆಫ್ನಲ್ಲಿ ರಾಹಿ 3, ಯಾಂಗ್‌ಪೈಬೂನ್‌ 2ಕ್ಕೆ ಗುರಿ ಇರಿಸಿದರು. ಐತಿಹಾಸಿಕ ಚಿನ್ನ ರಾಹಿ ಸರನೋಬತ್‌ ಕೊರಳನ್ನು ಅಲಂಕರಿಸಿತು. ಕಂಚಿನ ಪದಕ ದಕ್ಷಿಣ ಕೊರಿಯಾದ ಕಿಮ್‌ ಮಿನ್‌ಜುಂಗ್‌ ಪಾಲಾಯಿತು.

ಫೈನಲ್‌ ಸ್ಪರ್ಧೆಯ ಆರಂಭಿಕ ಹಂತಗಳಲ್ಲಿ ರಾಹಿಯೇ ಮುನ್ನಡೆಯಲ್ಲಿದ್ದರು. 6ನೇ ಸುತ್ತಿನಲ್ಲಿ ಐದಕ್ಕೆ 5 ಅಂಕ ಗಳಿಸಿ ಬಂಗಾರದತ್ತ ಮುನ್ನುಗ್ಗಿದರು. ಆದರೆ ಈ ಹಂತದಲ್ಲಿ ಥಾಯ್‌ ಸ್ಪರ್ಧಿ ಮೇಲುಗೈ ಸಾಧಿಸುತ್ತ ಬಂದರು. ಸ್ಪರ್ಧೆ ತೀವ್ರಗೊಂಡಿತು. ಕೊನೆಯಲ್ಲಿ ಇಬ್ಬರೂ ಸಮಾನ ಅಂಕ ಸಂಪಾದಿಸಿ ರೋಚಕ ಹೋರಾಟಕ್ಕೆ ಸಾಕ್ಷಿಯಾದರು. ಇಬ್ಬರೂ 34 ಅಂಕ ಸಂಪಾದಿಸುವ ಮೂಲಕ ಏಶ್ಯನ್‌ ಗೇಮ್ಸ್‌ ಜಂಟಿ ದಾಖಲೆ ಸ್ಥಾಪಿಸಿದರು.

ಇದು ಜಕಾರ್ತಾ ಏಶ್ಯಾಡ್‌ನ‌ಲ್ಲಿ ಭಾರತಕ್ಕೆ ಶೂಟಿಂಗ್‌ನಲ್ಲಿ ಒಲಿದ 2ನೇ ಸ್ವರ್ಣ ಪದಕ. ಮಂಗಳವಾರ ಪುರುಷರ 10 ಮೀ. ಪಿಸ್ತೂಲ್‌ ಸ್ಪರ್ಧೆಯಲ್ಲಿ 16ರ ಹರೆಯದ ಸೌರಭ್‌ ಚೌಧರಿ ಚಿನ್ನ ಜಯಿಸಿದ್ದರು. ಒಟ್ಟಾರೆಯಾಗಿ ಏಶ್ಯಾಡ್‌ ಶೂಟಿಂಗ್‌ನಲ್ಲಿ ಭಾರತದ ಪಾಲಾದ 6ನೇ ಚಿನ್ನದ ಪದಕ ಇದಾಗಿದೆ. ಉಳಿದ ಸಾಧಕರೆಂದರೆ ಜಸ್ಪಾಲ್‌ ರಾಣ, ರಣಧೀರ್‌ ಸಿಂಗ್‌, ಜಿತು ರಾಯ್‌ ಮತ್ತು ರಂಜನ್‌ ಸೋಧಿ.

ವಿಶ್ವಕಪ್‌ ಶೂಟಿಂಗ್‌ ಸ್ಪರ್ಧೆಯಲ್ಲೂ (2013) ಭಾರತಕ್ಕೆ ಮೊದಲ ಚಿನ್ನದ ಪದಕ ತಂದಿತ್ತ ವನಿತಾ ಶೂಟರ್‌ ಎಂಬ ಖ್ಯಾತಿಯ ರಾಹಿ, 2010ರ ದಿಲ್ಲಿ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಅವಳಿ ಚಿನ್ನ, 2014ರ ಏಶ್ಯಾಡ್‌ನ‌ಲ್ಲಿ ಕಂಚಿನ ಪದಕ ಜಯಿಸಿದ ಸಾಧಕಿಯೂ ಹೌದು.

ಟೆಕ್ನಿಕ್‌ನಲ್ಲಿ ಬದಲಾವಣೆ
ಕಳೆದ ವರ್ಷ ರಾಹಿ ಮಣಿ ಗಂಟಿನ ಗಂಭೀರ ಸಮಸ್ಯೆಯಿಂದ ನರಳಿದ್ದರು. ಹೀಗಾಗಿ ಅವರು ತಮ್ಮ ಶೂಟಿಂಗ್‌ ಟೆಕ್ನಿಕ್‌ನಲ್ಲಿ ಬದಲಾವಣೆ ಮಾಡಿಕೊಳ್ಳು ವುದು ಅನಿವಾರ್ಯವಾಯಿತು. ಈ ಸಂದರ್ಭ 2 ಬಾರಿಯ ವಿಶ್ವ ಚಾಂಪಿಯನ್‌, ಒಲಿಂಪಿಕ್‌ ಪದಕ ವಿಜೇತ ಜರ್ಮನಿಯ ಎಂ. ದೋರ್ಜ್‌ ಸುರೆನ್‌ ಅವರಿಂದ ಕೋಚಿಂಗ್‌ ಪಡೆದು ಏಶ್ಯಾಡ್‌ಗೆ ಅಣಿಯಾದರು. ಇತಿಹಾಸವೀಗ ಕಣ್ಮುಂದಿದೆ. ಇದೇ ವೇಳೆ ವನಿತೆಯರ ರೈಫ‌ಲ್‌ 3 ಪೊಸಿಶನ್‌ನಲ್ಲಿ ಸ್ಪರ್ಧಿಸಿದ್ದ ಭಾರತದ ಅಂಜುಮ್‌ ಮೌದ್ಗಿಲ್‌ ಮತ್ತು ಗಾಯತ್ರಿ ನಿತ್ಯಾನಂದಮ್‌ ಫೈನಲ್‌ ತಲುಪುವಲ್ಲಿ ವಿಫ‌ಲರಾದರು.

ತಂತ್ರಗಾರಿಕೆಯಲ್ಲಿ ಬದಲಾವಣೆ
ರಾಹಿಯ ತಂತ್ರಗಾರಿಕೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಬೇಕಾಯಿತು. ಅಲ್ಲದೆ ಆಕೆಯನ್ನು ಮಾನಸಿಕವಾಗಿ ಬಲಿಷ್ಠಗೊಳಿಸಬೇಕಾಗಿತ್ತು. ಆಕೆಯನ್ನು ಮತ್ತಷ್ಟು ಹರಿತಗೊಳಿಸುವುದು ನನ್ನ ಕೆಲಸವಾಗಿತ್ತು.
ಎಂ.ದೋರ್ಜ್‌ಸುರೆನ್‌

ಟಾಪ್ ನ್ಯೂಸ್

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

1–vi

Lancashire ಪರ ಆಡುವ ವೆಂಕಟೇಶ್‌ ಅಯ್ಯರ್‌

1-srrr

Women’s Asia Cup: ಪಾಕ್ ವಿರುದ್ಧ ರೋಚಕ ಜಯ; ಫೈನಲ್‌ಗೆ ಲಂಕಾ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

2-chithapura

Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.