![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
ಏಶ್ಯನ್ ಮಹಿಳಾ ಬಾಸ್ಕೆಟ್ಬಾಲ್: ಭಾರತಕ್ಕೆ ಪ್ರಶಸ್ತಿ
Team Udayavani, Nov 4, 2018, 6:30 AM IST
![ban04111812.jpg](https://www.udayavani.com/wp-content/uploads/2018/11/4/ban04111812-620x353.jpg)
ಬೆಂಗಳೂರು: ಫಿಬಾ ಅಂಡರ್-18 ಏಶ್ಯನ್ ಮಹಿಳಾ ಬಾಸ್ಕೆಟ್ಬಾಲ್ ಕೂಟದ “ಬಿ’ ಡಿವಿಷನ್ ಫೈನಲ್ನಲ್ಲಿ ಭಾರತೀಯರು ಕಜಕಿಸ್ಥಾನ ವಿರುದ್ಧ 68-45 ಅಂಕಗಳ ಅಂತರದಿಂದ ಗೆದ್ದು ಟ್ರೋಫಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಈ ಗೆಲುವಿನೊಂದಿಗೆ ಮುಂಬರುವ ಏಶ್ಯನ್ ಚಾಂಪಿಯನ್ಶಿಪ್ನ “ಬಿ’ ಗುಂಪಿಗೆ ಭಾರತ ಅರ್ಹತೆ ಪಡೆದುಕೊಂಡಿದೆ.
ಶನಿವಾರ ಉದ್ಯಾನನಗರಿಯ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತೀಯರು ಅಪ್ರತಿಮ ಆಟ ಪ್ರದರ್ಶಿಸಿದರು. ಮೊದಲ ಕ್ವಾರ್ಟರ್ನಲ್ಲಿ ಕಜಕಿಸ್ಥಾನಕ್ಕೆ 26-13ರಿಂದ ಆಘಾತ ನೀಡಿದರು. ಅಲ್ಲಿಂದ ಬಳಿಕ ಮುಂದಿನ ನಾಲ್ಕೂ ಕ್ವಾರ್ಟರ್ಗಳಲ್ಲೂ ಎದುರಾಳಿಗೆ ಆಘಾತ ನೀಡಿದ ಭಾರತೀಯರು ಅಂತಿಮವಾಗಿ ಟ್ರೋಫಿಗೆ ಮುತ್ತಿಕ್ಕಿದರು.
ಭಾರತ ತಂಡದ ಪರ ಹರ್ಷಿತಾ 20 ಅಂಕಗಳಿಸಿ ಅತ್ಯುತ್ತಮ ಆಟ ಪ್ರದರ್ಶಿಸಿದರೆ, ತಂಡದ ನಾಯಕಿ ಪುಷ್ಪ ಸೆಂಥಿಲ್ ಕುಮಾರ್ 14 ಅಂಕ ಗಳಿಸಿದರು. ಉಳಿದಂತೆ ಸೃಷ್ಟಿ 10 ಅಂಕ, ಐಶ್ವರ್ಯಾ 7 ಅಂಕ ಗಳಿಸುವ ಮೂಲಕ ತಂಡದ ಗೆಲುವಿನಲ್ಲಿ ಕಾಣಿಕೆ ನೀಡಿದರು. ಕಜಕಿಸ್ಥಾನ ಪರ ಇನಾ ಕುಲಿಕೋವಾ ಸರ್ವಾಧಿಕ 10 ಅಂಕ ಗಳಿಸಿದರು. ಉಳಿದಂತೆ ಡಯಾನಾ 8 ಅಂಕ ಮತ್ತು ಅಲೆಕ್ಸಾಂಡ್ರಿಯಾ 7 ಅಂಕ ಗಳಿಸಿ ಹೋರಾಟ ನಡೆಸಿದರೂ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ.
ಟಾಪ್ ನ್ಯೂಸ್
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
![1-aaasdeqweqw](https://www.udayavani.com/wp-content/uploads/2024/07/1-aaasdeqweqw-150x100.jpg)
India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್ ಯುಗಾರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.