![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
ಯು ಮುಂಬಾಗೆ ಸತತ ಮೂರನೇ ಜಯ
Team Udayavani, Nov 4, 2018, 6:25 AM IST
![kabaddi.jpg](https://www.udayavani.com/wp-content/uploads/2018/11/4/kabaddi.jpg)
ಗ್ರೇಟರ್ ನೋಯ್ಡಾ: ಆರನೇ ಆವೃತ್ತಿ ಪ್ರೊ ಕಬಡ್ಡಿ ಕೂಟದ ಶನಿವಾರದ ಮೊದಲ ಪಂದ್ಯದಲ್ಲಿ ಪುಣೇರಿ ಪಲ್ಟಾನ್ ವಿರುದ್ಧ ಯು ಮುಂಬಾ 31-22 ಅಂಕಗಳ ಅಂತರದಿಂದ ಗೆಲುವು ದಾಖಲಿಸಿದೆ.
ಇದು ಕೂಟದಲ್ಲಿ ಯು ಮುಂಬಾ ದಾಖಲಿಸಿದ ಸತತ ಮೂರನೇ ಗೆಲುವು ಎನ್ನುವುದು ವಿಶೇಷ. ಇನ್ನೊಂದೆಡೆ ಪುಣೇರಿ ಪಲ್ಟಾನ್ ಕೂಟದಲ್ಲಿ ಒಟ್ಟಾರೆ 6ನೇ ಸೋಲು ಅನುಭವಿಸಿದೆ.
ಶನಿವಾರದ ಬೆಂಗಳೂರು ಬುಲ್ಸ್-ಯುಪಿ ಯೋಧ ನಡುವಿನ ದ್ವಿತೀಯ ಪಂದ್ಯ ಅನೇಕ ಏರಿತಗಳನ್ನು ಕಾಣುತ್ತ ಹೋಯಿತು. ಅಂತಿಮವಾಗಿ ಬೆಂಗಳೂರು ಬುಲ್ಸ್ 35-29 ಅಂತರದಿಂದ ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು.
“ಶಹೀದ್ ವಿಜಯ್ ಸಿಂಗ್ ಪಾಥಿಕ್ ನ್ಪೋರ್ಟ್ಸ್ ಕಾಂಪ್ಲೆಕ್ಸ್’ನಲ್ಲಿ ನಡೆದ ಪಂದ್ಯದಲ್ಲಿ ಯು ಮುಂಬಾ ಪರ ಅಭಿಷೇಕ್ ಸಿಂಗ್ ರೈಡಿಂಗ್ನಿಂದ ವೈಯಕ್ತಿಕ ಅತ್ಯಧಿಕ ಅಂಕ ದಾಖಲಿಸಿದರು (7). ಉಳಿದಂತೆ ಸುರೇಂದ್ರ ಸಿಂಗ್ (4 ಅಂಕ), ವಿನೋದ್ ಕುಮಾರ್ (4 ಅಂಕ), ಫಜಲ್ ಅತ್ರಾಚಲಿ (4 ಅಂಕ) ಭರ್ಜರಿ ಟ್ಯಾಕಲ್ ಮಾಡಿ ಪುಣೇರಿ ತಂತ್ರವನ್ನು ತಲೆಕೆಳಗೆ ಮಾಡಿದರು.
ಪುಣೇರಿ ಪಲ್ಟಾನ್ ಪರ ಹೆಚ್ಚುವರಿ ಆಟಗಾರನಾಗಿ ಕಣಕ್ಕೆ ಇಳಿದಿದ್ದ ಅಕ್ಷಯ್ ಜಾಧವ್ ರೈಡಿಂಗ್ನಿಂದ ತಂಡಕ್ಕೆ 5 ಅಂಕ ತಂದು ಕೊಟ್ಟರು. ಉಳಿದಂತೆ ಜಿ.ಬಿ. ಮೋರೆ (4 ಅಂಕ), ಸಂದೀಪ್ ನರ್ವಾಲ್ (3 ಅಂಕ), ದೀಪಕ್ ಕುಮಾರ್ ದಹಿಯಾ (2 ಅಂಕ) ಹಾಗೂ ಮೋನು (2 ಅಂಕ) ಅವರೆಲ್ಲ ಕಳಪೆ ನಿರ್ವಹಣೆ ನೀಡಿದ್ದರಿಂದ ಪುಣೇರಿ ಸೋಲುವಂತಾಯಿತು.
ಟಾಪ್ ನ್ಯೂಸ್
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
![1-aaasdeqweqw](https://www.udayavani.com/wp-content/uploads/2024/07/1-aaasdeqweqw-150x100.jpg)
India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್ ಯುಗಾರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.