ವರ್ಷಾಂತ್ಯದಲ್ಲಿ ಆಸೀಸ್‌ ಟೆಸ್ಟ್‌ ಸರಣಿ ವಿಕ್ರಮ

ಮೆಲ್ಬರ್ನ್ ಅಂಗಳದಲ್ಲಿ ಭರ್ಜರಿ 247 ರನ್‌ ಜಯಭೇರಿ; ಆಸ್ಟ್ರೇಲಿಯ 2-0 ಮುನ್ನಡೆ

Team Udayavani, Dec 29, 2019, 11:34 PM IST

bg-63

ಮೆಲ್ಬರ್ನ್: ನ್ಯೂಜಿಲ್ಯಾಂಡ್‌ ಎದುರಿನ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದಲ್ಲಿ 247 ರನ್‌ ಜಯಭೇರಿ ಮೊಳಗಿಸಿದ ಆಸ್ಟ್ರೇಲಿಯ ಸರಣಿಯನ್ನು ವಶಪಡಿಸಿಕೊಂಡಿದೆ. ವರ್ಷಾಂತ್ಯವನ್ನು ಗೆಲುವಿನೊಂದಿಗೆ ಮುಗಿಸಿದೆ.

ಗೆಲುವಿಗೆ 488 ರನ್ನುಗಳ ಕಠಿನ ಗುರಿ ಪಡೆದ ನ್ಯೂಜಿಲ್ಯಾಂಡ್‌, ಪಂದ್ಯದ 4ನೇ ದಿನವಾದ ರವಿವಾರ 240 ರನ್ನುಗಳಿಗೆ ಸರ್ವಪತನ ಕಂಡಿತು. ಆರಂಭಕಾರ ಟಾಮ್‌ ಬ್ಲಿಂಡೆಲ್‌ ಶತಕ ಬಾರಿಸಿ ಹೋರಾಟ ಸಂಘಟಿಸಿದ್ದೊಂದೇ ಕಿವೀಸ್‌ ಪಾಲಿನ ಸಮಾಧಾನ. ಕಿವೀಸ್‌ ಸರದಿಯ ಅರ್ಧದಷ್ಟು ರನ್‌ ಬ್ಲಿಂಡೆಲ್‌ ಅವರದೇ ಆಗಿತ್ತು.

3 ಪಂದ್ಯಗಳ ಸರಣಿಯಲ್ಲೀಗ ಕಾಂಗರೂ ಪಡೆ 2-0 ಮುನ್ನಡೆಯಲ್ಲಿದೆ. ಪರ್ತ್‌ನಲ್ಲಿ ನಡೆದ ಡೇ-ನೈಟ್‌ ಟೆಸ್ಟ್‌ ಪಂದ್ಯದಲ್ಲೂ ಆಸ್ಟ್ರೇಲಿಯ ಬೃಹತ್‌ ಗೆಲುವು ಸಾಧಿಸಿತ್ತು (296 ರನ್‌). “ನ್ಯೂ ಇಯರ್‌ ಟೆಸ್ಟ್‌’ ಜ. 3ರಿಂದ ಸಿಡ್ನಿಯಲ್ಲಿ ಆರಂಭವಾಗಲಿದೆ.

ಪ್ಯಾಟಿನ್ಸನ್‌ ಪರಾಕ್ರಮ
3ನೇ ದಿನದ ಅಂತ್ಯಕ್ಕೆ ಆಸ್ಟ್ರೇಲಿಯ 4 ವಿಕೆಟಿಗೆ 137 ರನ್‌ ಮಾಡಿತ್ತು. ರವಿವಾರ 5ಕ್ಕೆ 168 ರನ್‌ ಬಾರಿಸಿ ಡಿಕ್ಲೇರ್‌ ಮಾಡಿತು. ನ್ಯೂಜಿಲ್ಯಾಂಡಿನ ದ್ವಿತೀಯ ಸರದಿಯ ಅಗ್ರ ಕ್ರಮಾಂಕದ ಮೇಲೆ ಪ್ಯಾಟಿನ್ಸನ್‌ ಘಾತಕವಾಗಿ ಎರಗಿದರು. ಲ್ಯಾಥಂ (8), ನಾಯಕ ವಿಲಿಯಮ್ಸನ್‌ (0) ಮತ್ತು ಟೇಲರ್‌ (2) ಅವರನ್ನು ಬಹಳ ಬೇಗ ಪೆವಿಲಿಯನ್ನಿಗೆ ಅಟ್ಟಿದರು. ಬಳಿಕ ಸ್ಪಿನ್ನರ್‌ ಲಿಯೋನ್‌ ಕೈಚಳಕ ಮೊದಲ್ಗೊಂಡಿತು. ಅವರು ಮಧ್ಯಮ ಕ್ರಮಾಂಕಕ್ಕೆ ಬರೆ ಹಾಕಿದರು. ನಿಕೋಲ್ಸ್‌ (33), ವಾಟಿಗ್‌ (22), ಗ್ರ್ಯಾಂಡ್‌ಹೋಮ್‌ (9) ಮತ್ತು ಸ್ಯಾಂಟ್ನರ್‌ಗೆ (27) ಬಲೆ ಬೀಸಿದರು. ಸೌಥಿ ರನೌಟಾದರೆ, ಗಾಯಾಳು ಬೌಲ್ಟ್ ಬ್ಯಾಟಿಂಗಿಗೆ ಬರಲಿಲ್ಲ.

ಬಂಡೆಯಾಗಿ ನಿಂತ ಬ್ಲಿಂಡೆಲ್‌
ಆದರೆ ಆರಂಭಕಾರ ಟಾಮ್‌ ಬ್ಲಿಂಡೆಲ್‌ ಮಾತ್ರ ಒಂದು ಕಡೆ ಬಂಡೆಯಂತೆ ನಿಂತಿದ್ದರು. ಕೊನೆಯ ತನಕ ಹೋರಾಟ ಜಾರಿಯಲ್ಲಿರಿಸಿದ ಅವರು 121 ರನ್‌ ಬಾರಿಸಿ ಜೀವನಶ್ರೇಷ್ಠ ಬ್ಯಾಟಿಂಗ್‌ ಪ್ರದರ್ಶಿಸಿದರು (210 ಎಸೆತ, 15 ಬೌಂಡರಿ). 3ನೇ ಟೆಸ್ಟ್‌ ಆಡುತ್ತಿರುವ ಬ್ಲಿಂಡೆಲ್‌ ದಾಖಲಿಸಿದ 2ನೇ ಶತಕ ಇದಾಗಿದೆ.

ಬ್ಲಿಂಡೆಲ್‌ ಅವರನ್ನು ಔಟ್‌ ಮಾಡಿದ ಪಾರ್ಟ್‌
ಟೈಮ್‌ ಬೌಲರ್‌ ಮಾರ್ನಸ್‌ ಲಬುಶೇನ್‌ ಆಸ್ಟ್ರೇಲಿಯದ ಗೆಲುವನ್ನು ಸಾರಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದ ಟ್ರ್ಯಾವಿಸ್‌ ಹೆಡ್‌ ಅವರಿಗೆ ಪಂದ್ಯಶ್ರೇಷ್ಠ ಗೌರವ ಒಲಿಯಿತು.

ಸಂಕ್ಷಿಪ್ತ ಸ್ಕೋರ್‌
ಆಸ್ಟ್ರೇಲಿಯ-467 ಮತ್ತು 5 ವಿಕೆಟಿಗೆ 168 ಡಿಕ್ಲೇರ್‌ (ವಾರ್ನರ್‌ 38, ಬರ್ನ್ಸ್ 35, ವೇಡ್‌ ಔಟಾಗದೆ 30, ಹೆಡ್‌ ಔಟಾಗದೆ 28, ವ್ಯಾಗ್ನರ್‌ 50ಕ್ಕೆ 3). ನ್ಯೂಜಿಲ್ಯಾಂಡ್‌-148 ಮತ್ತು 240 (ಬ್ಲಿಂಡೆಲ್‌ 121, ನಿಕೋಲ್ಸ್‌ 33, ಸ್ಯಾಂಟ್ನರ್‌ 27, ವಾಟಿಗ್‌ 22, ಲಿಯೋನ್‌ 81ಕ್ಕೆ 4, ಪ್ಯಾಟಿನ್ಸನ್‌ 35ಕ್ಕೆ 3). ಪಂದ್ಯಶ್ರೇಷ್ಠ: ಟ್ರ್ಯಾವಿಸ್‌ ಹೆಡ್‌.

ಟಾಪ್ ನ್ಯೂಸ್

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

1–vi

Lancashire ಪರ ಆಡುವ ವೆಂಕಟೇಶ್‌ ಅಯ್ಯರ್‌

1-srrr

Women’s Asia Cup: ಪಾಕ್ ವಿರುದ್ಧ ರೋಚಕ ಜಯ; ಫೈನಲ್‌ಗೆ ಲಂಕಾ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.