ಪ್ರೊ ಕಬಡ್ಡಿ: ಬುಲ್ಸ್‌, ಮುಂಬಾ ಸೆಮಿಗೆ ಲಗ್ಗೆ


Team Udayavani, Oct 15, 2019, 5:45 AM IST

kbd

ಅಹ್ಮದಾಬಾದ್‌: ಪವನ್‌ ಸೆಹ್ರಾವತ್‌ ಅವರ ಬೆಂಕಿ-ಬಿರುಗಾಳಿಯಂತಹ ರೈಡಿಂಗ್‌ನಿಂದಾಗಿ ಹಾಲಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ 7ನೇ ಆವೃತ್ತಿ ಪ್ರೊ ಕಬಡ್ಡಿ ಕೂಟದ ಸೆಮಿಫೈನಲ್‌ಗೆ ಲಗ್ಗೆ ಇರಿಸಿದೆ.

ಸೋಮವಾರ ನಡೆದ ಮೊದಲ ಎಲಿಮಿನೇಟರ್‌ ಪಂದ್ಯದಲ್ಲಿ ಬುಲ್ಸ್‌ 48-45 ಅಂಕಗಳ ರೋಚಕ ಹೋರಾಟದಲ್ಲಿ ಯುಪಿ ಯೋಧಾ ತಂಡಕ್ಕೆ ನೀರು ಕುಡಿಸಿತು. ಪೂರ್ಣಾವಧಿಯಲ್ಲಿ ಪಂದ್ಯ 36-36 ಅಂಕಗಳಿಂದ ಟೈ ಆಗಿತ್ತು. ಅನಂತರದ ತಲಾ 3 ನಿಮಿಷಗಳ ಹೆಚ್ಚುವರಿ ಅವಧಿಯಲ್ಲಿ ಬೆಂಗಳೂರು ಬುಲ್ಸ್‌ ಗೆ ಅದೃಷ್ಟ ಕೈ ಹಿಡಿಯಿತು. ಈ ವಿಜಯದೊಂದಿಗೆ ಬೆಂಗಳೂರು ಬುಲ್ಸ್‌ ಅ. 16ರಂದು ನಡೆಯಲಿರುವ ಸೆಮಿಫೈನಲ್‌ನಲ್ಲಿ ಬಲಿಷ್ಠ ದಬಾಂಗ್‌ ಡೆಲ್ಲಿ ತಂಡವನ್ನು ಎದುರಿಸಲಿದೆ.

ದಿನದ ದ್ವಿತೀಯ ಎಲಿಮಿನೇಟರ್‌ನಲ್ಲಿ ಯು ಮುಂಬಾ 46-38 ಅಂತರದಿಂದ ಹರ್ಯಾಣ ಸ್ಟೀಲರ್ಗೆ ಸೋಲುಣಿಸಿ ದ್ವಿತೀಯ ಸೆಮಿಫೈನಲ್‌ಗೆ ಅಣಿಯಾಯಿತು. ಇಲ್ಲಿ ಮುಂಬಾ ತಂಡ ಬೆಂಗಾಲ್‌ ವಿರುದ್ಧ ಸೆಣಸಲಿದೆ.

ಪವನ್‌ ಆಕ್ರಮಣಕ್ಕೆ ಸಾಟಿಯಿಲ್ಲ
ಪವನ್‌ ಸೆಹ್ರಾವತ್‌ ಎಂದಿನ ಶೈಲಿಯಲ್ಲೇ ಅಬ್ಬರದ ರೈಡಿಂಗ್‌ ಪ್ರದರ್ಶಿಸಿದರು. ಇವರ ಸಾಹಸಮಯ ರೈಡಿಂಗ್‌ನಿಂದಾಗಿಯೇ ತಂಡ ಗೆಲುವು ಸಾಧಿಸಿಕೊಂಡಿತು. ಒಟ್ಟಾರೆ 25 ರೈಡಿಂಗ್‌ ನಡೆಸಿದ ಪವನ್‌ ಸೆಹ್ರಾವತ್‌ 18 ಟಚ್‌ ಪಾಯಿಂಟ್‌, 2 ಬೋನಸ್‌ ಸೇರಿದಂತೆ ಒಟ್ಟು 20 ರೈಡಿಂಗ್‌ ಅಂಕ ಕಲೆಹಾಕಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು. ಸೆಹ್ರಾವತ್‌ ಅತ್ಯಾಕರ್ಷಕ ರೈಡಿಂಗ್‌, ಕೆಚ್ಚೆದೆಯ ಹೋರಾಟದಿಂದ ಅಭಿಮಾನಿಗಳ ಗಮನ ಸೆಳೆದರು.

ಸುಮಿತ್‌ ಸಿಂಗ್‌ (7 ಅಂಕ) ಅದ್ಭುತ ಟ್ಯಾಕಲ್‌ ನಡೆಸಿ ರಕ್ಷಣಾ ವಿಭಾಗದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದರು. ಉಳಿದಂತೆ ಮಹೇಂದ್ರ ಸಿಂಗ್‌ (4 ಟ್ಯಾಕಲ್‌ ಅಂಕ), ಸೌರವ್‌ ನಂದಲ್‌ (2 ಟ್ಯಾಕಲ್‌ ಅಂಕ) ಹಾಗೂ ಅಮಿತ್‌ ಶೆರಾನ್‌ (2 ಟ್ಯಾಕಲ್‌ ಅಂಕ) ಗಮನ ಸೆಳೆದರು. ಆದರೆ ತಾರಾ ಆಟಗಾರ ರೋಹಿತ್‌ ಕುಮಾರ್‌ ಬದಲಿ ಆಟಗಾರನಾಗಿ ಕಣಕ್ಕಿಳಿದು 3 ರೈಡಿಂಗ್‌ ಅಂಕ ಪಡೆದರು.

ರಿಷಾಂಕ್‌, ಶ್ರೀಕಾಂತ್‌ ಹೋರಾಟ ವ್ಯರ್ಥ
ಯುಪಿ ಯೋಧಾ ಅಪ್ರತಿಮ ಆಟ ಪ್ರದರ್ಶಿಸಿ ಎರಡು ಮೂರು ಸಲ ಒಟ್ಟಾರೆ ಅಂಕದಲ್ಲಿ ಬೆಂಗಳೂರಿಗಿಂತ ಹೆಚ್ಚು ಅಂಕ ಸಂಪಾದಿಸಿ ಮುನ್ನಡೆಯಲ್ಲಿತ್ತು. ಆದರೆ ಬುಲ್ಸ್‌ ಪರ ಪವನ್‌ ಸೆಹ್ರಾವತ್‌ ಪ್ರಚಂಡ ರೈಡಿಂಗ್‌ ನಡೆಸಿ ಯುಪಿಗೆ ಸಿಂಹಸ್ವಪ್ನರಾಗಿ ಪರಿಣಮಿಸಿದರು. ಯುಪಿ ಪರ ರಿಷಾಂಕ್‌ ದೇವಾಡಿಗ (11 ರೈಡಿಂಗ್‌ ಅಂಕ), ಶ್ರೀಕಾಂತ್‌ ಜಾಧವ್‌ (9 ರೈಡಿಂಗ್‌ ಅಂಕ) ಅಪ್ರತಿಮ ಹೋರಾಟ ನಡೆಸಿದರೂ ಗೆಲುವು ದಕ್ಕಲಿಲ್ಲ.

ಟಾಪ್ ನ್ಯೂಸ್

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

1-qeweqweqwe

IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್‌ಗಳ ಅಮೋಘ ಜಯ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.