ಡೆಲ್ಲಿಗೆ 51 ರನ್‌ ಗೆಲುವು


Team Udayavani, Apr 16, 2017, 1:22 PM IST

dellhi.jpg

ಹೊಸದಿಲ್ಲಿ: ಆಲ್‌ರೌಂಡ್‌ ಆಟದ ಪ್ರದರ್ಶನ ನೀಡಿದ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡವು ಐಪಿಎಲ್‌ 10ರ ಶನಿವಾರದ ಪಂದ್ಯದಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡವನ್ನು 51 ರನ್ನುಗಳಿಂದ ಸೋಲಿಸಿದೆ.

ಸ್ಯಾಮ್‌ ಬಿಲ್ಲಿಂಗ್ಸ್‌ ಮತ್ತು ಕೋರಿ ಆ್ಯಂಡರ್ಸನ್‌ ಅವರ ಉಪಯುಕ್ತ ಆಟದಿಂದಾಗಿ ಡೆಲ್ಲಿ ತಂಡವು ಆರು ವಿಕೆಟಿಗೆ 188 ರನ್ನುಗಳ ಉತ್ತಮ ಮೊತ್ತ ಪೇರಿಸಿತು. ಇದಕ್ಕುತ್ತರವಾಗಿ ಬ್ಯಾಟಿಂಗ್‌ ಕುಸಿತಕ್ಕೆ ಒಳಗಾದ ಪಂಜಾಬ್‌ 9 ವಿಕೆಟಿಗೆ 137 ರನ್‌ ಗಳಿಸಲಷ್ಟೇ ಶಕ್ತವಾಯಿತು. ಮಿಲ್ಲರ್‌, ಮ್ಯಾಕ್ಸ್‌ವೆಲ್‌ ಅವರಂತಹ ಬ್ಯಾಟ್ಸ್‌ಮನ್‌ಗಳೆಲ್ಲ ವೈಫ‌ಲ್ಯ ಅನುಭವಿಸಿದರೆ ಬೌಲರ್‌ ಅಕ್ಷರ್‌ ಪಟೇಲ್‌ ತಂಡದ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು.  29 ಎಸೆತ ಎದುರಿಸಿದ ಅವರು 1 ಬೌಂಡರಿ ಮತ್ತು 3 ಸಿಕ್ಸರ್‌ ನೆರವಿನಿಂದ 44 ರನ್‌ ಗಳಿಸಿ ಇನ್ನಿಂಗ್ಸ್‌ನ ಅಂತಿಮ ಎಸೆತದಲ್ಲಿ ಕ್ಲೀನ್‌ಬೌಲ್ಡ್‌ ಆದರು.
ಕ್ರಿಸ್‌ ಮೊರಿಸ್‌ 23 ರನ್ನಿಗೆ 3 ವಿಕೆಟ್‌ ಪಡೆದರೆ ಕಮಿನ್ಸ್‌ ಮತ್ತು ನದೀಮ್‌ ತಲಾ ಎರಡು ವಿಕೆಟ್‌ ಉರುಳಿಸಿದರು.

ಈ ಮೊದಲು ಟಾಸ್‌ ಗೆದ್ದ ಆತಿಥೇಯ ಡೆಲ್ಲಿ ತಂಡವು ಮೊದಲು ಬ್ಯಾಟಿಂಗ್‌ ನಡೆಸಿತು. ಈ ಹಿಂದಿನ ಪಂದ್ಯದಲ್ಲಿ ಐಪಿಎಲ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ್ದ ಸಂಜು ಸ್ಯಾಮ್ಸನ್‌ ಮತ್ತು ಸ್ಯಾಮ್‌ ಬಿಲ್ಲಿಂಗ್ಸ್‌ ಇನ್ನಿಂಗ್ಸ್‌ ಆರಂಭಿಸಿ 6.5 ಓವರ್‌ಗಳಲ್ಲಿ ಮೊದಲ ವಿಕೆಟಿಗೆ 53 ರನ್‌ ಪೇರಿಸಿದರು. ನಿಧಾನಗತಿಯಲ್ಲಿ ಆಡಿದ ಸ್ಯಾಮ್ಸನ್‌ 18 ಎಸೆತಗಳಿಂದ 19 ರನ್‌ ಗಳಿಸಿ ಔಟಾದರು.

ವನ್‌ಡೌನ್‌ ಕರುಣ್‌ ನಾಯರ್‌ ಬ್ಯಾಟಿಂಗ್‌ ವೈಫ‌ಲ್ಯ ಈ ಪಂದ್ಯದಲ್ಲೂ ಮುಂದುವರಿಯಿತು. 3 ಎಸೆತ ಎದುರಿಸಿದರೂ ರನ್‌ ಖಾತೆ ತೆರೆಯಲು ಅವರು ವಿಫ‌ಲರಾದರು. ಈ ಪಂದ್ಯಕ್ಕೆ ಆಯ್ಕೆಯಾದ ಶ್ರೇಯಸ್‌ ಅಯ್ಯರ್‌ 22 ರನ್ನುಗಳ ಕೊಡುಗೆ ಸಲ್ಲಿಸಿದರು. ವಿಕೆಟ್‌ನ ಒಂದು ಕಡೆ ಉತ್ತಮವಾಗಿ ಆಡುತ್ತಿದ್ದ ಬಿಲ್ಲಿಂಗ್ಸ್‌ ನಾಲ್ಕನೆಯವರಾಗಿ ಔಟ್‌ ಆದಾಗ 40 ಎಸೆತಗಳಿಂದ 55 ರನ್‌ ಹೊಡೆದಿದ್ದರು. 9 ಬೌಂಡರಿ ಒಳಗೊಂಡಿತ್ತು.

ಸ್ಕೋರ್‌ ಪಟ್ಟಿ
ಡೆಲ್ಲಿ ಡೇರ್‌ಡೆವಿಲ್ಸ್‌

ಸಂಜು ಸ್ಯಾಮ್ಸನ್‌    ಸಿ ಮಾರ್ಗನ್‌ ಬಿ ಕಾರಿಯಪ್ಪ    19
ಸ್ಯಾಮ್‌ ಬಿಲ್ಲಿಂಗ್ಸ್‌    ಸಿ ಮಿಲ್ಲರ್‌ ಬಿ ಪಟೇಲ್‌    55
ಕರುಣ್‌ ನಾಯರ್‌    ಸಿ ಸಾಹ ಬಿ ಅರೋನ್‌    0
ಶ್ರೇಯಸ್‌ ಅಯ್ಯರ್‌    ಸಿ ಮಾರ್ಗನ್‌ ಬಿ ಶರ್ಮ    22
ರಿಷಬ್‌ ಪಂತ್‌    ಸಿ ಮಾರ್ಗನ್‌ ಬಿ ಅರೋನ್‌    15
ಕೋರಿ ಆ್ಯಂಡರ್ಸನ್‌    ಔಟಾಗದೆ    39
ಕ್ರಿಸ್‌ ಮೊರಿಸ್‌    ಸಿ ಶರ್ಮ ಬಿ ಸಂದೀಪ್‌    16
ಪ್ಯಾಟ್‌ ಕಮಿನ್ಸ್‌    ಔಟಾಗದೆ    12
ಇತರ:        10
ಒಟ್ಟು (20 ಓವರ್‌ಗಳಲ್ಲಿ 6 ವಿಕೆಟಿಗೆ)    188
ವಿಕೆಟ್‌ ಪತನ:
1-53, 2-55, 3-96, 4-103, 5-120, 6-151
ಬೌಲಿಂಗ್‌: ಸಂದೀಪ್‌ ಶರ್ಮ 4-0-41-1, ಮೋಹಿತ್‌ ಶರ್ಮ 4-0-37-1, ಅಕ್ಷರ್‌ ಪಟೇಲ್‌  4-0-33-1, ವರುಣ್‌ ಅರೋನ್‌ 4-0-45-2, ಕೆಸಿ ಕಾರಿಯಪ್ಪ 3-0-23-1, ಗ್ಲೆನ್‌ ಮ್ಯಾಕ್ಸ್‌ವೆಲ್‌ 1-0-7-0

ಕಿಂಗ್ಸ್‌ ಇಲೆವೆನ್‌ ಪಂಜಾಬ್‌
ಮನನ್‌ ವೋಹ್ರ    ಎಲ್‌ಬಿಡಬ್ಲ್ಯು ಬಿ ನದೀಮ್‌    3
ಹಾಶಿಮ್‌ ಆಮ್ಲ    ಸಿ ಬಿಲ್ಲಿಂಗ್ಸ್‌ ಬಿ ಮೊರಿಸ್‌    19
ವೃದ್ಧಿಮಾನ್‌ ಸಾಹ    ಸಿ ಜಹೀರ್‌ ಬಿ ನದೀಮ್‌    7
ಇವೋನ್‌ ಮಾರ್ಗನ್‌    ಸಿ ನಾಯರ್‌ ಬಿ ಕಮಿನ್ಸ್‌    22
ಡೇವಿಡ್‌ ಮಿಲ್ಲರ್‌    ಎಲ್‌ಬಿಡಬ್ಲ್ಯು ಬಿ ಆ್ಯಂಡರ್ಸನ್‌    24
ಗ್ಲೆನ್‌ ಮ್ಯಾಕ್ಸ್‌ವೆಲ್‌    ಸಿ ಬಿಲ್ಲಿಂಗ್ಸ್‌ ಬಿ ಮಿಶ್ರಾ    0
ಅಕ್ಷರ್‌ ಪಟೇಲ್‌    ಬಿ ಮೊರಿಸ್‌    44
ಮೋಹಿತ್‌ ಶರ್ಮ    ಬಿ ಕಮಿನ್ಸ್‌    13
ಕೆಸಿ ಕಾರಿಯಪ್ಪ    ಬಿ ಮೊರಿಸ್‌    1
ಸಂದೀಪ್‌ ಶರ್ಮ    ಔಟಾಗದೆ    2
ಇತರ:        2
ಒಟ್ಟು  (20 ಓವರ್‌ಗಳಲ್ಲಿ 9 ವಿಕೆಟಿಗೆ)    137
ವಿಕೆಟ್‌ ಪತನ:
1-5, 2-21, 3-31, 4-64, 5-65, 6-88, 7-133, 8-134, 9-137
ಬೌಲಿಂಗ್‌: ಜಹೀರ್‌ ಖಾನ್‌  4-0-38-0, ಶಾಹಬಾಜ್‌ ನದೀಮ್‌ 2-0-13-2, ಕ್ರಿಸ್‌ ಮೊರಿಸ್‌ 4-0-23-3, ಪ್ಯಾಟ್‌ ಕಮಿನ್ಸ್‌ 4-0-23-2, ಆಮಿತ್‌ ಮಿಶ್ರಾ 3-0-16-1, ಕೋರಿ ಆ್ಯಂಡರ್ಸನ್‌ 3-0-23-1

ಪಂದ್ಯಶ್ರೇಷ್ಠ: ಕೋರಿ ಆ್ಯಂಡರ್ಸನ್‌

ಟಾಪ್ ನ್ಯೂಸ್

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

1–vi

Lancashire ಪರ ಆಡುವ ವೆಂಕಟೇಶ್‌ ಅಯ್ಯರ್‌

1-srrr

Women’s Asia Cup: ಪಾಕ್ ವಿರುದ್ಧ ರೋಚಕ ಜಯ; ಫೈನಲ್‌ಗೆ ಲಂಕಾ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.