Davis Cup: ಸ್ವೀಡನ್ ವಿರುದ್ಧ ಭಾರತೀಯ ತಂಡ ಗೆಲುವು ಸಾಧ್ಯತೆ
Team Udayavani, Feb 15, 2024, 10:57 PM IST
ಬೆಂಗಳೂರು: ಸ್ವೀಡನ್ ವಿರುದ್ಧ ನಡೆಯಲಿರುವ ಡೇವಿಸ್ ಕಪ್ ವಿಶ್ವ ಬಣ ಒಂದರ ಹೋರಾಟದಲ್ಲಿ ಭಾರತೀಯ ತಂಡವು ಗೆಲುವು ಸಾಧಿಸುವ ಸಾಧ್ಯತೆಯಿದೆ ಎಂದು ರಾಮ್ಕುಮಾರ್ ರಾಮನಾಥನ್ ಹೇಳಿದ್ದಾರೆ.
ಒಂದು ವೇಳೆ ಸ್ವೀಡನ್ ತಂಡವು ಆವೇ ಅಂಗಣದಲ್ಲಿ ಆಡಿದರೂ ಭಾರತವು ಅವರ ಸವಾಲನ್ನು ಎದುರಿಸಲು ಸಮರ್ಥವಾಗಿದೆ ಎಂದವರು ತಿಳಿಸಿದರು. ಭಾರತ ಮತ್ತು ಸ್ವೀಡನ್ ಆರು ಬಾರಿ ಮುಖಾಮುಖೀಯಾಗಿದ್ದು ಭಾರತ ಒಮ್ಮೆಯೂ ಗೆಲ್ಲಲಿಲ್ಲ. ಇಸ್ಲಾಮಾಬಾದ್ನಲ್ಲಿ ನಡೆದ ಪ್ಲೇ ಆಫ್ನಲ್ಲಿ ಪಾಕಿಸ್ಥಾನವನ್ನು 4 0 ಅಂತರದಿಂದ ಸೋಲಿಸಿದ ಭಾರತ ವಿಶ್ವಬಣ ಒಂದಕ್ಕೆ ತೇರ್ಗಡೆಯಾಗಿತ್ತು.
ಸ್ವೀಡನ್ ತಂಡವು ಆವೇ ಅಂಗಣದಲ್ಲಿ ಆಡುವ ಸಾಧ್ಯತೆಯಿದೆ. ಆದರೆ ನಾವು ಇತ್ತೀಚೆಗಿನ ದಿನಗಳಲ್ಲಿ ಅಮೋಘ ಟೆನಿಸ್ ಆಟ ಪ್ರದರ್ಶಿಸುತ್ತಿದ್ದೇವೆ. ನಾನು ಮತ್ತು ಸುಮಿತ್ ನಾಗಲ್ ಎದುರಾಳಿಯನ್ನು ಎದುರಿಸಲು ಸಮರ್ಥರಿದ್ದೇವೆ ಎಂದು ರಾಜ್ಯ ಟೆನಿಸ್ ಅಸೋಸಿಯೇಶನ್ ಆಶ್ರಯದಲ್ಲಿ ಡೇವಿಸ್ ಕಪ್ ವಿಜೇತ ಆಟಗಾರರಿಗೆ ನಡೆದ ಸಮ್ಮಾನ ಸಮಾರಂಭದ ವೇಳೆ ರಾಮನಾಥನ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ
Karnataka ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು
Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು
Bidar; ಹಣ ಹಂಚುವ ದೂರು: ನಾಗಮಾರಪಳ್ಳಿ ಮನೆಯಲ್ಲಿ ಪರಿಶೀಲನೆ
Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ