Emerging Asia Cup: ಭಾರತ “ಎ’ ಸೆಮಿಫೈನಲ್‌ ಪ್ರವೇಶ

 ನೇಪಾಲ ಎ ವಿರುದ್ಧ 9 ವಿಕೆಟ್‌ ಜಯ  ಬಿ ವಿಭಾಗದ ಅಗ್ರಸ್ಥಾನಿ

Team Udayavani, Jul 18, 2023, 5:22 AM IST

1-wewqewqwqe

ಕೊಲಂಬೊ: ಎಸಿಸಿ ಎಮರ್ಜಿಂಗ್‌ ತಂಡಗಳ ಏಷ್ಯಾ ಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಭಾರತ ಎ ಅಜೇಯ ಓಟ ಬೆಳೆಸಿ ಸೆಮಿಫೈನಲ್‌ ಪ್ರವೇಶಿಸಿದೆ. ಸೋಮವಾರ ನಡೆದ “ಬಿ’ ವಿಭಾಗದ ಪಂದ್ಯದಲ್ಲಿ ನೇಪಾಲ ಎ ತಂಡವನ್ನು 9 ವಿಕೆಟ್‌ಗಳಿಂದ ಉರುಳಿಸಿತು.

ನೇಪಾಲ 39.2 ಓವರ್‌ಗಳಲ್ಲಿ 167ಕ್ಕೆ ಕುಸಿದರೆ, ಭಾರತ ಎ 22.1 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 172 ರನ್‌ ಬಾರಿಸಿತು. ಯಶ್‌ ಧುಲ್‌ ಬಳಗ ಮೊದಲ ಪಂದ್ಯದಲ್ಲಿ ಯುಎಇಯನ್ನು ಪರಾಭವಗೊಳಿಸಿತ್ತು. ಕೊನೆಯ ಲೀಗ್‌ ಪಂದ್ಯವನ್ನು ಪಾಕಿಸ್ಥಾನ ಎ ವಿರುದ್ಧ ಬುಧವಾರ ಆಡಲಿದೆ. ಪಾಕಿಸ್ಥಾನ ಎ ಕೂಡ ನೇಪಾಲ ಎ ಮತ್ತು ಯುಎಇ ಎ ತಂಡವನ್ನು ಮಣಿಸಿದೆ. ರನ್‌ರೇಟ್‌ನಲ್ಲಿ ಮುಂದಿರುವ ಭಾರತ ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿದೆ.ಎರಡೂ ಪಂದ್ಯಗಳನ್ನು ಸೋತ ನೇಪಾಲ ಮತ್ತು ಯುಎಇ ಕೂಟದಿಂದ ನಿರ್ಗಮಿಸಿವೆ.

ನಿಶಾಂತ್‌ ಸಿಂಧು, ರಾಜವರ್ಧನ್‌ ಹಂಗಗೇìಕರ್‌ ಮತ್ತು ಹರ್ಷಿತ್‌ ರಾಣಾ ಸೇರಿಕೊಂಡು ನೇಪಾಲವನ್ನು ಅಲ್ಪ ಮೊತ್ತಕ್ಕೆ ಕುಸಿಯುವಂತೆ ಮಾಡಿದರು. ಸಿಂಧು ಕೇವಲ 14 ರನ್‌ ನೀಡಿ 4 ವಿಕೆಟ್‌ ಕೆಡವಿದರು. ಹಂಗಗೇìಕರ್‌ 3 ಹಾಗೂ ರಾಣಾ 2 ವಿಕೆಟ್‌ ಉರುಳಿಸಿದರು. ಭಾರತದ ದಾಳಿಯನ್ನು ತಡೆದು ನಿಂತ ನೇಪಾಲದ ಆಟಗಾರನೆಂದರೆ ನಾಯಕ ರೋಹಿತ್‌ ಪೌದೆಲ್‌. ಅವರು ಸರ್ವಾಧಿಕ 65 ರನ್‌ ಬಾರಿಸಿದರು (85 ಎಸೆತ, 7 ಬೌಂಡರಿ). ಗುಲ್ಶನ್‌ ಝಾ 38 ರನ್‌ ಮಾಡಿದರು.

139 ರನ್‌ ಜತೆಯಾಟ
ಚೇಸಿಂಗ್‌ ವೇಳೆ ಭಾರತದ ಆರಂಭಿಕರಾದ ಸಾಯಿ ಸುದರ್ಶನ್‌ ಮತ್ತು ಅಭಿಷೇಕ್‌ ಶರ್ಮ ಇಬ್ಬರೇ ಸೇರಿಕೊಂಡು ನೇಪಾಲ ಮೊತ್ತವನ್ನು ಮೀರುವ ಸೂಚನೆ ನೀಡಿದರು. ಇವರಿಂದ ಮೊದಲ ವಿಕೆಟಿಗೆ 19 ಓವರ್‌ಗಳಲ್ಲಿ 139 ರನ್‌ ಒಟ್ಟುಗೂಡಿತು. ಆಗ 87 ರನ್‌ ಮಾಡಿದ ಶರ್ಮ ವಿಕೆಟ್‌ ಬಿತ್ತು. ಸಾಯಿ ಸುದರ್ಶನ್‌ 58 ಮತ್ತು ಧ್ರುವ ಜುರೆಲ್‌ 21 ರನ್‌ ಮಾಡಿ ಅಜೇಯರಾಗಿ ಉಳಿದರು.

ಸಂಕ್ಷಿಪ್ತ ಸ್ಕೋರ್‌: ನೇಪಾಲ ಎ-39.2 ಓವರ್‌ಗಳಲ್ಲಿ 167 (ರೋಹಿತ್‌ ಪೌದೆಲ್‌ 65, ಗುಲ್ಶನ್‌ ಝಾ 38, ನಿಶಾಂತ್‌ ಸಿಂಧು 14ಕ್ಕೆ 4, ರಾಜವರ್ಧನ್‌ ಹಂಗಗೇìಕರ್‌ 25ಕ್ಕೆ 3, ಹರ್ಷಿತ್‌ ರಾಣಾ 16ಕ್ಕೆ 2). ಭಾರತ ಎ-22.1 ಓವರ್‌ಗಳಲ್ಲಿ ಒಂದು ವಿಕೆಟಿಗೆ 172 (ಅಭಿಷೇಕ್‌ ಶರ್ಮ 87, ಸಾಯಿ ಸುದರ್ಶನ್‌ ಔಟಾಗದೆ 58, ಧ್ರುವ ಜುರೆಲ್‌ ಔಟಾಗದೆ 21).

ಪಂದ್ಯಶ್ರೇಷ್ಠ: ಅಭಿಷೇಕ್‌ ಶರ್ಮ.

ಟಾಪ್ ನ್ಯೂಸ್

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

Hockey

Kodava ಕುಂಡ್ಯೋಳಂಡ ಹಾಕಿ ಟೂರ್ನಿಇಂದು ಫೈನಲ್‌ : ಗಿನ್ನೆಸ್‌ ಅಧಿಕಾರಿಗಳ ಭೇಟಿ

1-ww-ewqe

India-Bangladesh ಇಂದಿನಿಂದ ವನಿತಾ ಟಿ20 ಸರಣಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.