ಕೆಕೆಆರ್‌ 8 ವಿಕೆಟ್‌ ಜಯಭೇರಿ


Team Udayavani, Apr 14, 2017, 1:32 AM IST

Gambhir-14-4.jpg

ಕೋಲ್ಕತಾ: ಆತಿಥೇಯ ಕೋಲ್ಕತಾ ನೈಟ್‌ರೈಡರ್ಸ್ ತಂಡವು ಐಪಿಎಲ್‌ 10ರ ಗುರುವಾರ ನಡೆದ ತವರಿನ ಮೊದಲ ಪಂದ್ಯದಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡವನ್ನು 8 ವಿಕೆಟ್‌ಗಳಿಂದ ಭರ್ಜರಿಯಾಗಿ ಸೋಲಿಸಿದೆ. ಉಮೇಶ್‌ ಯಾದವ್‌ ಅವರ ಮಾರಕ ದಾಳಿಯಿಂದಾಗಿ ಪಂಜಾಬ್‌ ತಂಡದ ಮೊತ್ತವನ್ನು 9 ವಿಕೆಟಿಗೆ 170 ರನ್ನಿಗೆ ನಿಯಂತ್ರಿಸಿದ್ದ ಕೆಕೆಆರ್‌ ತಂಡವು ಆಬಳಿಕ ಗೌತಮ್‌ ಗಂಭೀರ್‌ ಅವರ ಅಮೋಘ ಆಟದಿಂದಾಗಿ 16.3 ಓವರ್‌ಗಳಲ್ಲಿ 171 ರನ್‌ ಪೇರಿಸಿ ಜಯಭೇರಿ ಬಾರಿಸಿತು.

ಗಂಭೀರ್‌ ಜತೆ ಇನ್ನಿಂಗ್ಸ್‌ ಆರಂಭಿಸಿದ ಸುನೀಲ್‌ ನಾರಾಯಣ್‌ ಕೆಕೆಆರ್‌ಗೆ ಭರ್ಜರಿ ಆರಂಭ ಒದಗಿಸಿದರು. ಮೊದಲ ವಿಕೆಟಿಗೆ 5.4 ಓವರ್‌ಗಳಲ್ಲಿ 76 ರನ್‌ ಪೇರಿಸಿ ತಂಡದ ಗೆಲುವಿನ ಸಾಧ್ಯತೆಯನ್ನು ಹೆಚ್ಚಿಸಿದರು. ಇದು ಪವರ್‌ಪ್ಲೇಯಲ್ಲಿ ಕೆಕೆಆರ್‌ನ ಗರಿಷ್ಠ ಮೊತ್ತ ಆಗಿದೆ. ಬಿರುಸಿನ ಆಟವಾಡಿದ ನಾರಾಯಣ್‌ 18 ಎಸೆತಗಳಿಂದ 4 ಬೌಂಡರಿ ಮತ್ತು 3 ಸಿಕ್ಸರ್‌ ನೆರವಿನಿಂದ 37 ರನ್‌ ಹೊಡೆದರು. ಗಂಭೀರ್‌ ಮತ್ತು ರಾಬಿನ್‌ ಉತ್ತಪ್ಪ ಆಬಳಿಕ ದ್ವಿತೀಯ ವಿಕೆಟಿಗೆ 40 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡರು. ಉತ್ತಮವಾಗಿ ಆಡುತ್ತಿದ್ದ ಉತ್ತಪ್ಪ ರಿವರ್ಸ್‌ ಸ್ವೀಪ್‌ಗೈಯುವ ಪ್ರಯತ್ನದಲ್ಲಿ ಅಕ್ಷರ್‌ ಪಟೇಲ್‌ಗೆ ಕ್ಲೀನ್‌ಬೌಲ್ಡ್‌ ಆದರು. 16 ಎಸೆತಗಳಿಂದ 26 ರನ್‌ ಹೊಡೆದರು. ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿದ ಗಂಭೀರ್‌ 49 ಎಸೆತಗಳಿಂದ 72 ರನ್‌ ಗಳಿಸಿ ಅಜೇಯರಾಗಿ ಉಳಿದರು. 11 ಬೌಂಡರಿ ಬಾರಿಸಿದರು. ಇದು ಪಂಜಾಬ್‌ ತಂಡಕ್ಕೆ ಎದುರಾದ ಮೊದಲ ಸೋಲು ಆಗಿದೆ. ಸತತ ಎರಡು ಗೆಲುವು ಕಂಡಿದ್ದ ಪಂಜಾಬ್‌ ಈ ಪಂದ್ಯದಲ್ಲಿ ಬೌಲಿಂಗ್‌ ಮತ್ತು ಬ್ಯಾಟಿಂಗ್‌ನಲ್ಲಿ ವೈಫ‌ಲ್ಯ ಅನುಭವಿಸಿತು. ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಮಿಂಚಿದ ಸುನೀಲ್‌ ನಾರಾಯಣ್‌ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಸ್ಕೋರ್‌ ಪಟ್ಟಿ
ಕಿಂಗ್ಸ್‌ ಇಲೆವೆನ್‌ ಪಂಜಾಬ್‌

ಹಾಶಿಮ್‌ ಆಮ್ಲ ಸಿ ಗಂಭೀರ್‌ ಬಿ ಗ್ರ್ಯಾಂಡ್‌ಹೋಮ್‌    25
ಮನನ್‌ ವೋಹ್ರ ಬಿ ಚಾವ್ಲಾ    28
ಎಂ. ಸ್ಟಾಯಿನಿಸ್‌ ಬಿ ನಾರಾಯಣ್‌    9
ಗ್ಲೆನ್‌ ಮ್ಯಾಕ್ಸ್‌ವೆಲ್‌    ಸಿ ಉತ್ತಪ್ಪ ಬಿ ಉಮೇಶ್‌    25
ಡೇವಿಡ್‌ ಮಿಲ್ಲರ್‌    ಸಿ ಪಾಂಡೆ ಬಿ ಉಮೇಶ್‌    28
ವೃದ್ಧಿಮಾನ್‌ ಸಾಹ    ಸಿ ವೋಕ್ಸ್‌ ಬಿ ಉಮೇಶ್‌    25
ಅಕ್ಷರ್‌ ಪಟೇಲ್‌ ಸಿ ನಾರಾಯಣ್‌ ಬಿ ಉಮೇಶ್‌    0
ಮೋಹಿತ್‌ ಶರ್ಮ ಸಿ ಸೂರ್ಯ ಬಿ ವೋಕ್ಸ್‌    10
ವರುಣ್‌ ಅರೋನ್‌    ಸಿ ಗಂಭೀರ್‌ ಬಿ ವೋಕ್ಸ್‌    4
ಸಂದೀಪ್‌ ಶರ್ಮ    ಔಟಾಗದೆ    0

ಇತರ:   16
ಒಟ್ಟು (20 ಓವರ್‌ಗಳಲ್ಲಿ 9 ವಿಕೆಟಿಗೆ)    170

ವಿಕೆಟ್‌ ಪತನ: 1-53, 2-66, 3-97, 4-98, 5-155, 6-155, 7-156, 8-169, 9-170

ಬೌಲಿಂಗ್‌:
ಟ್ರೆಂಟ್‌ ಬೌಲ್ಟ್    4-0-36-0
ಉಮೇಶ್‌ ಯಾದವ್‌    4-0-33-4
ಕ್ರಿಸ್‌ ವೋಕ್ಸ್‌        3-0-30-2
ಸುನೀಲ್‌ ನಾರಾಯಣ್‌    4-0-19-1
ಪೀಯೂಷ್‌ ಚಾವ್ಲಾ        3-0-36-1
ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌    2-0-15-1

ಕೋಲ್ಕತಾ ನೈಟ್‌ರೈಡರ್ಸ್
ಸುನೀಲ್‌ ನಾರಾಯಣ್‌ ಸಿ ಪಟೇಲ್‌ ಬಿ ಅರೋನ್‌    37
ಗೌತಮ್‌ ಗಂಭೀರ್‌    ಔಟಾಗದೆ 72
ರಾಬಿನ್‌ ಉತ್ತಪ್ಪ    ಬಿ ಅಕ್ಷರ್‌ ಪಟೇಲ್‌    26
ಮನೀಷ್‌ ಪಾಂಡೆ    ಔಟಾಗದೆ 25
ಇತರ:    11

ಒಟ್ಟು (16.3 ಓವರ್‌ಗಳಲ್ಲಿ 2 ವಿಕೆಟಿಗೆ)    171

ವಿಕೆಟ್‌ ಪತನ: 1-76, 2-116

ಬೌಲಿಂಗ್‌:
ಸಂದೀಪ್‌ ಶರ್ಮ    3-0-28-0
ಇಶಾಂತ್‌ ಶರ್ಮ    2-0-16-0
ಗ್ಲೆನ್‌ ಮ್ಯಾಕ್ಸ್‌ವೆಲ್‌    1-0-18-0
ವರುಣ್‌ ಅರೋನ್‌    2-0-23-1
ಮೋಹಿತ್‌ ಶರ್ಮ    3-0-30-0
ಅಕ್ಷರ್‌ ಪಟೇಲ್‌    4-0-36-1
ಮಾರ್ಕಸ್‌ ಸ್ಟಾಯಿನಿಸ್‌    1.3-0-14-0

ಪಂದ್ಯಶ್ರೇಷ್ಠ: ಸುನೀಲ್‌ ನಾರಾಯಣ್‌

ಟಾಪ್ ನ್ಯೂಸ್

Ramanagara: ಈಜಲು ಹೋಗಿ‌ದ್ದ ಮೂವರು ಮಕ್ಕಳು ನೀರುಪಾಲು

Ramanagara: ಈಜಲು ಹೋಗಿ‌ದ್ದ ಮೂವರು ಮಕ್ಕಳು ನೀರುಪಾಲು

Magadi; ಕಾರಿಗೆ ಅಡ್ಡ ಬಂದ ಕುದುರೆ, ವಾಹನಗಳ ಸರಣಿ ಅಪಘಾತ; ಐವರಿಗೆ ಗಂಭೀರ ಗಾಯ

Magadi; ಕಾರಿಗೆ ಅಡ್ಡ ಬಂದ ಕುದುರೆ, ವಾಹನಗಳ ಸರಣಿ ಅಪಘಾತ; ಐವರಿಗೆ ಗಂಭೀರ ಗಾಯ

Tollywood: ಪ್ರಶಾಂತ್‌ ನೀಲ್‌ – Jr. NTR ಸಿನಿಮಾಕ್ಕೆ ಈ ಟೈಟಲ್‌ ಫಿಕ್ಸ್?

Tollywood: ಪ್ರಶಾಂತ್‌ ನೀಲ್‌ – Jr. NTR ಸಿನಿಮಾಕ್ಕೆ ಈ ಟೈಟಲ್‌ ಫಿಕ್ಸ್?

Swati Maliwal Arvind Kejriwal’s aide repeatedly kicked her in stomach

AAP Leader ಬಿಭವ್ ಕುಮಾರ್ ನನ್ನ ಕೆನ್ನೆಗೆ ಹೊಡೆದು, ಎದೆಗೆ ಒದ್ದರು..; ಸ್ವಾತಿ ಮಲಿವಾಲ್

17

ಕಾರ್ತಿಕ್‌ – ಸೂರ್ಯ ಕಾಂಬಿನೇಷನ್ ನ ಬಹು ನಿರೀಕ್ಷಿತ ಸಿನಿಮಾಕ್ಕೆ ಪೂಜಾ ಹೆಗ್ಡೆ ನಾಯಕಿ?

Anjali Ambigera; ಚಿಗಟೇರಿ ಆಸ್ಪತ್ರೆಯಿಂದಲೂ ತಪ್ಪಿಸಲು ಯತ್ನಿಸಿದ್ದ ಅಂಜಲಿ ಹಂತಕ ಗಿರೀಶ್

Anjali Ambigera; ಚಿಗಟೇರಿ ಆಸ್ಪತ್ರೆಯಿಂದಲೂ ತಪ್ಪಿಸಲು ಯತ್ನಿಸಿದ್ದ ಅಂಜಲಿ ಹಂತಕ ಗಿರೀಶ್

ಪ್ರಭಾಸ್‌ ಜೀವನಕ್ಕೆ ಬರಲಿದ್ದಾರೆ ವಿಶೇಷ ವ್ಯಕ್ತಿ.. ಮದುವೆ ಆಗಲಿದ್ದಾರಾ ʼಸಲಾರ್‌ʼ ನಟ?

ಪ್ರಭಾಸ್‌ ಜೀವನಕ್ಕೆ ಬರಲಿದ್ದಾರೆ ವಿಶೇಷ ವ್ಯಕ್ತಿ.. ಮದುವೆ ಆಗಲಿದ್ದಾರಾ ʼಸಲಾರ್‌ʼ ನಟ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ICC T20 world cup 2024 warm up match schedule

T20 World Cup: ಅಭ್ಯಾಸ ಪಂದ್ಯಗಳ ವೇಳಾಪಟ್ಟಿ ಪ್ರಕಟ; ಭಾರತಕ್ಕೆ ಒಂದೇ ಪಂದ್ಯ

IPL 2024: ಅಂತಿಮ ಪಂದ್ಯದಲ್ಲಿ ಮುಂಬೈಗೆ ಲಕ್ನೋ ಎದುರಾಳಿ

IPL 2024: ಅಂತಿಮ ಪಂದ್ಯದಲ್ಲಿ ಮುಂಬೈಗೆ ಲಕ್ನೋ ಎದುರಾಳಿ

32

Match fixing: ಭಾರತದ ಪ್ರಜೆಗಳಿಬ್ಬರ ಪಾಸ್‌ಪೋರ್ಟ್‌ ವಶಕ್ಕೆ ಆದೇಶ

30

ICC T20 Rankings : ಭಾರತ, ಸೂರ್ಯಕುಮಾರ್‌ ನಂ.1

Paris Olympics: ಟೇಬಲ್‌ ಟೆನಿಸ್‌; ಶರತ್‌, ಮಣಿಕಾ ನೇತೃತ್ವ

Paris Olympics: ಟೇಬಲ್‌ ಟೆನಿಸ್‌; ಶರತ್‌, ಮಣಿಕಾ ನೇತೃತ್ವ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

Ramanagara: ಈಜಲು ಹೋಗಿ‌ದ್ದ ಮೂವರು ಮಕ್ಕಳು ನೀರುಪಾಲು

Ramanagara: ಈಜಲು ಹೋಗಿ‌ದ್ದ ಮೂವರು ಮಕ್ಕಳು ನೀರುಪಾಲು

Magadi; ಕಾರಿಗೆ ಅಡ್ಡ ಬಂದ ಕುದುರೆ, ವಾಹನಗಳ ಸರಣಿ ಅಪಘಾತ; ಐವರಿಗೆ ಗಂಭೀರ ಗಾಯ

Magadi; ಕಾರಿಗೆ ಅಡ್ಡ ಬಂದ ಕುದುರೆ, ವಾಹನಗಳ ಸರಣಿ ಅಪಘಾತ; ಐವರಿಗೆ ಗಂಭೀರ ಗಾಯ

Tollywood: ಪ್ರಶಾಂತ್‌ ನೀಲ್‌ – Jr. NTR ಸಿನಿಮಾಕ್ಕೆ ಈ ಟೈಟಲ್‌ ಫಿಕ್ಸ್?

Tollywood: ಪ್ರಶಾಂತ್‌ ನೀಲ್‌ – Jr. NTR ಸಿನಿಮಾಕ್ಕೆ ಈ ಟೈಟಲ್‌ ಫಿಕ್ಸ್?

vijay raghavendra’s swapna mantapa movie

Kannada Cinema; ‘ಸ್ವಪ್ನ ಮಂಟಪ’ದಲ್ಲಿ ವಿಜಯ ರಾಘವೇಂದ್ರ-ರಂಜನಿ; ಬರಗೂರು ನಿರ್ದೇಶನ

Swati Maliwal Arvind Kejriwal’s aide repeatedly kicked her in stomach

AAP Leader ಬಿಭವ್ ಕುಮಾರ್ ನನ್ನ ಕೆನ್ನೆಗೆ ಹೊಡೆದು, ಎದೆಗೆ ಒದ್ದರು..; ಸ್ವಾತಿ ಮಲಿವಾಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.