ಗಂಭೀರ್ರನ್ನು ಬಿಟ್ಟು, ಉಳಿದ ಭಾರತೀಯ ಕ್ರಿಕೆಟಿಗರು ನನ್ನ ಸ್ನೇಹಿತರು
Team Udayavani, May 6, 2017, 3:28 PM IST
ದುಬೈ: ಭಾರತ ಕ್ರಿಕೆಟ್ ತಂಡದ ಬಹುತೇಕ ಆಟಗಾರರೊಂದಿಗೆ ನನಗೆ ಆತ್ಮೀಯ ಸ್ನೇಹವಿದೆ, ಗೌತಮ್ ಗಂಭೀರ್ ಒಬ್ಬರನ್ನು ಹೊರತು ಪಡಿಸಿ! ಹೀಗೆಂದು ಹೇಳಿದ್ದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ.
ಜೂ.4ರಂದು ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳು ಇಂಗ್ಲೆಂಡ್ ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಪಿಯಲ್ಲಿ ಮುಖಾಮುಖೀ ಯಾಗಲಿವೆ. ಇದಕ್ಕೆಂದು ಐಸಿಸಿ ವೆಬ್ಸೈಟ್ಗೆ ಬರೆದ ಲೇಖನದಲ್ಲಿ ಅಫ್ರಿದಿ ಮೇಲಿನಂತೆ ಹೇಳಿಕೊಂಡಿದ್ದಾರೆ.
ನಾನಂತೂ ಭಾರತೀಯ ಕ್ರಿಕೆಟಿಗರೊಂದಿಗೆ ಆತ್ಮೀಯತೆ ಹೊಂದಿದ್ದೇನೆ. ಅದರಲ್ಲೂ ಹರ್ಭಜನ್ ಸಿಂಗ್, ಯುವರಾಜ್ ಸಿಂಗ್, ಜಹೀರ್ ಖಾನ್ ಜೊತೆಗೆ ನನಗೆ ಹತ್ತಿರದ ಒಡನಾಟವಿದೆ ಎಂದು ಅಫ್ರಿದಿ ಹೇಳಿಕೊಂಡಿದ್ದಾರೆ. ಆದರೆ ಗೌತಮ್ ಗಂಭೀರ್ ಮಾತ್ರ ನನ್ನೊಂದಿಗೆ ಸಿಟ್ಟನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಅವರು ಸ್ನೇಹಮಯಿಯಲ್ಲ ಎಂದು ಹೇಳಬಲ್ಲೆ. ಒಂದು ಪಂದ್ಯದಲ್ಲಿ ನಮ್ಮಿಬ್ಬರ ಬಿರುಸಿನ ಮಾತುಕತೆಯಾಗಿತ್ತು.
ಅದು ವಿಶ್ವಾದ್ಯಂತ ಸುದ್ದಿಯಾಗಿತ್ತು. ಆದರೆ ನಾನು ಇದೆಲ್ಲ ಆಟದಲ್ಲಿ ಮಾಮೂಲು ಎಂಬ ಕಾರಣಕ್ಕೆ ಅದನ್ನು ಮರೆತು ಬಿಟ್ಟಿದ್ದೇನೆ. ಗಂಭೀರ್ ಮಾತ್ರ ಅದರಿಂದ ಇನ್ನೂ ಹೊರಬಂದಿಲ್ಲ. ಅವರಿಗೆ ಒಳಿತಾಗಲಿ ಎಂದು ಅಫ್ರಿದಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Prajwal Pendrive Case: ವಿಶ್ವದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಇದು
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.ಪರಮೇಶ್ವರ್
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ
Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ
ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ