ಕಾರ್ಮಿಕರ ದುಃಸ್ಥಿತಿ: ಸರ್ಕಾರದ ವಿರುದ್ಧ ಹರ್ಭಜನ್ ಆಕ್ರೋಶ
Team Udayavani, Mar 30, 2020, 10:18 AM IST
ಚಂಡೀಗಢ: ನೇರ ನಡೆನುಡಿಗೆ ಹೆಸರಾಗಿರುವ ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟಿಗ ಹರ್ಭಜನ್ ಸಿಂಗ್, ಅತ್ಯಂತ ಪ್ರಮುಖ ವಿಷಯವೊಂದರ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದಾರೆ.
ಕೇಂದ್ರಸರ್ಕಾರ 21 ದಿನಗಳು ಇಡೀ ದೇಶವನ್ನೇ ಸ್ತಬ್ಧಗೊಳಿಸುವ ನಿರ್ಧಾರ ಮಾಡುವ ಮುನ್ನ ವಲಸಿಗ ಕಾರ್ಮಿಕರ ಬಗ್ಗೆ ಸರಿಯಾಗಿ ಯೋಚಿಸಲಿಲ್ಲ. ಅದರ ಕ್ರಮದಿಂದ ವಲಸಿಗ ದಿನಗೂಲಿಗಳು ಅತಂತ್ರರಾಗಿದ್ದಾರೆ. ಅವರಿಗೆ ಊಟ ಸಿಗುತ್ತಿಲ್ಲ. ವಾಪಸ್ ಹೋಗಿ ತಮ್ಮ ಕುಟುಂಬವನ್ನು ಸೇರಿಕೊಳ್ಳಲೂ ಆಗುತ್ತಿಲ್ಲಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದ್ಯ ಹರ್ಭಜನ್ ಸಿಂಗ್ ವೀಕ್ಷಕ ವಿವರಣೆಗಾರನಾಗಿ ಮಿಂಚುತ್ತಿದ್ಧಾರೆ. ಬಲಗೈ ಆಫ್ ಸ್ಪಿನ್ನರ್ ಐಪಿಎಲ್ನಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುತ್ತಿದ್ದಾರೆ.