ಕಿರಿಯರ ಏಷ್ಯಾ ಕಪ್ ಕ್ರಿಕೆಟ್: ಭಾರತಕ್ಕೆ ಹಿಮಾಂಶು ರಾಣಾ ನಾಯಕ
Team Udayavani, Oct 17, 2017, 6:15 AM IST
ನವದೆಹಲಿ: 19 ವರ್ಷದೊಳಗಿನ ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಭಾರತ ತಂಡವನ್ನು ಬಿಸಿಸಿಐ ಸೋಮವಾರ ಪ್ರಕಟಿಸಿದೆ. ಹರ್ಯಾಣದ ಹಿಮಾಂಶು ರಾಣಾ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.
ಕಳೆದ ಆಗಸ್ಟ್ನಲ್ಲಿ ನಡೆದ ಇಂಗ್ಲೆಂಡ್ ಪ್ರವಾಸದಲ್ಲಿದ್ದ ತಂಡದ ನಾಯಕ ಪೃಥ್ವಿ ಶಾ ಅವರನ್ನು ರಣಜಿ ಹಿನ್ನಲೆಯಲ್ಲಿ ಆಡುತ್ತಿರುವುದರಿಂದ ಕೈಬಿಡಲಾಗಿದೆ. 17 ವರ್ಷದ ಪೃಥ್ವಿ ಶಾ ಪ್ರತಿಭಾವಂತ ಆಟಗಾರರಾಗಿದ್ದಾರೆ. ದುಲೀಪ್ ಟ್ರೋಫಿ ಮತ್ತು ರಣಜಿ ಟ್ರೋಫಿಯಲ್ಲಿ ಆರಂಭಿಕ ಸರಣಿಯಲ್ಲಿಯೇ ಶತಕ ಸಿಡಿಸಿದ್ದಾರೆ. ಸದ್ಯ ಮುಂಬೈ ರಣಜಿ ತಂಡದಲ್ಲಿ ಆಡುತ್ತಿರುವುದರಿಂದ ಏಷ್ಯಾ ಕಪ್ ತಂಡದಿಂದ ಕೈಬಿಡಲಾಗಿದೆ. ಏಷ್ಯಾಕಪ್ ನ.9 ರಿಂದ 20ರ ವರೆಗೆ ಮಲೇಷ್ಯಾದಲ್ಲಿ ನಡೆಯಲಿದೆ.
ತಂಡ:
ಹಿಮಾಂಶು ರಾಣಾ(ನಾಯಕ), ಅಭಿಷೇಕ್ ಶರ್ಮ(ಉಪ ನಾಯಕ), ಅಥರ್ವ ಟೈಡೆ, ಮಜೋತ್ ಕಲಾÅ, ಸಲ್ಮಾನ್ ಖಾನ್, ಅನುಜ್ ರಾವತ್, ಹಾರ್ವಿಕ್ ದೇಸಾಯಿ, ರಿಯಾನ್, ಅನುಕುಲ್ ರಾಯ್, ಶಿವ ಸಿಂಗ್, ತನುಶ್ ಕೊಟಿಯಾನ್, ದರ್ಶನ್ ನಲ್ಕಂಡೆ, ವಿವೇಕಾನಂದ ತಿವಾರಿ, ಆದಿತ್ಯ ಠಾಕ್ರೆ, ಮಂದೀಪ್ ಸಿಂಗ್.