Rishabh Pant; ಪಂದ್ಯದ ಬಳಿಕ ತುಂಬಾ ಅಳುತ್ತಿದ್ದೆ…: ಧೋನಿ ಹೋಲಿಕೆಯ ಬಗ್ಗೆ ಪಂತ್ ಮಾತು
Team Udayavani, Feb 2, 2024, 12:21 PM IST
ಮುಂಬೈ: 2022ರ ಡಿಸೆಂಬರ್ ನಲ್ಲಿ ಅಪಘಾತದಿಂದ ಗಾಯಗೊಂಡಿದ್ದ ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರು ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಸ್ಟಾರ್ ಸ್ಪೋರ್ಟ್ಸ್ ಗೆ ನೀಡಿದ ಸಂದರ್ಶನದಲ್ಲಿ ಅವರು ಹಲವು ವಿಚಾರಗಳನ್ನು ಬಹಿರಂಗ ಪಡಿಸುತ್ತಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ನ ಆರಂಭಿಕ ದಿನಗಳಲ್ಲಿ ಜನರು ತನ್ನನ್ನು ಮಹೇಂದ್ರ ಸಿಂಗ್ ಧೋನಿ ಜತೆಗೆ ಹೋಲಿಕೆ ಮಾಡುತ್ತಿದ್ದರಿಂದ ತಾನು ಬಹಳಷ್ಟು ಕಿರಿಕಿರಿ ಅನುಭವಿಸುತ್ತಿದ್ದೆ ಎಂದು ಅವರು ಹೇಳಿದರು. ಎಂಎಸ್ ಧೋನಿ ಅವರೊಂದಿಗಿನ ನಿರಂತರ ಹೋಲಿಕೆಗಳು ಮಾನಸಿಕವಾಗಿ ಕುಸಿತಕ್ಕೆ ಕಾರಣವಾಯಿತು. ಅಲ್ಲದೆ ಪಂದ್ಯಗಳ ನಂತರ ತಮ್ಮ ಕೋಣೆಗೆ ಹಿಂತಿರುಗಿ ಅಳುತ್ತಿದ್ದರು ಎಂದು ಪಂತ್ ಹೇಳಿದ್ದಾರೆ.
“ಮೊದಲನೆಯದಾಗಿ, ಪ್ರಶ್ನೆಗಳನ್ನು ಏಕೆ ಎತ್ತಲಾಗಿದೆ ಎಂದು ನನಗೆ ಅರ್ಥವಾಗಲಿಲ್ಲ. ನಾನು ಆಗಷ್ಟೇ ತಂಡಕ್ಕೆ ಬಂದಿದ್ದೆ. ಜನರು ನನ್ನನ್ನು ಬದಲಿ ಆಟಗಾರ ಎಂದು ನೋಡುತ್ತಿದ್ದರು. ನೀವು ಯಾಕೆ ಹೋಲಿಕೆ ಮಾಡುತ್ತಿದ್ದೀರಿ? ಯಾವುದೇ ರೀತಿಯ ಹೋಲಿಕೆ ಇರಬಾರದು. ಕೆಲವರು ಐದು ಪಂದ್ಯಗಳನ್ನು ಆಡಿದ್ದಾರೆ ಮತ್ತು ಮತ್ತೊಬ್ಬರು 500 ಪಂದ್ಯಗಳನ್ನು ಆಡಿದ್ದಾರೆ” ಎಂದು ಪಂತ್ ಸ್ಟಾರ್ ಸ್ಪೋರ್ಟ್ಸ್ಗೆ ತಿಳಿಸಿದರು.
“ಎಂಎಸ್ ಧೋನಿ ಜೊತೆಗಿನ ನನ್ನ ಸಂಬಂಧವನ್ನು ವಿವರಿಸಲು ನನಗೆ ಯಾವಾಗಲೂ ಕಷ್ಟವಾಗುತ್ತದೆ. ನೀವು ಮುಕ್ತವಾಗಿ ಮಾತನಾಡಬಹುದಾದ ಕೆಲವರಿದ್ದಾರೆ. ನಾನು ಧೋನಿಯೊಂದಿಗೆ ಎಲ್ಲವನ್ನೂ ಚರ್ಚಿಸುತ್ತೇನೆ. ಅವರಿಂದ ನಾನು ತುಂಬಾ ಕಲಿತಿದ್ದೇನೆ. ನಾನು ಯಾರೊಂದಿಗೂ ಚರ್ಚಿಸದ ವಿಷಯಗಳನ್ನು ನಾನು ಅವರೊಂದಿಗೆ ಚರ್ಚಿಸುತ್ತೇನೆ. ಅದು ಅವರ ಜೊತೆಗಿನ ಸಂಬಂಧ” ಎಂದು ಪಂತ್ ಅದೇ ಸಂದರ್ಶನದಲ್ಲಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್
PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್
IPL: ಆಟ ಮೆರೆದಾಟ; ಬ್ಯಾಟಿಂಗ್ ಅಷ್ಟೇ ಕ್ರಿಕೆಟ್ಟಾ?
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
MUST WATCH
ಹೊಸ ಸೇರ್ಪಡೆ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ