![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
ಆಸೀಸ್ ವಿರುದ್ಧ 1ನೇ ಟೆಸ್ಟ್ ಗೆದ್ದರೆ ಭಾರತಕ್ಕೆ 7 ಕೋಟಿ ರೂ.!
Team Udayavani, Feb 17, 2017, 3:45 AM IST
![ind.jpg](https://www.udayavani.com/wp-content/uploads/2017/02/16/ind.jpg)
ನವದೆಹಲಿ: ಫೆ.23ರಿಂದ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಭಾರತ ಮೊದಲ ಪಂದ್ಯದಲ್ಲಿ ಗೆದ್ದರೆ ಐಸಿಸಿಯಿಂದ 6.70 ಕೋಟಿ ರೂ.ಬರುವುದು ಖಚಿತ. ಒಮ್ಮೆ ಭಾರತ ಸೋತರೆ ಸರಣಿಯ ಒಟ್ಟಾರೆ ಫಲಿತಾಂಶವನ್ನು ಕಾಯಬೇಕಾಗುತ್ತದೆ.
ಪ್ರತಿ ವರ್ಷ ಏ.1ಕ್ಕೆ ಟೆಸ್ಟ್ನಲ್ಲಿ 1 ಸ್ಥಾನ ಕಾಯ್ದುಕೊಂಡ ತಂಡಕ್ಕೆ ಐಸಿಸಿಯಿಂದ ಹಣ ಸಂದಾಯವಾಗಲಿದೆ. ಸದ್ಯ ಭಾರತ 121 ಅಂಕ ಸಂಪಾದಿಸಿ ನಂ.1 ಸ್ಥಾನದಲ್ಲಿದೆ. 109 ಅಂಕ ಹೊಂದಿರುವ ಆಸ್ಟ್ರೇಲಿಯಾ ನಂ.2 ಸ್ಥಾನದಲ್ಲಿದೆ. ಏ.1ರಷ್ಟೊತ್ತಿಗೆ ಯಾವ ತಂಡ ನಂ.1 ಸ್ಥಾನದಲ್ಲುಳಿಯುತ್ತದೋ ಅದಕ್ಕೆ ಈ ಮೊತ್ತ ಸಂದಾಯವಾಗುತ್ತದೆ. ಹೀಗಾಗಿ ಅಗ್ರ 2 ಸ್ಥಾನದಲ್ಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿ ಮಹತ್ವ ಪಡೆದುಕೊಂಡಿದೆ.
ಭಾರತ ಮೊದಲ ಟೆಸ್ಟ್ ಗೆದ್ದರೂ ಸಾಕು ನಂ.1 ಸ್ಥಾನಕ್ಕೇರುತ್ತದೆ. ಮೊದಲ ಪಂದ್ಯ ಸೋತ ಆಸೀಸ್ ಸರಣಿಯ ಉಳಿದ ಮೂರೂ ಪಂದ್ಯ ಗೆದ್ದರೂ ನಂ.1 ಸ್ಥಾನಕ್ಕೇರುವುದಿಲ್ಲ. ಅದೇ ಆಸ್ಟ್ರೇಲಿಯಾ 3-0ಯಿಂದ ಈ ಗೆದ್ದರೆ ನಂ.1 ಸ್ಥಾನಕ್ಕೇರಲಿದೆ. ಒಂದು ವೇಳೆ ಭಾರತ ಮೊದಲ ಟೆಸ್ಟ್ ಸೋತು ಉಳಿದ 3 ಟೆಸ್ಟ್ ಗೆದ್ದರೆ ಆಗಲೂ ನಂ.1 ಸ್ಥಾನ ಉಳಿಸಿಕೊಳ್ಳಲಿದೆ.
ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಕಳೆದ 19 ಪಂದ್ಯಗಳಲ್ಲಿ ಸೋಲದೇ ಅಜೇಯ ಓಟವನ್ನು ಮುಂದುವರಿಸಿದೆ. ಹೀಗಾಗಿ ಭಾರತ ನಂ.1 ಸ್ಥಾನ ಕಾಯ್ದುಕೊಳ್ಳುವುದು ಖಚಿತ. ಇತ್ತೀಚೆಗೆ ಆಸ್ಟ್ರೇಲಿಯಾ ಕೂಡ ಶ್ರೀಲಂಕಾ ವಿರುದ್ಧ 3-0ಯಿಂದ ಟೆಸ್ಟ್ ಸರಣಿ ಜಯಿಸಿದೆ.
ಟಾಪ್ ನ್ಯೂಸ್
![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.