ಭಾರತೀಯ ಕ್ರೀಡಾಪಟುಗಳಿಗೆ ಇನ್ನೂ ಲಭಿಸಿಲ್ಲ  ವೀಸಾ!


Team Udayavani, Mar 23, 2018, 7:30 AM IST

38.jpg

ಹೊಸದಿಲ್ಲಿ: ಗೋಲ್ಡ್‌ ಕೋಸ್ಟ್‌ ಕಾಮನ್ವೆಲ್ತ್‌ ಗೇಮ್ಸ್‌ಗೆ ಇನ್ನು ಬಾಕಿಯಿರೋದು ಬರೀ ಎರಡು ವಾರಗಳಷ್ಟೇ. ಆದರೆ ಈ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ತೆರಳಬೇಕಿದ್ದ ಭಾರತೀಯ ತಂಡ ವೀಸಾ ವನ್ನು ಎದುರು ನೋಡುತ್ತಿದೆ. ಈ ನಡುವೆ ಇಂಡಿಯನ್‌ ಒಲಿಂಪಿಕ್‌ ಅಸೋಸಿಯೇಶನ್‌ (ಐಒಎಸ್‌) ತಂಡದಲ್ಲಿನ ಆ್ಯತ್ಲೀಟ್ಸ್‌, ತರಬೇತು ದಾರರು, ಸಹಾಯ ಸಿಬಂದಿಯನ್ನು ವಿಂಗಡಿಸುವುದರಲ್ಲೇ ಮಗ್ನವಾಗಿದೆ!

ಭಾರತೀಯ ಒಲಿಂಪಿಕ್ಸ್‌ ಸಮಿತಿ ಪ್ರಕಟಿಸಿರುವ ಕಾಮನ್ವೆಲ್ತ್‌ ಗೇಮ್ಸ್‌ಗೆ ತೆರಳಲಿರುವ ಆ್ಯತ್ಲೀಟ್‌ಗಳು, ಅಧಿ ಕಾರಿಗಳ ಪಟ್ಟಿಯ ಪ್ರಕಾರ ಇನ್ನೂ ಸುಮಾರು 109 ಮಂದಿ ವೀಸಾ ಅರ್ಜಿಯ ಅನುಮೋದನೆಗಾಗಿ ಕಾಯುತ್ತಿದ್ದಾರೆ. ಈ ಸಾಲಿನಲ್ಲಿ ಎರಡು ಒಲಿಂಪಿಕ್‌ ಪದಕ ವಿಜೇತ ಕುಸ್ತಿಪಟು ಸುಶೀಲ್‌ ಕುಮಾರ್‌, ವನಿತಾ ಕುಸ್ತಿಪಟುಗಳಾದ ಬಬಿತಾ ಕುಮಾರಿ, ವಿನೇಶ್‌ ಪೊಗಟ್‌, ಪೂಜಾ ಧಂಡಾ, ಹಾಕಿ ಆಟಗಾರರಾದ ಲಲಿತ್‌ ಉಪಾಧ್ಯಾಯ, ಸವಿತಾ, ಬ್ಯಾಡ್ಮಿಂಟನ್‌ ಆಟಗಾರ್ತಿ ಋತ್ವಿಕಾ ಶಿವಾನಿ ಮೊದಲಾದವರು ಸೇರಿರುವುದು ಅಚ್ಚರಿ ಮೂಡಿಸಿದೆ.

ಸಾಲು ಸಾಲು ಶೂಟರ್
ಶೂಟಿಂಗ್‌ ವಿಭಾಗದ ಬಹು ತೇಕ ಸ್ಪರ್ಧಿಗಳು ವೀಸಾಕ್ಕಾಗಿ ಕಾಯುತ್ತಿರುವುದು ವಿಪರ್ಯಾಸ. ಚೈನ್‌ ಸಿಂಗ್‌, ಜಿತು ರೈ, ಸಂಜೀವ್‌ ರಜಪೂತ್‌, ಗಗನ್‌ ನಾರಂಗ್‌, ದೀಪಕ್‌ ಕುಮಾರ್‌, ಅನಿಶ್‌ ಭನ್ವಾಲ, ನೀರಜ್‌ ಕುಮಾರ್‌, ಮೊಹ್ಮದ್‌ ಅಶಬ್‌, ವನಿತಾ ವಿಭಾಗದ ಅಂಜುಮ್‌ ಮೌಡ್ಗಿಲ್‌, ತೇಜಸ್ವಿನಿ ಸಾವಂತ್‌, ಹೀನಾ ಸಿಧು, ಸೀಮಾ ತೋಮರ್‌, ಮೆಹುಲಿ ಘೋಷ್‌, ಮನು ಭಾಕೆರ, ಶ್ರೇಯಸಿ ಸಿಂಗ್‌ ಅವರಿಗೂ ವಿಸಾ ಅನುಮೋದನೆಯಾಗಿಲ್ಲ.

ಇವರೊಂದಿಗೆ ಹಾಕಿ ತಂಡದ ವಿಶ್ಲೇಷಣಾ ತರಬೇತುದಾರ ಕ್ರಿಸ್ಟೋಫ‌ರ್‌ ನಿಕೋಲಸ್‌, ವನಿತಾ ಕೋಚ್‌ ಡೇವಿಡ್‌ ಲಾನ್‌ ಜಾನ್‌, ಪುರುಷ ಬಾಕ್ಸಿಂಗ್‌ನ ವಿದೇಶಿ ಕೋಚ್‌ ಸಾಂಟಿಯಾಗೊ ಡೇನಿಯೆಲ್‌, ಬಾಸ್ಕೆಟ್‌ಬಾಲ್‌ ಮುಖ್ಯ ಕೋಚ್‌ ಜೋರನ್‌ ವಿಸಿಕ್‌ ಮತ್ತು ವನಿತಾ ತಂಡದ ಕೋಚ್‌ ರಾಜೀಂದರ್‌ ಸಿಂಗ್‌ ಕೂಡ ವೀಸಾ ನಿರೀಕ್ಷೆಯಲ್ಲಿದ್ದಾರೆ. 

ಎ. 4ರಿಂದ 15ರ ವರೆಗೆ ನಡೆಯ ಲಿರುವ ಈ ಕೂಟದಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ತಂಡದಲ್ಲಿ ಒಟ್ಟು 328 ಮಂದಿಯಿದ್ದು, ಇದರಲ್ಲಿ 222 ಆ್ಯತ್ಲೀಟ್‌ಗಳು, 106 ಅಧಿಕಾರಿಗಳು ಸೇರಿದ್ದಾರೆ.

ಟಾಪ್ ನ್ಯೂಸ್

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

police

Bidar; ಹಣ ಹಂಚುವ ದೂರು: ನಾಗಮಾರಪಳ್ಳಿ‌ ಮನೆಯಲ್ಲಿ ಪರಿಶೀಲನೆ

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.