ಭವಿನಾ ಪಟೇಲ್ ಎಂಬ ಸಾಧಕಿ: “ಕಂಪ್ಯೂಟರ್ ಕಲಿಯಲು ತೆರಳಿದ್ದಾಗ ಟಿಟಿ ಗುಂಗು ಹತ್ತಿತು’
Team Udayavani, Aug 29, 2021, 9:52 AM IST
ಭವಿನಾಬೆನ್ ಪಟೇಲ್ (34) ಈ ಬಾರಿ ಟೋಕ್ಯೋ ಪ್ಯಾರಾಲಿಂಪಿಕ್ಸ್ಗೆ ತೆರಳಿದ್ದಾಗ, ಆಕೆ ಪದಕದ ಸುತ್ತಿಗೇರಬಹುದೆಂದು ಯಾರೂ ನಿರೀಕ್ಷಿಸಿರಲಿಲ್ಲ. ಆಕೆ ಈಗ ಟಿಟಿಯಲ್ಲಿ ಫೈನಲ್ ಗೇರಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಕೇವಲ 12 ತಿಂಗಳಿದ್ದಾಗ ಪೋಲಿಯೊ ಬಂದು ಆಕೆಯ ಎರಡೂ ಕಾಲುಗಳು ನಿರ್ಬಲಗೊಂಡಿವೆ. ಗುಜರಾತ್ನ ಮೆಹ್ಸಾನ ಜಿಲ್ಲೆಯ ಸುಂಧಿಯ ಎಂಬ ಹಳ್ಳಿಯವರಾದ ಭವಿನಾ ಹಸ್ಮುಖ್ಭಾಯ್ ಪಟೇಲ್ ಎಂಬ ವ್ಯಕ್ತಿಯ ಮಗಳು.
ಹಳ್ಳಿಯವರಾದ ಆಕೆಗೆ ಟೇಬಲ್ ಟೆನಿಸ್ ಎಂಬ ಕ್ರೀಡೆಯಿದೆ, ಅದರಲ್ಲಿ ಅಂಗವಿಕಲರೂ ಭವಿಷ್ಯ ಕಂಡು ಕೊಳ್ಳಬಹುದು ಎಂಬ ಬಗ್ಗೆ ಗೊತ್ತೇ ಇರಲಿಲ್ಲ! ಅಂತಾಕೆ ಇದೀಗ ಲಕ್ಷಾಂತರ ಮಂದಿಯ ಸ್ಫೂರ್ತಿಯ ಸೆಲೆಯಾಗಿದ್ದಾರೆ. ತನ್ನೀ ಪ್ರಯಾಣದ ಬಗ್ಗೆ ಆಕೆಯಾಡಿರುವ ನುಡಿಗಳು ಹೀಗಿವೆ…
“ಮೊದಲು ನಾನು ಟಿಟಿ ಆಡಿದ್ದು ಕೇವಲ ಮನಃರಂಜನೆಗಾಗಿ ಮಾತ್ರ. ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಕ್ಲಬ್ ಕೂಟದಲ್ಲಿ ಕಂಚು ಗೆದ್ದಾಗ ನಾನು ಅದನ್ನು ಗಂಭೀರವಾಗಿ ಪರಿಗಣಿಸಿದೆ. ಈ ಕ್ರೀಡೆಯಲ್ಲಿ ಏನಾದರೂ ಸಾಧಿಸಬಹುದೆಂಬ ಭರವಸೆ ಬಂತು. ಅದಾದ ಮೇಲೆ ಊಟ, ನಿದ್ರೆ ಹಿಂದೆ ಸರಿದು ಟಿಟಿಯ ಗುಂಗು ಹಿಡಿಯಿತು. ಇದಕ್ಕೆಲ್ಲಮುಖ್ಯ ಕಾರಣ ತಾನು 2005ರಲ್ಲಿ ಕಂಪ್ಯೂಟರ್ ಸೈನ್ಸ್ ಕಲಿಯಲು ಅಹ್ಮದಾಬಾದ್ಗೆ ತೆರಳಿದ್ದು. ಅಲ್ಲಿನ ಐಟಿಐ ಸಂಸ್ಥೆಯಲ್ಲಿ ಈ ಕ್ರೀಡೆಯ ಪರಿಚಯವಾಯಿತು.
ಇದನ್ನೂ ಓದಿ:ಭಾರತಕ್ಕೆ ಐತಿಹಾಸಿಕ ಗೆಲುವು : ಟೇಬಲ್ ಟೆನಿಸ್ ನಲ್ಲಿ ಬೆಳ್ಳಿ ಗೆದ್ದ ಭವೀನಾ
ಅಲ್ಲಿ ದೃಷ್ಟಿದೋಷ ಹೊಂದಿದ್ದ ಮಕ್ಕಳು ಟಿಟಿ ಆಡುವುದನ್ನು ನೋಡಿದೆ, ನನಗೂ ಸ್ಫೂರ್ತಿ ಬಂತು. 2008ರ ಅನ್ನುವ ಹೊತ್ತಿಗೆ ಟಿಟಿಯಲ್ಲಿ ನಿಜಕ್ಕೂ ಮುಳುಗಿದ್ದೆ. 2011ರಲ್ಲಿ ಬ್ಯಾಂಕಾಕ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಕೂಟದಲ್ಲಿ ಬೆಳ್ಳಿ ಪದಕ ಗೆದ್ದೆ. ಅಲ್ಲಿಂದ ಬದುಕೇ ಬದಲಾಯಿತು’. “ನಾನು ಅಂಗವಿಕಲೆ ಎಂದು ಕೊಳ್ಳುವುದಿಲ್ಲ. ನನ್ನಲ್ಲಿ ನಿರಂತರವಾಗಿ ಆತ್ಮ ವಿಶ್ವಾಸವಿದೆ. ಇಂದು ನಾನು, ನಾವು ಯಾರಿಗೂ ಕಡಿಮೆಯಿಲ್ಲ ಎಂದು ಸಾಬೀತು ಮಾಡಿದ್ದೇನೆ. ಪ್ಯಾರಾ ಟೇಬಲ್ ಟೆನಿಸ್ ಉಳಿದ ಕ್ರೀಡೆಗಳಷ್ಟೇ ಮುಂದುವರಿದಿದೆ’ ಎಂದು ಆತ್ಮವಿಶ್ವಾಸದಿಂದ ಭವಿನಾಬೆನ್ ಹೇಳಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ಗುಜರಾತ್ ವಿರುದ್ಧ ಭರ್ಜರಿ ಜಯ: ಆರ್ ಸಿಬಿ ಪ್ಲೇ ಆಫ್ ಕನಸು ಜೀವಂತ
MIvsKKR; ಹಲವು ಪ್ರಶ್ನೆಗಳಿವೆ, ಆದರೆ…: ಎಂಟನೇ ಸೋಲಿನ ಬಳಿಕ ಹಾರ್ದಿಕ್ ಪಾಂಡ್ಯ ಹೇಳಿದ್ದೇನು?
T20 World Cup; ಅಮೆರಿಕ ತಂಡದಲ್ಲಿ ಮೂಡಿಗೆರೆಯ ನಾಸ್ತುಷ್ ಕೆಂಜಿಗೆಗೆ ಸ್ಥಾನ
IPL;ಇಂದು ಆರ್ಸಿಬಿ ಎದುರಾಳಿ ಗುಜರಾತ್ ಟೈಟಾನ್ಸ್:ಪ್ಲೇಆಫ್ ಸಾಧ್ಯತೆಗೆ ಗೆಲುವು ಅನಿವಾರ್ಯ
England; 20 ವರ್ಷದ ಕ್ರಿಕೆಟಿಗ ನಿಗೂಢ ಸಾವು!
MUST WATCH
ಹೊಸ ಸೇರ್ಪಡೆ
IPL; ಗುಜರಾತ್ ವಿರುದ್ಧ ಭರ್ಜರಿ ಜಯ: ಆರ್ ಸಿಬಿ ಪ್ಲೇ ಆಫ್ ಕನಸು ಜೀವಂತ
Prahlad Joshi ವಿರುದ್ದ ರಣಕಹಳೆ : ದಿಂಗಾಲೇಶ್ವರ ಶ್ರೀ ವಿರುದ್ದ ಎಫ್ ಐಆರ್ ದಾಖಲು
H.D. Revanna ಬಂಧನ; ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ
BJP; ತೇಜಸ್ವಿ ಸೂರ್ಯ ನವರಾತ್ರಿಯ ಮುನ್ನಾದಿನ ಮೀನು ತಿನ್ನುತ್ತಾರೆ!: ಕಂಗನಾ ಭಾಷಣ ವೈರಲ್
Mumbai; ಚಿನ್ನ ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದ ಆಫ್ಘಾನ್ ಕಾನ್ಸುಲ್ ಜನರಲ್ ರಾಜೀನಾಮೆ