![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-415x252.jpg)
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
Team Udayavani, Apr 19, 2024, 6:50 AM IST
![LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್](https://www.udayavani.com/wp-content/uploads/2024/04/25-1-620x372.jpg)
ಲಕ್ನೋ: ಸದ್ಯ ಸಾಗುತ್ತಿರುವ ಐಪಿಎಲ್ನಲ್ಲಿ ಉತ್ತಮ ಹೋರಾಟ ನೀಡುತ್ತಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡವು ತನ್ನದೇ ನೆಲದಲ್ಲಿ ಶುಕ್ರವಾರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸವಾಲನ್ನು ಎದುರಿಸಲಿದೆ. ಸತತ ಸೋಲುಗಳಿಂದ ಕಂಗೆಟ್ಟಿರುವ ಲಕ್ನೋ ತಂಡ ಗೆಲುವಿನ ಟ್ರ್ಯಾಕ್ಗೆ ಮರಳಲು ಹಾತೊರೆಯುತ್ತಿದ್ದರೆ ಚೆನ್ನೈ ಗೆಲುವಿನ ಟ್ರ್ಯಾಕ್ನಲ್ಲಿ ಮುಂದುವರಿಯುವ ಉತ್ಸಾಹದಲ್ಲಿದೆ.
ರುತುರಾಜ್ ಗಾಯಕ್ವಾಡ್ ನೇತೃತ್ವದ ಚೆನ್ನೈ ತಂಡವು ಕಳೆದ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಸಂಭ್ರಮದಲ್ಲಿದ್ದು ಲಕ್ನೋ ವಿರುದ್ಧವೂ ಜಯಭೇರಿ ಬಾರಿಸಲು ಸನ್ನದ್ಧವಾಗಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಚೆನ್ನೈ ಬಲಿಷ್ಠವಾಗಿದೆ.
ಮತೀಶ ಪತಿರಣ ಈ ಹಿಂದಿನ ಪಂದ್ಯದಲ್ಲಿ ಶ್ರೇಷ್ಠ ನಿರ್ವಹಣೆ ನೀಡಿದ್ದರು. ಅವರಲ್ಲದೇ ಬಾಂಗ್ಲಾದ ಮುಸ್ತಾಫಿಜುರ್ ರೆಹಮಾನ್, ಸ್ಯಾಂಟ್ನರ್ ಉತ್ತಮ ದಾಳಿ ಸಂಘಟಿಸಬಲ್ಲರು. ಇಲ್ಲಿನ ಪಿಚ್ ಸ್ಪಿನ್ ಮತ್ತು ವೇಗದ ನೆರವಾಗುವ ಸಾಧ್ಯತೆ ಇರುವ ಕಾರಣ ರವೀಂದ್ರ ಜಡೇಜ ಪರಿಣಾಮ ಕಾರಿಯಾಗಿ ದಾಳಿ ನಡೆಸುವ ಸಾಧ್ಯತೆಯಿದೆ. ಅವರೊಂದಿಗೆ ಮತೀಶ ತೀಕ್ಷಣ ಅವರನ್ನೂ ಆಡಿಸುವ ಸಾಧ್ಯತೆಯಿದೆ.
ಈ ಋತುವಿನಲ್ಲಿ ಲಕ್ನೋದಲ್ಲಿ ಸರಾಸರಿ ಮೊತ್ತ 175 ಆಗಿದೆ. ಇದು ಇನ್ನುಳಿದ ಕಡೆಗಳಿಗಿಂತ 15ರಿಂದ 20 ರನ್ ಕಡಿಮೆಯೆಂದು ಹೇಳಬಹುದು. ಈ ಮೊತ್ತವನ್ನು ಗಮನಿಸಿದರೆ ಇಲ್ಲಿನ ಪಿಚ್ ಬ್ಯಾಟ್ಸ್ಮನ್ಗಳಿಗಿಂತ ಬೌಲರ್ಗಳಿಗೆ ನೆರವಾಗುವ ಸಾಧ್ಯತೆಯಿದೆ ಎಂದು ಹೇಳಬಹುದು.
ಲಕ್ನೋಗೆ ಗಾಯದ ಸಮಸ್ಯೆ:
ಲಕ್ನೋ ತಂಡ ಗಾಯದ ಸಮಸ್ಯೆಯನ್ನು ಎದುರಿಸುತ್ತಿದೆ. ತಂಡದ ಯುವ ವೇಗಿ ಮಾಯಾಂಕ್ ಯಾದವ್ ಗಾಯದಿಂದಾಗಿ ಕಳೆದ ಎರಡು ಪಂದ್ಯಗಳಲ್ಲಿ ಆಡಿರಲಿಲ್ಲ. ಬುಧವಾರ ತರಬೇತಿ ಆರಂಭಿಸಿರುವ 21ರ ಹರೆಯದ ಯಾದವ್ ಚೆನ್ನೈ ವಿರುದ್ಧ ಆಡುವ ಸಾಧ್ಯತೆಯಿದೆ. ಆದರೆ ಇದು ಇನ್ನೂ ಖಚಿತವಾಗಿಲ್ಲ. ಒಂದು ವೇಳೆ ಅವರು ಆಡಿದರೆ ಲಕ್ನೋ ಮೇಲುಗೈ ಸಾಧಿಸುವ ನಿರೀಕ್ಷೆಯಿದೆ.
ಸ್ಪಿನ್ ವಿಭಾಗದಲ್ಲಿ ರವಿ ಬಿಷ್ಣೋಯಿ ಬಿಗು ದಾಳಿ ಸಂಘ ಟಿಸು ತ್ತಿದ್ದಾರೆ. ಆದರೆ ತಂಡದ ಬ್ಯಾಟಿಂಗ್ ಹೇಳುವಷ್ಟು ಪರಿಣಾಮಕಾರಿಯಾಗಿಲ್ಲ. ಸತತ ಮೂರು ಅರ್ಧಶತಕಗಳ ಬಳಿಕ ಕ್ವಿಂಟನ್ ಕಾಕ್ ಕಳೆದ ಮೂರು ಪಂದ್ಯಗಳಲ್ಲಿ ನೀರಸ ಪ್ರದರ್ಶನ ನೀಡಿದ್ದರು. ಇಂಪ್ಯಾಕ್ಟ್ ಆಟಗಾರ ಕೃಣಾಲ್ ಪಾಂಡ್ಯ ಮಿಂಚಲಿಲ್ಲ. ನಾಯಕ ಕೆಎಲ್ ರಾಹುಲ್ ಅವರಿಂದ ಸ್ಫೋಟಕ ಆಟ ಇನ್ನಷ್ಟೇ ಬರಬೇಕಾಗಿದೆ. ಯುವ ಆಯುಷ್ ಬದೋನಿ, ನಿಕೋಲಾಸ್ ಪೂರಣ್ ಅಪಾಯಕಾರಿಯಾಗಿ ಕಾಣುತ್ತಿದ್ದಾರೆ.
ಪಿಚ್ ವರದಿ:
ಇಲ್ಲಿನ ಪಿಚ್ ನಿಧಾನಗತಿಯಿಂದ ಕೂಡಿದೆ. ಚೆಂಡು ಹಳತು ಆಗುತ್ತಿದ್ದಂತೆ ಬೌಲರ್ಗಳು ಪರಿಣಾಮಕಾರಿಯಾಗಿ ದಾಳಿ ಮಾಡಲು ಸಾಧ್ಯವಾಗುವ ಕಾರಣ ಬ್ಯಾಟ್ಸ್ಮನ್ಗಳಿಗೆ ರನ್ ಗಳಿಸಲು ಕಷ್ಟವಾಗುತ್ತದೆ. ಇಲ್ಲಿನ ಪಿಚ್ ಸ್ಪಿನ್ಗೂ ನೆರವಾಗಲಿದೆ. ಮೊದಲು ಬ್ಯಾಟಿಂಗ್ ಮಾಡುವ ತಂಡ ಹೆಚ್ಚಿನ ಯಶಸ್ಸು ಸಾಧಿಸುವ ಸಾಧ್ಯತೆಯಿದೆ. ಮೊದಲು ಬ್ಯಾಟಿಂಗ್ ಮಾಡಿದ ತಂಡ ಆರು ಪಂದ್ಯಗಳಲ್ಲಿ ಗೆದ್ದಿದ್ದರ ಚೇಸ ಮಾಡಿದ ವೇಳೆ ಮೂರು ತಂಡಗಳು ಗೆದ್ದಿವೆ. ಹೀಗಾಗಿ ಟಾಸ್ ಗೆದ್ದವರು ಮೊದಲು ಬ್ಯಾಟಿಂಗ್ ಮಾಡುವ ನಿರೀಕ್ಷೆಯಿದೆ.
ಟಾಪ್ ನ್ಯೂಸ್
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-415x252.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.