GT vs SRH: ಗುಜರಾತ್‌ಗೆ ಹೈದರಾಬಾದ್‌ ಟಾಸ್ಕ್


Team Udayavani, Mar 31, 2024, 7:30 AM IST

GT vs SRH: ಗುಜರಾತ್‌ಗೆ ಹೈದರಾಬಾದ್‌ ಟಾಸ್ಕ್

ಅಹ್ಮದಾಬಾದ್‌: ಮೊನ್ನೆಯಷ್ಟೇ ಐಪಿಎಲ್‌ ಇತಿ ಹಾಸದಲ್ಲೇ ಅತ್ಯಧಿಕ ರನ್‌ ಪೇರಿಸಿ ದಾಖಲೆಗಳನ್ನೆಲ್ಲ ಗುಡಿಸಿ ಹಾಕಿದ ಸನ್‌ರೈಸರ್ ಹೈದರಾಬಾದ್‌ ಮುಂದಿನ ಪಂದ್ಯದಲ್ಲಿ ಹೇಗೆ ಆಡೀತು ಎಂಬ ಕುತೂಹಲ

ಸಹಜ. ಇದಕ್ಕೆ ರವಿವಾರ ಸಂಜೆ ಉತ್ತರ ಲಭಿಸಲಿದೆ. ಪ್ಯಾಟ್‌ ಕಮಿನ್ಸ್‌ ಪಡೆ ಅಹ್ಮದಾಬಾದ್‌ನಲ್ಲಿ ಗುಜರಾತ್‌ ಟೈಟಾನ್ಸ್‌ ವಿರುದ್ಧ ಸೆಣಸಲಿದ್ದು, ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ.

ಎರಡೂ ಸಮಾನ ಸಾಧನೆಗೈದ ತಂಡಗಳು. ಗುಜರಾತ್‌ ಟೈಟಾನ್ಸ್‌ ಅಹ್ಮದಾಬಾದ್‌ನಲ್ಲಿ ಮುಂಬೈಗೆ ಸೋಲುಣಿಸಿದರೆ, ಚೆನ್ನೈಗೆ ಹೋಗಿ ಎಡವಿತ್ತು. ಇನ್ನೊಂದೆಡೆ ಸನ್‌ರೈಸರ್ ಕೋಲ್ಕತಾದಲ್ಲಿ ಕೆಕೆಆರ್‌ಗೆ ಶರಣಾದ ಬಳಿಕ ತವರಲ್ಲಿ ಮುಂಬೈ ಮೇಲೆ ಸವಾರಿ ಮಾಡಿ ಇತಿಹಾಸ ನಿರ್ಮಿಸಿತ್ತು.

ಬ್ಯಾಟಿಂಗ್‌ ಬಲಾಬಲದ ಲೆಕ್ಕಾಚಾರದಲ್ಲಿ ಗುಜರಾತ್‌ ಪಡೆ ಹೈದರಾಬಾದ್‌ಗೆ ಸಾಟಿಯಲ್ಲ. ಟ್ರ್ಯಾವಿಸ್‌ ಹೆಡ್‌, ಅಭಿಷೇಕ್‌ ಶರ್ಮ, ಹೆನ್ರಿಚ್‌ ಕ್ಲಾಸೆನ್‌ ಅಬ್ಬರಿಸಿದ ರೀತಿಗೆ ಕೇವಲ ಮುಂಬೈ ಮಾತ್ರವಲ್ಲ, ಕೂಟದ ಅಷ್ಟೂ ತಂಡಗಳು ದಂಗಾ ಗಿದ್ದವು. ಹೈದರಾಬಾದ್‌ ಬ್ಯಾಟಿಂಗ್‌ ಸರದಿಯಲ್ಲಿ ಇನ್ನೂ ಸಾಕಷ್ಟು ಮಂದಿ ಪ್ರಬಲರಿದ್ದಾರೆ. ಅಗರ್ವಾಲ್‌, ಮಾರ್ಕ್‌ರಮ್‌, ಅಬ್ದುಲ್‌ ಸಮದ್‌ ಕೂಡ ಅಪಾಯಕಾರಿಗಳೇ.

ಗುಜರಾತ್‌ ಬ್ಯಾಟಿಂಗ್‌ ಸರದಿ ಯಲ್ಲಿ ಒಂದಿಬ್ಬರಾದರೂ ಬಿರುಸಿನ ಆಟಕ್ಕೆ ಇಳಿಯಬೇಕಿದೆ. ಇಲ್ಲಿ ಗಿಲ್‌, ಸಾಹಾ, ಸಾಯಿ ಸುದರ್ಶನ್‌, ಕೃಣಾಲ್‌ ಪಾಂಡ್ಯ, ತೆವಾಟಿಯ, ಮಿಲ್ಲರ್‌ ಇದ್ದಾರೆ. ತವರಲ್ಲಿ ಮಿಂಚಲು ಇವರಿಗೆಲ್ಲ ಇದು ಮತ್ತೂಂದು ಅವಕಾಶ.

ಎರಡೂ ತಂಡಗಳ ಬೌಲಿಂಗ್‌ ವಿಭಾಗ ಸಾಮಾನ್ಯ. ಹೈದರಾ ಬಾದ್‌ ದಾಖಲೆ ಮೊತ್ತ ಪೇರಿ ಸಿಯೂ ಮುಂಬೈಗೆ 246 ರನ್‌ ಬಿಟ್ಟುಕೊಟ್ಟಿತ್ತು. ಉರುಳಿಸಿದ್ದು ಐದೇ ವಿಕೆಟ್‌. ಭುವನೇಶ್ವರ್‌, ಉನಾದ್ಕತ್‌, ಶಾಬಾಜ್‌, ಮಲಿಕ್‌, ಮಾರ್ಕಂಡೆ ಅವರೆಲ್ಲ ಸಿಕ್ಕಾಪಟ್ಟೆ ದುಬಾರಿಯಾಗಿದ್ದರು.

ಕಳೆದ ಪಂದ್ಯದಲ್ಲಿ ಚೆನ್ನೈಗೆ 206 ರನ್‌ ಬಿಟ್ಟುಕೊಟ್ಟದ್ದು ಗುಜರಾತ್‌ ಬೌಲಿಂಗ್‌ ಹಿನ್ನಡೆಗೆ ಸಾಕ್ಷಿ. ಉಮೇಶ್‌ ಯಾದವ್‌, ಅಜ್ಮತುಲ್ಲ, ರಶೀದ್‌ ಖಾನ್‌, ಸಾಯಿ ಕಿಶೋರ್‌, ಜಾನ್ಸನ್‌, ಮೋಹಿತ್‌ ಶರ್ಮ ತವರಿನ ಅಂಗಳದಲ್ಲಿ ಮ್ಯಾಜಿಕ್‌ ಮಾಡಿದರೆ ಗುಜರಾತ್‌ ಮೇಲುಗೈಯನ್ನು ನಿರೀಕ್ಷಿಸಲಡ್ಡಿಯಿಲ್ಲ.

ಪಿಚ್‌ ರಿಪೋರ್ಟ್‌ :

ಮೂಲತಃ ಇಲ್ಲಿನ ಪಿಚ್‌ ಬ್ಯಾಟರ್‌ಗಳಿಗೆ ಪ್ರಶಸ್ತ. ಆದರೆ ಮೊದಲ ಪಂದ್ಯದ ವೇಳೆ ಬೌಲರ್‌ಗಳಿಗೂ ನೆರವು ನೀಡಿತ್ತು. ಮೊದಲು ಬ್ಯಾಟಿಂಗ್‌ ಮಾಡಿದ ತಂಡದ ಎವರೇಜ್‌ ಸ್ಕೋರ್‌ 170 ರನ್‌. ಚೇಸಿಂಗ್‌ ಕಠಿನವೇನಲ್ಲ.

ಸಂಭಾವ್ಯ ತಂಡಗಳು :

ಗುಜರಾತ್‌: ಶುಭಮನ್‌ ಗಿಲ್‌ (ನಾಯಕ), ವೃದ್ಧಿಮಾನ್‌ ಸಾಹಾ, ಅಜ್ಮತುಲ್ಲ ಒಮರ್‌ಜಾಯ್‌, ಡೇವಿಡ್‌ ಮಿಲ್ಲರ್‌, ವಿಜಯ್‌ ಶಂಕರ್‌, ರಾಹುಲ್‌ ತೆವಾಟಿಯ, ರಶೀದ್‌ ಖಾನ್‌, ಆರ್‌. ಸಾಯಿ ಕಿಶೋರ್‌, ಉಮೇಶ್‌ ಯಾದವ್‌, ಮೋಹಿತ್‌ ಶರ್ಮ, ಸ್ಪೆನ್ಸರ್‌ ಜಾನ್ಸನ್‌.

ಹೈದರಾಬಾದ್‌: ಅಗರ್ವಾಲ್‌, ಟ್ರ್ಯಾವಿಸ್‌ ಹೆಡ್‌, ಅಭಿಷೇಕ್‌ ಶರ್ಮ, ಐಡನ್‌ ಮಾರ್ಕ್‌ರಮ್‌, ಹೆನ್ರಿಚ್‌ ಕ್ಲಾಸೆನ್‌, ಅಬ್ದುಲ್‌ ಸಮದ್‌, ಶಾಬಾಜ್‌ ಅಹ್ಮದ್‌, ಪ್ಯಾಟ್‌ ಕಮಿನ್ಸ್‌ (ನಾಯಕ), ಭುವನೇಶ್ವರ್‌ , ಮಾಯಾಂಕ್‌ ಮಾರ್ಕಂಡೆ, ಜೈದೇವ್‌ ಉನಾದ್ಕತ್‌.

 

ಟಾಪ್ ನ್ಯೂಸ್

Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್‌ ಇನ್ನಿಲ್ಲ

Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್‌ ಇನ್ನಿಲ್ಲ

ಕಾಡಾನೆ ತಡೆಗೆ ಜೋತಾಡುವ ಸೌರ ವಿದ್ಯುತ್‌ ಬೇಲಿ!

ಕಾಡಾನೆ ತಡೆಗೆ ಜೋತಾಡುವ ಸೌರ ವಿದ್ಯುತ್‌ ಬೇಲಿ!

Todays Horoscope: ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದ ಕೀಟಲೆಗಳು ಇರಲಿದೆ

Todays Horoscope: ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದ ಕೀಟಲೆಗಳು ಇರಲಿದೆ

8 ಸಂತ್ರಸ್ತೆಯರನ್ನು ಸಂಪರ್ಕಿಸಿದ ಎಸ್‌ಐಟಿ? ಇನ್ನಷ್ಟು ಎಫ್ಐಆರ್‌ ಸಾಧ್ಯತೆ

8 ಸಂತ್ರಸ್ತೆಯರನ್ನು ಸಂಪರ್ಕಿಸಿದ ಎಸ್‌ಐಟಿ? ಇನ್ನಷ್ಟು ಎಫ್ಐಆರ್‌ ಸಾಧ್ಯತೆ

Agumbe ಘಾಟಿಯಲ್ಲಿ ಸುರಂಗ ಮಾರ್ಗ ಯೋಜನೆ ಮುನ್ನೆಲೆಗೆ; ಕರಾವಳಿ-ಮಲೆನಾಡು ಬೆಸೆಯಲು ಸುರಂಗ

Agumbe ಘಾಟಿಯಲ್ಲಿ ಸುರಂಗ ಮಾರ್ಗ ಯೋಜನೆ ಮುನ್ನೆಲೆಗೆ; ಕರಾವಳಿ-ಮಲೆನಾಡು ಬೆಸೆಯಲು ಸುರಂಗ

ಇಂದು ರಾತ್ರಿಯಿಂದ ರಾಜ್ಯಾದ್ಯಂತ 108 ಆ್ಯಂಬುಲೆನ್ಸ್‌ ಸೇವೆ ಸ್ಥಗಿತ

ಇಂದು ರಾತ್ರಿಯಿಂದ ರಾಜ್ಯಾದ್ಯಂತ 108 ಆ್ಯಂಬುಲೆನ್ಸ್‌ ಸೇವೆ ಸ್ಥಗಿತ

ಸಿಹಿತಿಂಡಿ ನೀಡದ್ದಕ್ಕೆ ಮದುವೆಯೇ ರದ್ದು!

Madikeri ಸಿಹಿತಿಂಡಿ ನೀಡದ್ದಕ್ಕೆ ಮದುವೆಯೇ ರದ್ದು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqeqwewq-ew

IPL ; ಲಕ್ನೋ ವಿರುದ್ಧ ಕೆಕೆಆರ್ ಗೆ 98 ರನ್ ಜಯ; ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ

1-wqeqwqe

IPL; ಪಂಜಾಬ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆ 28 ರನ್‌ಗಳ ಜಯ

IPL: ಪ್ಲೇ ಆಫ್‌ ರೇಸ್‌ ನಡುವೆಯೇ ಚೆನ್ನೈ ತಂಡಕ್ಕೆ ಆಘಾತ; ತವರಿಗೆ ಮರಳಿದ ಸ್ಟಾರ್‌ ಬೌಲರ್

IPL: ಪ್ಲೇ ಆಫ್‌ ರೇಸ್‌ ನಡುವೆಯೇ ಚೆನ್ನೈ ತಂಡಕ್ಕೆ ಆಘಾತ; ತವರಿಗೆ ಮರಳಿದ ಸ್ಟಾರ್‌ ಬೌಲರ್

1-wwwqewq

RCB ವೆಂಟಿಲೇಟರ್ ಆಫ್ ಮಾಡಲಾಗಿದೆ, ಆದರೂ ಐಸಿಯುನಲ್ಲಿದೆ: ಅಜಯ್ ಜಡೇಜಾ

ICC ಚಾಂಪಿಯನ್ಸ್‌ ಟ್ರೋಫಿ ಆಡದಿದ್ದರೆ ಭಾರತ ತಂಡದ ಮೇಲೆ ಪರಿಣಾಮ: ಪಾಕ್‌ನ ರಶೀದ್‌ ಲತೀಫ್

ICC ಚಾಂಪಿಯನ್ಸ್‌ ಟ್ರೋಫಿ ಆಡದಿದ್ದರೆ ಭಾರತ ತಂಡದ ಮೇಲೆ ಪರಿಣಾಮ: ಪಾಕ್‌ನ ರಶೀದ್‌ ಲತೀಫ್

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್‌ ಇನ್ನಿಲ್ಲ

Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್‌ ಇನ್ನಿಲ್ಲ

ಕಾಡಾನೆ ತಡೆಗೆ ಜೋತಾಡುವ ಸೌರ ವಿದ್ಯುತ್‌ ಬೇಲಿ!

ಕಾಡಾನೆ ತಡೆಗೆ ಜೋತಾಡುವ ಸೌರ ವಿದ್ಯುತ್‌ ಬೇಲಿ!

Todays Horoscope: ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದ ಕೀಟಲೆಗಳು ಇರಲಿದೆ

Todays Horoscope: ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದ ಕೀಟಲೆಗಳು ಇರಲಿದೆ

8 ಸಂತ್ರಸ್ತೆಯರನ್ನು ಸಂಪರ್ಕಿಸಿದ ಎಸ್‌ಐಟಿ? ಇನ್ನಷ್ಟು ಎಫ್ಐಆರ್‌ ಸಾಧ್ಯತೆ

8 ಸಂತ್ರಸ್ತೆಯರನ್ನು ಸಂಪರ್ಕಿಸಿದ ಎಸ್‌ಐಟಿ? ಇನ್ನಷ್ಟು ಎಫ್ಐಆರ್‌ ಸಾಧ್ಯತೆ

Agumbe ಘಾಟಿಯಲ್ಲಿ ಸುರಂಗ ಮಾರ್ಗ ಯೋಜನೆ ಮುನ್ನೆಲೆಗೆ; ಕರಾವಳಿ-ಮಲೆನಾಡು ಬೆಸೆಯಲು ಸುರಂಗ

Agumbe ಘಾಟಿಯಲ್ಲಿ ಸುರಂಗ ಮಾರ್ಗ ಯೋಜನೆ ಮುನ್ನೆಲೆಗೆ; ಕರಾವಳಿ-ಮಲೆನಾಡು ಬೆಸೆಯಲು ಸುರಂಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.