ಕೆಕೆಆರ್ -ಡೆಲ್ಲಿ ಕಾದಾಟ : ಕೆಕೆಆರ್ ಗೆ 229 ರ ಟಾರ್ಗೆಟ್ ಕೊಟ್ಟ ಶ್ರೇಯಸ್ ಪಡೆ
Team Udayavani, Oct 3, 2020, 9:20 PM IST
ಶಾರ್ಜಾ : ಕೆಕೆಆರ್ -ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯಾಟದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಕೆಕೆಆರ್ ತಂಡಕ್ಕೆ ಡೆಲ್ಲಿ ಪ್ರಾರಂಭಿಕ ಇನ್ನಿಂಗ್ಸ್ ನಲ್ಲಿ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 229ರ ಗುರಿಯನ್ನು ಬಿಟ್ಟು ಕೊಟ್ಟಿದೆ.
ಡೆಲ್ಲಿ ಪರ ಪ್ರಾರಂಭಿಕ ಜೋಡಿಗಳಾಗಿ ಅಂಕಣಕ್ಕಿಳಿದ ಶಿಖರ್ ಧವನ್ ಹಾಗೂ ಪೃಥ್ವಿ ಶಾ ಉತ್ತಮ ಆಶದಾಯಕ ಆರಂಭ ನೀಡಿದರು. ಶಿಖರ್ ಧವನ್ ಸ್ಪೋಟಕ ಬ್ಯಾಟ್ ನಿಂದ 26 ರನ್ ಗಳಿಸಿ ಚಕ್ರವರ್ತಿ ಎಸೆತಕ್ಕೆ ಮಾರ್ಗನ್ ಕೈಗೆ ಕ್ಯಾಚ್ ಕೊಟ್ಟು ನಿರ್ಗಮಿಸಿದರು. ಪೃಥಿ ಶಾ ಅಮೋಘ 66 ರನ್ ದಾಖಲಿಸಿ ತಂಡಕ್ಕೆ ಆಸರೆ ನೀಡಿ ಕಮಲೇಶ್ ನಾಗರ್ಕೋಟಿ ಎಸೆತಕ್ಕೆ ಶುಭ್ ಮನ್ ಗಿಲ್ ಕೈಗೆ ಕ್ಯಾಚ್ ಕೊಟ್ಟು ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಕಪ್ತಾನ ಶ್ರೇಯಸ್ ಅಯ್ಯರ್ ಬಿರುಸಿನಿಂದ ಬ್ಯಾಟ್ ಬೀಸಿ 88 ರನ್ ಗಳಿಸಿ ಸ್ಕೋರ್ ಮುಂದುವರಿಕೆಗೆ ನೆರವಾದರು. ರಿಷಭ್ ಪಂತ್ (38) ಕಪ್ತಾನನಿಗೆ ಸ್ಕೋರ್ ಹೆಚ್ಚಳಕ್ಕೆ ಸಾಥ್ ನೀಡಿದರು.
ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ ಕೆಕೆಆರ್ ತಂಡಕ್ಕೆ 4 ನಷ್ಟಕ್ಕೆ 229 ರ ಗುರಿಯನ್ನು ಬಿಟ್ಟು ಕೊಟ್ಟಿದೆ.
ಕೆಕೆಆರ್ ಪರ ಆಂಡ್ರೆ ರಸ್ಸೆಲ್ 2, ವರುಣ್ ಚಕ್ರವರ್ತಿ, ಕಮಲೇಶ್ ನಾಗರ್ಕೋಟಿ ತಲಾ ವಿಕೆಟ್ ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!
LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ
Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ