![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
ಜಾಧವ್ ಫಿಟ್ನೆಸ್: ಕಾದು ನೋಡುವ ತಂತ್ರ
Team Udayavani, May 10, 2019, 6:01 AM IST
![Kedar-Jadhav](https://www.udayavani.com/wp-content/uploads/2019/05/Kedar-Jadhav-620x411.jpg)
ಹೊಸದಿಲ್ಲಿ: ಚೆನ್ನೈ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಕೇದಾರ್ ಜಾಧವ್ ಗಾಯಾಳಾಗಿ ಐಪಿಎಲ್ನಿಂದ ಹೊರಬಿದ್ದಿದ್ದಾರೆ. ಪಂಜಾಬ್ ವಿರುದ್ಧದ ಲೀಗ್ ಪಂದ್ಯದ ವೇಳೆ ಭುಜಕ್ಕೆ ಏಟು ಬಿದ್ದ ಕಾರಣ ಅವರೀಗ ವಿಶ್ರಾಂತಿಯಲ್ಲಿದ್ದಾರೆ.
ಆದರೆ ಕೇದಾರ್ ಜಾಧವ್ ವಿಶ್ವಕಪ್ ಪಂದ್ಯಾವಳಿಗಾಗಿ ಭಾರತ ತಂಡಕ್ಕೂ ಆಯ್ಕೆಯಾಗಿರುವುದರಿಂದ ಸಣ್ಣದೊಂದು ಆತಂಕ ಎದುರಾಗಿದೆ. ವಿಶ್ವಕಪ್ ಆರಂಭವಾಗುವುದರೊಳಗೆ ಅವರು ಚೇತರಿಸುವರೇ, ಇಲ್ಲವಾದರೆ ಬದಲಿ ಆಟಗಾರನನ್ನು ಆರಿಸಲಾಗುವುದೇ ಎಂಬ ಪ್ರಶ್ನೆಗಳು ಎದುರಾಗಿವೆ. ಇದಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಮೂಲವೊಂದರ ಪ್ರಕಾರ, ಜಾಧವ್ ಅವರ ದೈಹಿಕ ಕ್ಷಮತೆಯನ್ನು ಕಾದು ನೋಡಲು ನಿರ್ಧರಿಸಲಾಗಿದೆ. ಮೇ 23ರ ತನಕ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಲು ಅವಕಾಶವಿದೆ. ಹಾಗೆಯೇ ಭಾರತ ತಂಡ ಮೇ 22ರಂದು ಲಂಡನ್ಗೆ ವಿಮಾನ ಏರಲಿದ್ದು, ಅಲ್ಲಿಯ ತನಕ ಜಾಧವ್ಗೆ ಚೇತರಿಕೆಯ ಅವಕಾಶವಿದೆ.
ಅಕಸ್ಮಾತ್ ಜಾಧವ್ ಚೇತರಿಸಿಕೊಳ್ಳದೇ ಹೋದರೆ ಮೀಸಲು ಕ್ರಿಕೆಟಿಗರ ಯಾದಿಯಲ್ಲಿರುವ ಬ್ಯಾಟ್ಸ್ ಮನ್ ಅಂಬಾಟಿ ರಾಯುಡು ಆಯ್ಕೆಯಾಗಬಹುದು.
ಟಾಪ್ ನ್ಯೂಸ್
![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.