ಕಂಠೀರವದ ಟ್ರ್ಯಾಕ್ ಜಿಂದಾಲ್ ನುಂಗಿತ್ತಾ!
Team Udayavani, Aug 24, 2017, 11:47 AM IST
ಬೆಂಗಳೂರು: ಉದ್ಯಾನನಗರಿಯಲ್ಲಿರುವ ಕಂಠೀರವ ಕ್ರೀಡಾಂಗಣದಲ್ಲಿ ಅಥ್ಲೀಟ್ಗಳು ಮತ್ತೆ ಅತಂತ್ರರಾಗಿದ್ದಾರೆ. ಬುಧವಾರ ಅಭ್ಯಾಸ ನಡೆಸಲಾಗದೆ ತೀವ್ರ ಪರದಾಟ ನಡೆಸಿದ್ದಾರೆ. ಕ್ರೀಡಾ ಇಲಾಖೆ ಜತೆ ಒಪ್ಪಂದ ಅವಧಿ ಮುಗಿದಿದ್ದರೂ ಜಿಂದಾಲ್ ಎಗ್ಗಿಲ್ಲದೆ ಕ್ಲಬ್ ಫುಟ್ಬಾಲ್ ಪಂದ್ಯಗಳನ್ನು ನಡೆಸುತ್ತಾ ಬಂದಿದೆ. ತನಗೆ ಬೇಕಾದಂತೆ ಟ್ರ್ಯಾಕ್ ಮೇಲೆ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಹಾಕುತ್ತಿದೆ. ಇದರಿಂದಾಗಿ ಸುಮಾರು 300ಕ್ಕೂ ಹೆಚ್ಚು ಅಥ್ಲೀಟ್ಗಳು
ಅಭ್ಯಾಸ ನಡೆಸಲಾಗದೆ ಭಾರೀ ಒದ್ದಾಟ ನಡೆಸಿದ್ದಾರೆ. ಇದು ಮತ್ತೂಂದು ಜಗಳಕ್ಕೆ ಕಾರಣವಾಗಿದೆ.
ಕ್ರೀಡಾ ಇಲಾಖೆ ಮೌನವೇಕೆ?: ಕ್ರೀಡಾಂಗಣದಲ್ಲಿ ಫುಟ್ಬಾಲ್ ಗೆ ಅವಕಾಶ ನೀಡಬೇಡಿ ಎಂದು ಅಥ್ಲೀಟ್ಗಳು ಹಲವು ಬಾರಿ ಮನವಿ ಮಾಡಿದ್ದಾರೆ. ಆದರೆ ಕಿವಿ ಇದ್ದೂ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮೌನವಾಗಿದೆ. ಅಥ್ಲೀಟ್ಗಳ ಕೂಗು ಕೇಳಿದರೂ ನಿರ್ದೇಶಕ ಅನುಪಮ್
ಅಗರ್ವಾಲ್ ಇಲ್ಲಿವರೆಗೆ ಕ್ರಮ ತೆಗೆದುಕೊಂಡಿಲ್ಲ. ಪ್ರತಿ ಬಾರಿಯೂ ಅವರು ಜಿಂದಾಲ್ ಹಾಗೂ ಅಥ್ಲೀಟ್ಗಳ ನಡುವೆ ಸಭೆ ನಡೆಸಿದ್ದು ಬಿಟ್ಟರೆ ಬೇರೆ ಯಾವ ಬದಲಾವಣೆಯೂ ಆಗಿಲ್ಲ. ಅವಧಿ ಮುಗಿದರೂ ಜಿಂದಾಲ್ ಗೆ ಅವಕಾಶ ಸಿಕ್ಕಿದೆ. ಇದು ಹೇಗೆ? ಕ್ರೀಡಾ ಇಲಾಖೆಗೆ ಒಂದು ಕ್ಲಬ್ ತಂಡದ ಮೇಲೆ ಇರುವ ಅತಿಯಾದ ಪ್ರೀತಿ, ಮಮತೆ ಏಕೆ? ಎಂದು ಕ್ರೀಡಾ ಪ್ರೇಮಿಗಳು ತೀವ್ರ ಪ್ರಶ್ನಿಸಿದ್ದಾರೆ. ಅಥ್ಲೀಟ್ ಸಮಸ್ಯೆ ಕೇಳಿದ ಮಾಜಿ ಗೃಹಸಚಿವರು
ಕೆಪಿಸಿಸಿ ಅಧ್ಯಕ್ಷ ಹಾಗೂ ಕೆಎಎ ಅಧ್ಯಕ್ಷರಾಗಿರುವ ಡಾ.ಜಿ.ಪರಮೇಶ್ವರ್ ಹಠಾತ್ ಕಂಠೀರವ ಹೊರಾಂಗಣ ಕ್ರೀಡಾಂಗಣಕ್ಕೆ ಬುಧವಾರ ಭೇಟಿ ನೀಡಿ
ಪರಿಶೀಲನೆ ನಡೆಸಿದರು. ಅಥ್ಲೀಟ್ಗಳ, ಕೋಚ್ಗಳ ಸಮಸ್ಯೆ ಆಲಿಸಿದರು. ಇದೇ ವೇಳೆ ಅವರು ಅವಧಿ ಮುಗಿದಿದ್ದರೂ ಜಿಂದಾಲ್ಗೆ ಫುಟ್ಬಾಲ್
ಆಯೋಜಿಸಲು ಹೇಗೆ ಅವಕಾಶ ನೀಡಿದ್ದೀರಿ? ಎಂದು ಇಲಾಖೆ ನಿರ್ದೇಶಕ ಅನುಪಮ್ ಅಗರ್ವಾಲ್ರನ್ನು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಅಥ್ಲೀಟ್ಗಳ ಪರವಾಗಿ ಹೋರಾಟ ಮಾಡುವ ಭರವಸೆ ನೀಡಿ ಅಲ್ಲಿಂದ ತೆರಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್
PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್
IPL: ಆಟ ಮೆರೆದಾಟ; ಬ್ಯಾಟಿಂಗ್ ಅಷ್ಟೇ ಕ್ರಿಕೆಟ್ಟಾ?
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
MUST WATCH
ಹೊಸ ಸೇರ್ಪಡೆ
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ