ಹಾಂಕಾಂಗ್ ಬ್ಯಾಡ್ಮಿಂಟನ್ ಕೂಟದಿಂದ ಹಿಂದೆ ಸರಿದ ಕೆ.ಶ್ರೀಕಾಂತ್
Team Udayavani, Nov 19, 2017, 6:45 AM IST
ನವದೆಹಲಿ: ಇತ್ತೀಚೆಗೆ ಚೀನಾ ಬ್ಯಾಡ್ಮಿಂಟನ್ ಕೂಟದಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಕಳೆದುಕೊಂಡಿದ್ದ ಕೆ.ಶ್ರೀಕಾಂತ್ ಇದೀಗ ಮುಂಬರುವ ಹಾಂಕಾಂಗ್ ಓಪನ್ ಬ್ಯಾಡ್ಮಿಂಟನ್ ಕೂಟವನ್ನೂ ಕೂಡ ಕಳೆದುಕೊಳ್ಳಲಿದ್ದಾರೆ.
ಕೆ.ಶ್ರೀಕಾಂತ್ ಸದ್ಯ ಭುಜದ ನೋವಿಗೆ ಸಿಲುಕಿದ್ದು ವೈದ್ಯರು ಇವರಿಗೆ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿದ್ದಾರೆ. ಅಷ್ಟೇ ಅಲ್ಲ ಮುಂದೆ ದುಬೈ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಕೂಟ ಬರಲಿದೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡಿರುವ ಶ್ರೀಕಾಂತ್ ಫಿಟ್ ಆಗಿ ಮತ್ತೆ ಕಣಕ್ಕೆ ಇಳಿಯಲು ನಿರ್ಧರಿಸಿದ್ದಾರೆ. ಹೀಗಾಗಿ ಸದ್ಯದ ಕೂಟಗಳಿಂದ ಅವರು ಹಿಂದೆ ಸರಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.