ಖೇಲ್ರತ್ನಕ್ಕೆ ಹಂಪಿ, ಶ್ರೀಕಾಂತ್, ಬಿ. ಸಾಯಿಪ್ರಣೀತ್ ಹೆಸರು
Team Udayavani, Jul 2, 2021, 6:17 AM IST
ಹೊಸದಿಲ್ಲಿ: ಈ ಬಾರಿಯ ಖೇಲ್ರತ್ನ ಪ್ರಶಸ್ತಿಗೆ ಕ್ರೀಡಾಪಟುಗಳ ಯಾದಿ ಬೆಳೆಯುತ್ತ ಇದೆ. ಗುರುವಾರ ಚೆಸ್ ಹಾಗೂ ಬ್ಯಾಡ್ಮಿಂಟನ್ ಆಟಗಾರರ ಹೆಸರನ್ನು ನಾಮ ನಿರ್ದೇಶನ ಮಾಡಲಾಯಿತು.
ಇವರೆಂದರೆ ವಿಶ್ವ ರ್ಯಾಪಿಡ್ ಚೆಸ್ ಚಾಂಪಿಯನ್ ಕೊನೇರು ಹಂಪಿ, ಬ್ಯಾಡ್ಮಿಂಟನ್ ತಾರೆಯರಾದ ಬಿ. ಸಾಯಿ ಪ್ರಣೀತ್ ಮತ್ತು ಕೆ. ಶ್ರೀಕಾಂತ್.
ಚೆಸ್ ಜಿಎಂ ಹಾಗೂ ಕೋಚ್ ಅಭಿಜಿತ್ ಕುಂಟೆ ಹೆಸರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಸೂಚಿಸಲಾಯಿತು. ಹಾಗೆಯೇ ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಫ್ ಇಂಡಿಯಾ ಎಚ್.ಎಸ್. ಪ್ರಣಯ್, ಪ್ರಣವ್ ಜೆರ್ರಿ ಚೋಪ್ರಾ ಮತ್ತು ಸಮೀರ್ ವರ್ಮ ಅವರ ಹೆಸರನ್ನು ಅರ್ಜುನ ಪ್ರಶಸ್ತಿಗೆ ಸೂಚಿಸಿದೆ.
ಬ್ಯಾಡ್ಮಿಂಟನ್ ತರಬೇತುದಾರರಾದ ಎಸ್. ಮುರಳೀಧರನ್, ಪಿ.ಯು. ಭಾಸ್ಕರ ಬಾಬು, ಲೆರಾಯ್ ಡಿ’ಸಾ, ಪಿ.ವಿ.ವಿ. ಲಕ್ಷ್ಮೀ ಅವರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.