ಕೆಪಿಎಲ್ ಕ್ರಿಕೆಟ್: ಶಿವಮೊಗ್ಗಕ್ಕೆ ಸತತ 2ನೇ ಜಯ
Team Udayavani, Aug 19, 2019, 5:22 AM IST
ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಮ್ಮ ಶಿವಮೊಗ್ಗ ತಂಡ ಸತತ 2ನೇ ಗೆಲುವು ದಾಖಲಿಸಿದೆ. ರವಿವಾರ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಶಿವಮೊಗ್ಗ ತಂಡ ಮೈಸೂರು ವಾರಿಯರ್ಗೆ 14 ರನ್ನುಗಳ ಸೋಲುಣಿಸಿತು.
ಮೊದಲು ಬ್ಯಾಟಿಂಗ್ ನಡೆಸಿದ ನಮ್ಮ ಶಿವಮೊಗ್ಗ 7 ವಿಕೆಟಿಗೆ 166 ರನ್ ಪೇರಿಸಿದರೆ, ಮೈಸೂರು ವಾರಿಯರ್ 19.2 ಓವರ್ಗಳಲ್ಲಿ 152ಕ್ಕೆ ಆಲೌಟ್ ಆಯಿತು. ಶಿವಮೊಗ್ಗ ಶನಿವಾರದ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಗೆ ಸೋಲುಣಿಸಿತ್ತು.
ಪವನ್ ದೇಶಪಾಂಡೆ ಅವರ ಅರ್ಧ ಶತಕ ಶಿವಮೊಗ್ಗ ಇನ್ನಿಂಗ್ಸಿನ ಆಕರ್ಷಣೆಯಾಗಿತ್ತು. ಅವರು 42 ಎಸೆತಗಳಿಂದ 53 ರನ್ ಬಾರಿಸಿದರು (3 ಬೌಂಡರಿ, 2 ಸಿಕ್ಸರ್). ಮೈಸೂರು ಪರ ಆರಂಭಕಾರ ಕೆ. ಸಿದ್ಧಾರ್ಥ್ ಏಕಾಂಗಿಯಾಗಿ ಹೋರಾಡಿ 77 ರನ್ ಮಾಡಿದರು (54 ಎಸೆತ, 10 ಬೌಂಡರಿ, 1 ಸಿಕ್ಸರ್).
ಶಿವಮೊಗ್ಗ ತಂಡದ ಪ್ರದೀಪ್ ಟಿ. ಮತ್ತು ಎಚ್.ಎಸ್. ಶರತ್ ತಲಾ 3 ವಿಕೆಟ್, ನಾಯಕ ಅಭಿಮನ್ಯು ಮಿಥುನ್ ಮತ್ತು ಎಸ್.ಪಿ. ಮಂಜುನಾಥ್ ತಲಾ 2 ವಿಕೆಟ್ ಕಿತ್ತರು.
ಬೆಳ್ಳಾರಿಗೆ ರೋಚಕ ಜಯ
ಶನಿವಾರ ರಾತ್ರಿಯ ಪಂದ್ಯದಲ್ಲಿ ಬೆಳ್ಳಾರಿ ಟಸ್ಕರ್ ತಂಡ ಬೆಳಗಾವಿ ಪ್ಯಾಂಥರ್ ವಿರುದ್ಧ 6 ರನ್ನುಗಳ ರೋಚಕ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್ ನಡೆಸಿದ ಬೆಳ್ಳಾರಿ 5 ವಿಕೆಟಿಗೆ 144 ರನ್ ಹೊಡೆದರೆ, ಬೆಳಗಾವಿ 8 ವಿಕೆಟಿಗೆ 138 ರನ್ ಮಾಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿ ಕೋಲ್ಕತಾ ನೈಟ್ರೈಡರ್:ಪ್ಲೇ ಆಫ್ ತೇರ್ಗಡೆಗೆ ಹೋರಾಟ
IPL; ಗುಜರಾತ್ ವಿರುದ್ಧ ಭರ್ಜರಿ ಜಯ: ಆರ್ ಸಿಬಿ ಪ್ಲೇ ಆಫ್ ಕನಸು ಜೀವಂತ
MIvsKKR; ಹಲವು ಪ್ರಶ್ನೆಗಳಿವೆ, ಆದರೆ…: ಎಂಟನೇ ಸೋಲಿನ ಬಳಿಕ ಹಾರ್ದಿಕ್ ಪಾಂಡ್ಯ ಹೇಳಿದ್ದೇನು?
T20 World Cup; ಅಮೆರಿಕ ತಂಡದಲ್ಲಿ ಮೂಡಿಗೆರೆಯ ನಾಸ್ತುಷ್ ಕೆಂಜಿಗೆಗೆ ಸ್ಥಾನ
IPL;ಇಂದು ಆರ್ಸಿಬಿ ಎದುರಾಳಿ ಗುಜರಾತ್ ಟೈಟಾನ್ಸ್:ಪ್ಲೇಆಫ್ ಸಾಧ್ಯತೆಗೆ ಗೆಲುವು ಅನಿವಾರ್ಯ
MUST WATCH
ಹೊಸ ಸೇರ್ಪಡೆ
Temple; ಎಪ್ರಿಲ್ನಲ್ಲಿ ತಿರುಪತಿ ಹುಂಡಿಗೆ ಬಿದ್ದ ಕಾಣಿಕೆ ಎಷ್ಟು ಗೊತ್ತೇ?
State Government School; ದಸರಾ ರಜೆ ಕ್ರಿಸ್ಮಸ್ಗೆ ಹೊಂದಿಸಲು ಅವಕಾಶ
Bantwal ಪಣೋಲಿಬೈಲು: 23 ಸಾವಿರ ಕೋಲ ಸೇವೆಗಳ ಬುಕ್ಕಿಂಗ್
Rae Bareli ಯಲ್ಲಿ ಗೆಲ್ಲಲು ಯತ್ನಿಸಿ: ವಿವಾದ ತಂದ ರಷ್ಯಾದ ಕ್ಯಾಸ್ಪರೋವ್ ಸಲಹೆ
Missing ಪುತ್ತೂರು ಮಹಾಲಿಂಗೇಶ್ವರ ದೇಗುಲದ ವಠಾರದಲ್ಲಿದ್ದ ಹೋರಿ ಅಣ್ಣು ನಾಪತ್ತೆ!