LSGvsDC; ಪೂರನ್-ಅರ್ಷದ್ ವ್ಯರ್ಥ ಹೋರಾಟ; ಡೆಲ್ಲಿ ಸಮಾಧಾನದ ಗೆಲುವು: ಆರ್ ಸಿಬಿ ಹಾದಿ ಸಲೀಸು


Team Udayavani, May 14, 2024, 11:33 PM IST

LSGvsDC; ಪೂರನ್-ಅರ್ಷದ್ ವ್ಯರ್ಥ ಹೋರಾಟ; ಡೆಲ್ಲಿ ಸಮಾಧಾನದ ಗೆಲುವು: ಆರ್ ಸಿಬಿ ಹಾದಿ ಸಲೀಸು

ಹೊಸದಿಲ್ಲಿ: ಗೆಲ್ಲಲೇಬೇಕಾದ ಪಂದ್ಯದಲ್ಲಿ ಸೋಲು ಕಂಡ ಲಕ್ನೋ ಸೂಪರ್ ಜೈಂಟ್ಸ್ ತಂಡವು ಪ್ಲೇ ಆಫ್ ಕನಸನ್ನು ಬಹುತೇಕ ಭಗ್ನ ಮಾಡಿಕೊಂಡಿದೆ. ಕೊನೆಯ ಲೀಗ್ ಪಂದ್ಯದಲ್ಲಿ ಗೆಲುವು ಸಾಧಿಸಿದ ಡೆಲ್ಲಿ ತಂಡವು ಸಮಾಧಾನದಿಂದ ಕೂಟ ಮುಗಿಸಿದೆ. ಈ ಪಂದ್ಯದ ಮೇಲೆ ಕಣ್ಣಿಟ್ಟಿದ್ದ ಆರ್ ಸಿಬಿ ನಿಟ್ಟುಸಿರು ಬಿಟ್ಟಿದೆ.

ಅರುಣ್ ಜೇಟ್ಲಿ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿದರೆ, ಲಕ್ನೋ 189 ರನ್ ಮಾತ್ರ ಗಳಿಸಲು ಶಕ್ತವಾಯಿತು.

ಬೌಲಿಂಗ್‌ ಆಯ್ದುಕೊಂಡ ಲಕ್ನೋ ದ್ವಿತೀಯ ಎಸೆತದಲ್ಲೇ ಭರ್ಜರಿ ಯಶಸ್ಸು ಸಾಧಿಸಿತು. ಅಪಾಯಕಾರಿ ಆರಂಭಕಾರ ಜೇಕ್‌ ಫ್ರೆàಸರ್‌ ಮೆಕ್‌ಗರ್ಕ್‌ ಅವರನ್ನು ಅರ್ಷದ್‌ ಖಾನ್‌ ಖಾತೆ ತೆರೆಯುವ ಮೊದಲೇ ಪೆವಿಲಿಯನ್‌ಗೆ ಅಟ್ಟಿದರು. ಇದರೊಂದಿಗೆ ಡೆಲ್ಲಿ ಈ ಐಪಿಎಲ್‌ ಪವರ್‌ ಪ್ಲೇಯಲ್ಲಿ ಅತ್ಯಧಿಕ ವಿಕೆಟ್‌ ಕಳೆದುಕೊಂಡ ದಾಖಲೆಯನ್ನು 28ಕ್ಕೆ ಏರಿಸಿತು.

ದ್ವಿತೀಯ ವಿಕೆಟಿಗೆ ಜತೆಗೂಡಿದ ಅಭಿಷೇಕ್‌ ಪೊರೆಲ್‌ ಮತ್ತು ಶೈ ಹೋಪ್‌ ಭರವಸೆ ಮೂಡಿಸಿದರು. ಪವರ್‌ ಪ್ಲೇ ಅವಧಿಯಲ್ಲಿ ತಂಡಕ್ಕೆ ಹೆಚ್ಚಿನ ಹಾನಿ ಆಗದಂತೆ ತಡೆದರು. ಅಷ್ಟೇ ಅಲ್ಲ, ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸಿ, 6 ಓವರ್‌ಗಳಲ್ಲಿ ಮೊತ್ತವನ್ನು 73ಕ್ಕೆ ಏರಿಸಿದರು. ಡೆಲ್ಲಿ ಈವರೆಗಿನ 17 ಆವೃತ್ತಿಗಳ ಪವರ್‌ ಪ್ಲೇಯಲ್ಲಿ 70 ಪ್ಲಸ್‌ ರನ್‌ ಬಾರಿಸಿದ 8ನೇ ನಿದರ್ಶನ ಇದಾಗಿದೆ. ಇದರಲ್ಲಿ 4 ಪ್ರಸಕ್ತ ಋತುವಿನಲ್ಲೇ ದಾಖಲಾಗಿರುವುದು ವಿಶೇಷ.

ಪೊರೆಲ್‌-ಹೋಪ್‌ 92 ರನ್‌ ಜತೆಯಾಟ ನಡೆಸಿದರು. ಪೊರೆಲ್‌ ಈ ಸೀಸನ್‌ನ 2ನೇ ಅರ್ಧ ಶತಕದೊಂದಿಗೆ ಮಿಂಚಿದರು. ಇವರ ಕೊಡುಗೆ 33 ಎಸೆತಗಳಿಂದ 58 ರನ್‌ (5 ಬೌಂಡರಿ, 4 ಸಿಕ್ಸರ್‌). ಹೋಪ್‌ 38 ರನ್‌ ಹೊಡೆದರು (27 ಎಸೆತ, 3 ಬೌಂಡರಿ, 2 ಸಿಕ್ಸರ್‌).

ಅರ್ಧ ಹಾದಿ ಕ್ರಮಿಸುವಾಗ ಡೆಲ್ಲಿ 2ಕ್ಕೆ 111 ರನ್‌ ಮಾಡಿತ್ತು. ಆದರೆ ಅನಂತರದ 5 ಓವರ್‌ಗಳಲ್ಲಿ ಡೆಲ್ಲಿ ರನ್‌ ಗತಿ ಕುಂಟಿತಗೊಂಡಿತು. ಕೇವಲ 25 ರನ್‌ ಬಂತು. ನಾಯಕ ರಿಷಭ್‌ ಪಂತ್‌ 33 ರನ್‌ ಕೊಡುಗೆ ಸಲ್ಲಿಸಿದರು. ಡೆತ್‌ ಓವರ್‌ಗಳಲ್ಲಿ ಟ್ರಿಸ್ಟನ್‌ ಸ್ಟಬ್ಸ್ ಸಿಡಿದು ನಿಂತರು. ಇವರ ಗಳಿಕೆ ಅಜೇಯ 57 ರನ್‌. 25 ಎಸೆತ ಎದುರಿಸಿದ ಅವರು 3 ಬೌಂಡರಿ ಹಾಗೂ 4 ಸಿಕ್ಸರ್‌ ಬಾರಿಸಿದರು. ಇವರ ಬಿರುಸಿನ ಬ್ಯಾಟಿಂಗ್‌ನಿಂದಾಗಿ ಕೊನೆಯ 5 ಓವರ್‌ಗಳಲ್ಲಿ 72 ರನ್‌ ಹರಿದು ಬಂತು.

ಸತತ ವಿಕೆಟ್ ಕಳೆದುಕೊಂಡ ಲಕ್ನೋ: ದೊಡ್ಡ ಮೊತ್ತ ಚೇಸ್ ಮಾಡಲು ಬಂದ ಲಕ್ನೋ ಸತತ ವಿಕೆಟ್ ಕಳೆದುಕೊಂಡಿತು. ಮೊದಲು ಓವರ್ ನಲ್ಲಿಯೇ ನಾಯಕ ರಾಹುಲ್ ವಾಪಾಸಾದರು. ಡಿಕಾಕ್ ಕೂಡಾ 12 ರನ್ ಮಾಡಿ ಮರಳಿದರು. ಸ್ಟೋಯಿನಸ್ ಮತ್ತು ಹೂಡಾ ಕೂಡಾ ಹೆಚ್ಚು ಹೊತ್ತು ನಿಲ್ಲಲಿಲ್ಲ.

ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಪೂರನ್ ಮಾತ್ರ ದಿಟ್ಟ ಹೋರಾಟ ನಡೆಸಿದರು. ಕೇವಲ 27 ಎಸೆತ ಎದುರಿಸಿದ ಪೂರನ್ 61 ರನ್ ಮಾಡಿದರು. ಪೂರನ್ ಔಟಾಗುತ್ತಿದ್ದಂತೆ ಲಕ್ನೋ ಸೋಲು ಖಚಿತವಾಗಿತ್ತು. ಆದರೆ ಕೊನೆಯಲ್ಲಿ ಅರ್ಷದ್ ಖಾನ್ ಒಂದಷ್ಟು ಹೋರಾಟ ನಡೆಸಿದರು. 33 ಎಸೆತಗಳಿಂದ ಅರ್ಷದ್ ಅಜೇಯ 55 ರನ್ ಹೊಡೆದರು.

ಲಕ್ನೋ ಸೋಲಿನೊಂದಿಗೆ ಆರ್ ಸಿಬಿ ಪ್ಲೇ ಆಫ್ ಹಾದಿ ಮತ್ತಷ್ಟು ಸಲೀಸಾಗಿದೆ. ಈಗ ಲಕ್ನೋ ಭಯವಿಲ್ಲದೆ ಚೆನ್ನೈ ವಿರುದ್ದ ಗೆದ್ದು ಆರ್ ಸಿಬಿ ಪ್ಲೇ ಆಫ್ ತಲುಪಬಹುದು.

ಟಾಪ್ ನ್ಯೂಸ್

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

1–vi

Lancashire ಪರ ಆಡುವ ವೆಂಕಟೇಶ್‌ ಅಯ್ಯರ್‌

1-srrr

Women’s Asia Cup: ಪಾಕ್ ವಿರುದ್ಧ ರೋಚಕ ಜಯ; ಫೈನಲ್‌ಗೆ ಲಂಕಾ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.