![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
ಮಲೇಶ್ಯ ಮಾಸ್ಟರ್ ಬ್ಯಾಡ್ಮಿಂಟನ್: ಲಕ್ಷ್ಯ ಸೇನ್ಗೆ ಸೋಲು
ರಾಂಕಿರೆಡ್ಡಿ, ಚಿರಾಗ್ ಶೆಟ್ಟಿಗೆ ಮೊದಲ ಸುತ್ತಿನಲ್ಲಿ ಆಘಾತ
Team Udayavani, Jan 8, 2020, 6:14 AM IST
![LAKSYA-SEN](https://www.udayavani.com/wp-content/uploads/2020/01/LAKSYA-SEN-620x447.jpg)
ಕೌಲಾಲಂಪುರ: ಭಾರತದ ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಮಲೇಶ್ಯ ಮಾಸ್ಟರ್ ಬ್ಯಾಡ್ಮಿಂಟನ್ ಕೂಟದ ಮೊದಲ ಸುತ್ತಿನಲ್ಲಿಯೇ ಸೋತು ನಿರಾಶೆಗೊಳಿಸಿದ್ದಾರೆ. ಇದೇ ವೇಳೆ ಲಕ್ಷ್ಯಸೇನ್ ಮುಖ್ಯ ಡ್ರಾದಲ್ಲಿ ಆಡಲು ವಿಫಲರಾಗಿದ್ದಾರೆ.
ವಿಶ್ವದ 12ನೇ ರ್ಯಾಂಕಿನ ಡಬಲ್ಸ್ ಜೋಡಿ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಕಠಿನ ಹೋರಾಟದಲ್ಲಿ ಮಲೇಶ್ಯದ ಆಂಗ್ ಯ್ಯು ಸಿನ್ ಮತ್ತು ತಿಯೊ ಇ ಯಿ ಅವರೆದುರು 15-21, 21-18, 15-21 ಗೇಮ್ಗಳಿಂದ ಶರಣಾದರು. ಪೂಜಾ ದಂಡು ಮತ್ತು ಸಂಜನಾ ಸಂತೋಷ್ ಅವರನ್ನು ಒಳಗೊಂಡ ವನಿತಾ ಡಬಲ್ಸ್ ಜೋಡಿ ಈ ಮೊದಲು ಅರ್ಹತಾ ಸುತ್ತಿನಲ್ಲಿಯೇ ಸೋತಿತ್ತು.
ಕಶ್ಯಪ್ಗೆ ಕೆಂಟೊ ಸವಾಲು
ಪಾರುಪಳ್ಳಿ ಕಶ್ಯಪ್ ಅವರು ಬುಧವಾರ ಅಗ್ರ ಶ್ರೇಯಾಂಕದ ಕೆಂಟೊ ಮೊಮೊಟ ಅವರನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದ್ದಾರೆ. ಕಿದಂಬಿ ಶ್ರೀಕಾಂತ್ ಇನ್ನೊಂದು ಪಂದ್ಯದಲ್ಲಿ ದ್ವಿತೀಯ ಶ್ರೇಯಾಂಕದ ಚೈನೀಸ್ ತೈಪೆಯ ಚೊ ತಿಯಾನ್ ಚೆನ್ ಅವರ ಸವಾಲಿಗೆ ಉತ್ತರಿಸಲಿದ್ದಾರೆ. ಸಮೀರ್ ವರ್ಮ, ಎಚ್.ಎಸ್. ಪ್ರಣಯ್ ಮತ್ತು ಬಿ. ಸಾಯಿಪ್ರಣೀತ್ ಕೂಡ ಬುಧವಾರ ಮೊದಲ ಸುತ್ತಿನಲ್ಲಿ ಆಡಲಿದ್ದಾರೆ.
ವನಿತೆಯರ ಸಿಂಗಲ್ಸ್ನಲ್ಲಿ ಆರನೇ ಶ್ರೇಯಾಂಕದ ಪಿ.ವಿ. ಸಿಂಧು ರಶ್ಯದ ಎವ್ಗೇನಿಯಾ ಕೊಸೆಟ್ಸ್ ಕಾಯ ಅವರನ್ನು ಎದುರಿಸಲಿದ್ದರೆ ಸೈನಾ ನೆಹ್ವಾಲ್ ಅವರು ಬೆಲ್ಜಿಯಂನ ಲಿಯಾನ್ನೆ ತಾನ್ ಅವರ ಸವಾಲಿಗೆ ಉತ್ತರಿಸಲಿದ್ದಾರೆ.
ಕೂಟದಿಂದ ಹೊರಬಿದ್ದ ಸೇನ್
ಭರವಸೆಯ ಶಟ್ಲರ್ ಲಕ್ಷ್ಯಸೇನ್ ಮಲೇಶ್ಯ ಮಾಸ್ಟರ್ ಕೂಟದ ಅರ್ಹತಾ ಸುತ್ತಿನಲ್ಲಿ ಸೋತು ಕೂಟದಿಂದ ಹೊರಬಿದ್ದಿದ್ದಾರೆ. ಮೂರು ಗೇಮ್ಗಳ ಕಠಿನ ಹೋರಾಟದಲ್ಲಿ ಅವರು ಡೆನ್ಮಾರ್ಕ್ನ ಹ್ಯಾನ್ಸ್ ಕ್ರಿಸ್ಟಿಯನ್ ಸೋಲ್ಬರ್ಗ್ ವಿಟ್ಟಿಂಗಸ್ ಅವರೆದುರು 21-11, 18-21, 14-21 ಗೇಮ್ಗಳಿಂದ ಶರಣಾದರು.
ಸೇನ್ ಅವರ ತಂಡಸದಸ್ಯ ಶುಭಂಕರ್ ದೇವ್ ಕೂಡ ಮುಖ್ಯ ಡ್ರಾಕ್ಕೆ ತೇರ್ಗಡೆಯಾಗಲು ವಿಫಲರಾಗಿದ್ದಾರೆ. ಅವರು ಅರ್ಹತಾ ಸುತ್ತಿನಲ್ಲಿ ಮಲೇಶ್ಯದ ಲಿಯು ಡ್ಯಾರೆನ್ ಅವರಿಗೆ 15-21, 15-21 ಗೇಮ್ಗಳಿಂದ ಸೋತು ಹೊರಬಿದ್ದರು.
ಟಾಪ್ ನ್ಯೂಸ್
![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.