“ಜೂನಿಯರ್ ಸ್ಟೇನ್’ ಖ್ಯಾತಿಯ ಕರಣ್ ತಿವಾರಿ ಆತ್ಮಹತ್ಯೆ
Team Udayavani, Aug 12, 2020, 9:20 PM IST
ಮುಂಬಯಿ: ಮುಂಬಯಿಯ ಕ್ಲಬ್ ಕ್ರಿಕೆಟಿಗ, “ಜೂನಿಯರ್ ಸ್ಟೇನ್’ ಖ್ಯಾತಿಯ ಕರಣ್ ತಿವಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಮವಾರ ರಾತ್ರಿ ಮಲಾಡ್ ನಿವಾಸದಲ್ಲಿ ಅವರು ನೇಣು ಬಿಗಿದು ಈ ಕೃತ್ಯವೆಸಗಿದ್ದಾರೆ. ಈ ಬಾರಿಯ ಐಪಿಎಲ್ನಲ್ಲಿ ಅವಕಾಶ ಲಭಿಸದಿದ್ದುದರಿಂದ ಕರಣ್ ಖನ್ನತೆಗೆ ಒಳಗಾಗಿದ್ದರು ಎಂದು ಅವರ ಆತ್ಮೀಯ ಮಿತ್ರರೊಬ್ಬರು ಹೇಳಿದ್ದಾರೆ.
ದಕ್ಷಿಣ ಆಫ್ರಿಕಾದ ಡೇಲ್ ಸ್ಟೇನ್ ಶೈಲಿಯಲ್ಲೇ ಬೌಲಿಂಗ್ ನಡೆಸುತ್ತಿದ್ದ ಕರಣ್ ತಿವಾರಿ, ಆತ್ಮಹತ್ಯೆಯ ನಿರ್ಧಾರಕ್ಕೂ ಮೊದಲು ಉದಯಪುರದಲ್ಲಿದ್ದ ತನ್ನ ಆತ್ಮೀಯ ಗೆಳೆಯನಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಕೂಡಲೇ ಅವರು ಮುಂಬಯಿಯಲ್ಲೇ ಇದ್ದ ಕರಣ್ ಸೋದರಿಗೆ ವಿಷಯ ಮುಟ್ಟಿಸಿದರು. ಅವರು ತಾಯಿಗೆ ಸುದ್ದಿ ರವಾನಿಸಿದರು. ಆದರೆ ಆಗಲೇ ವಿಳಂಬವಾಗಿತ್ತು. ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಕರಣ್ ಮೃತಪಟ್ಟರು.
ಬಿಸಿಸಿಐ ನಿಯಮದ ಪ್ರಕಾರ ಯಾವುದೇ ವಯೋಮಿತಿಯ ಕ್ರಿಕೆಟ್ನಲ್ಲಿ ರಾಜ್ಯವನ್ನು ಪ್ರತಿನಿಧಿಸಿದರಷ್ಟೇ ಅವರು ಐಪಿಎಲ್ ಹರಾಜು ವ್ಯಾಪ್ತಿಗೆ ಬರುತ್ತಾರೆ. ಆದರೆ ಕರಣ್ ತಿವಾರಿ ಯಾವುದೇ ರಾಜ್ಯ ತಂಡವನ್ನು ಪ್ರತಿನಿಧಿಸಿಲ್ಲ. ಮುಂಬಯಿ ಇಂಡಿಯನ್ಸ್ ಅಭ್ಯಾಸದ ವೇಳೆ ಅವರು ನೆಟ್ ಬೌಲರ್ ಆಗಿ ಕಾಣಿಸಿಕೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ